ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು ಮಾಡಿತ್ತು. ಹಾಗೆಯೇ ವೆಬ್ ಸೈಟ್ ಮೂಲಕವೂ ಓದುಗರನ್ನು ಗ್ಯಾರಂಟಿ ನ್ಯೂಸ್ ತಲುಪಿತ್ತು. ಇದೀಗ ಸ್ಯಾಟಲೈಟ್ ವಾಹಿನಿ ಮೂಲಕ ಕರ್ನಾಟಕದಾದ್ಯಂತ ಲಭ್ಯವಿದೆ.

ಕನ್ನಡಿಗರ ಮನೆ ಮನೆಯಲ್ಲೂ ಮನೆಮಾತಾಗಲು ನಿಮ್ಮ ಮುಂದೆ ಈಗ ಗ್ಯಾರಂಟಿ ನ್ಯೂಸ್ ಚಾನೆಲ್ ಬರ್ತಿದ್ದು, ಇದರ ನೂತನ ಕಟ್ಟಡದ ಉದ್ಘಾಟನೆಗೆ ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಆಗಮಿಸಿದ್ರು.. ಬೆಳಗ್ಗೆಯಿಂದ ಸುದೀಪ್ಗಾಗಿ ಕಾದು ಕುಳಿತಿದ್ದ ಗ್ಯಾರಂಟಿ ಸಿಬ್ಬಂದಿ ಅವರು ಆಗಮಿಸುತ್ತಿದ್ದಂತೆ ಚಾನೆಲ್ ಉದ್ಘಾಟನೆಯ ಜೊತೆ ಮತ್ತಷ್ಟು ಜೋಶ್ ತುಂಬಿಕೊಂಡು ಬರ ಮಾಡಿಕೊಂಡ್ರು.
ಅಲ್ಲದೇ ಸುದೀಪ್ ಅವ್ರು ಬರ್ತಿದ್ದಾರೆ ಅಂತಿದ್ದಂತೆ ಅಕ್ಕ ಪಕ್ಕದ ಕಚೇರಿಯ ಸಿಬ್ಬಂದಿಯೆಲ್ಲಾ ಅವರನ್ನು ಕಣ್ತುಂಬಿಕೊಳ್ಳುಲು ಕಾತುರರಾಗಿದ್ರು. ಬಾದ್ ಶಾ ಬರ್ತಿದ್ದಂತೆ ಗ್ಯಾರಂಟಿ ಗರ್ಲ್ಸ್ ಎಲ್ಲಾ ರೋಸ್ ಕೊಟ್ಟು ವೆಲ್ಕಂ ಮಾಡಿಕೊಂಡ್ರು.
ಬಾದ್ ಶಾ ಕಿಚ್ಚ ಸುದೀಪ್ ಗ್ಯಾರಂಟಿ ನ್ಯೂಸ್ ಚಾನೆಲ್ನ ಉದ್ಘಾಟನೆಗೆ ಟೇಪ್ ಕತ್ತರಿಸಿ, ಕಚೇರಿಯ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿ ವೀಕ್ಷಿಸಿದ್ರು. ಬಳಿಕ ಕೇಕ್ ಕತ್ತರಿಸಿ ಸಿಬ್ಬಂದಿ ಜೊತೆ ಕೆಲ ಕಾಲ ಕೂತು ಮಾತಾಡಿ ಗ್ಯಾರಂಟಿ ನ್ಯೂಸ್ ಚಾನೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.. ಅಷ್ಟೇ ಅಲ್ಲದೆ ಗ್ಯಾರಂಟಿ ಸಿಬ್ಬಂದಿಯ ಸಾದಾ ಸೀದಾ ಪ್ರಶ್ನೆಗಳಿಗೆ ಕಿಚ್ಚ ಕೂಡಾ ಅಷ್ಟೇ ಸರಳವಾಗಿ ಉತ್ತರಿಸಿದ್ರು.
ಗ್ಯಾರಂಟಿ ನ್ಯೂಸ್ ಎಂಡಿ ಟಿಎಂ ಶಿವಸ್ವಾಮಿ, ಪ್ರಧಾನ ಸಂಪಾದಕರಾದ ರಾಧಾ ಹಿರೇಗೌಡರ್, ಹಿರಿಯ ಸಂಪಾದಕರಾದ ಅರವಿಂದ ಸಾಗರ್, ಸಂಪಾದಕರಾದ ಸತೀಶ್ ಆಂಜನಪ್ಪ ಉಪಸ್ಥಿತರಿದ್ದರು.