IPL 2024 ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಇದು ಆರ್ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ RCB ಹವಾ ಸೃಷ್ಟಿಸಿತ್ತು. ಈ ಮಾತಿಗೆ ತಕ್ಕಂತೆ ಮೊದಲ ಹಂತದಲ್ಲಿRCB ಆಟಗಾರರುಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ರು. 7 ಸೋಲು ಕಂಡು ಇನ್ನೇನು IPL ನಿಂದ ಹೊರ ಬೀಳುತ್ತೆ ಅಂತಾ RCB ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇದು ಮುಗಿದು ಹೋದ ಅಧ್ಯಾಯ ಎಂದು ಬೇಸರ ಹೊರಹಾಕಿದ್ದರು.
![](https://guaranteenews.com/wp-content/uploads/2024/05/WhatsApp-Image-2024-05-20-at-7.55.54-PM-1-1024x768.jpeg)
ಆದರೆ ಆ ಬಳಿಕ ನಡೆದದ್ದೇ ಬೇರೆ. ಪವಾಡ ಸಂಭವಿಸಿದೆ ಆರ್ಸಿಬಿ ಸತತವಾಗಿ 6 ಪಂದ್ಯಗಳನ್ನು ಒಟ್ಟು 7 ಪಂದ್ಯಗಳಲ್ಲಿ ಜಯ ಸಾಧಿಸಿ ಕೊನೆಯ ಸ್ಥಾನದಿಂದ ಮೇಲೆದ್ದು ಅಚ್ಚರಿ ಎಂಬಂತೆ ಪ್ಲೇ ಆಫ್ ಪ್ರವೇಶಿಸಿತ್ತು. ಇದೀಗ ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್(RCB vs RR) ವಿರುದ್ಧ ಆಡಲಿದೆ.
![](https://guaranteenews.com/wp-content/uploads/2024/05/virat-kohli-18345142-16x9_0.webp)
ಆರ್ಸಿಬಿ ತಂಡದ ಆಟಗಾರರು ರಾಜಸ್ಥಾನ್ ವಿರುದ್ಧ ಎಲಿಮಿನೇಟರ್ ಪಂದ್ಯವನ್ನಾಡಲು ಈಗಾಗಲೇ ಅಹಮದಾಬಾದ್ಗೆ ತಲುಪಿದ್ದಾರೆ. ಸೋಮವಾರ ಆಟಗಾರರು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಫುಟ್ಬಾಲ್ ಆಡುವ ಮೂಲಕ ದೈಹಿಕ ಕಸರತ್ತು ನಡೆಸಿ ಈ ಸಲ ಕಪ್ ನಮ್ಮದೆ ಅಂತಾ ಎದುರಾಳಿ ಎದುರಾಳಿ ತಂಡಗಳಿಗೆ ಖಡಕ್ ವಾರ್ನ್ ಮಾಡುತ್ತಿದ್ದಾರೆ. ಆಟಗಾರರು 2 ತಂಡಗಳಾಗಿ ಫುಟ್ಬಾಲ್ ಆಡಿದ ವಿಡಿಯೊವನ್ನು ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ.