ಕನಸು ಕಾಣುವುದು ಯಾರಿಗೆ ಇಷ್ಟ ಇಲ್ಲ ಹೇಳಿ. ಸುಂದರವಾದ ಕನಸು ನಮ್ಮ ದಿನವನ್ನು ಉತ್ಸಾಹಭರಿತವಾಗಿ ಇರುವಂತೆ ಮಾಡುತ್ತದೆ. ಕನಸಿಗೆ ಸಂಬಂಧ ಪಟ್ಟ ಹಾಗೆ ಹಲವಾರು ನಂಬಿಕೆ ಮೂಢನಂಬಿಕೆಗಳು ನಾವು ಪ್ರತಿನಿತ್ಯ ಕೇಳುತ್ತೇವೆ.
ಸನಾತನ ಹಿಂದೂ ಧರ್ಮದಲ್ಲಿ ಹಲವು ಶಾಸ್ತ್ರ ಪುರಾಣಗಳಿವೆ. ಅದರಲ್ಲಿ ಅನೇಕ ಗ್ರಂಥಗಳು ವಿವಿಧ ಸಂಸ್ಕೃತಿಯ ಕುರಿತು ಮಾಹಿತಿ ನೀಡುತ್ತವೆ. ಹಲವು ಶಾಸ್ತ್ರಗಳಲ್ಲಿ ಸ್ವಪ್ನ ಶಾಸ್ತ್ರವು ಒಂದು. ಇದು ಕನಸಿನ ಕುರಿತು ವಿಶೇಷ ಮಾಹಿತಿಯನ್ನು ಒದಗಿಸುತ್ತದೆ. ನಮಗೆ ಬೀಳುವ ಪ್ರತಿಯೊಂದು ಕನಸಿನ ಅರ್ಥ ಇಲ್ಲಿ ಲಭ್ಯವಾಗುತ್ತದೆ.
ಬೆಳಗಿನ ಜಾವ ಕನಸಿನಲ್ಲಿ ಈ 6 ತರಹದ ಕನಸುಗಳು ಕಂಡರೆ ನಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
1)ಮಳೆ, ನದಿ, ಸರೋವರ
ನಮ್ಮ ಕನಸಿನಲ್ಲಿ ಜೋರಾದ ಮಳೆ, ಹರಿಯುವ ನದಿ, ಮತ್ತು ಶಾಂತವಾದ ಕೆರೆ ಕಂಡು ಬಂದರೆ ಇಲ್ಲವೇ ಬರೀ ನೀರು ಕಂಡರು ಸಹ ಅದು ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ.
2)ಹಣ
ನಿಮ್ಮ ಕನಸಿನಲ್ಲಿ ದುಡ್ಡು ಕಂಡರೆ ನಿಮಗೆ ಶೀಘ್ರದಲ್ಲಿ ಧನಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತದೆ. ನಿಮ್ಮ ಭವಿಷ್ಯದ ದಿನಗಳಲ್ಲಿ ದುಡ್ಡಿನ ಕೊರತೆ ನಿವಾರಣೆಯಾಗಲಿದೆ ಎಂಬ ಸಂಕೇತವನ್ನು ಈ ಕನಸು ತಿಳಿಸುತ್ತದೆ.
3)ಎತ್ತರದ ಪರ್ವತ
ಸ್ವಪ್ನ ಶಾಸ್ತ್ರದ ಪ್ರಕಾರ ನಮ್ಮ ನಿದ್ದೆಯಲ್ಲಿ ದೊಡ್ಡ ದೊಡ್ಡ ಪರ್ವತ ಅಥವಾ ಹಿಮಾಲಯ ಶ್ರೇಣಿ ಕಂಡು ಬಂದರೆ ನಾವು ಅತಿ ಬೇಗ ಯಶಸ್ಸಿನ ಮೆಟ್ಟಿಲು ಏರಲು ಸಿದ್ಧರಿದ್ದೇವೆ ಎಂಬ ಸಂಕೇತವನ್ನು ನೀಡುತ್ತದೆ.
4)ಉದ್ಯಾನ ಮತ್ತು ಮೈದಾನ
ನಮ್ಮ ಕನಸಿನಲ್ಲಿ ಹಚ್ಚಹಸುರಿನ ಗಾರ್ಡನ್, ಸುಂದರವಾದ ಗಿಡ ಮರಗಳು, ಹಣ್ಣಿನ ಉದ್ಯಾನವನ ಕಂಡು ಬಂದರೆ ಅತಿ ಶೀಘ್ರದಲ್ಲಿ ನಮಗೆ ಅಪಾರ ಪ್ರಮಾಣ ಹಣ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
5)ಸೂರ್ಯೋದಯ
ಎಲ್ಲ ಗ್ರಹಗಳ ರಾಜ ಎಂದು ಸೂರ್ಯದೇವನನ್ನು ಕರೆಯಲಾಗುತ್ತದೆ. ಸೂರ್ಯನನ್ನು ಆತ್ಮವಿಶ್ವಾಸದ ದೇವ ಎಂದು ಸಹ ನೆನಪಿಸಿಕೊಳ್ಳುತ್ತೇವೆ. ಇಂತಹ ಸೂರ್ಯದೇವನು ಉದಯವಾಗುವುದು ಕನಸಿನಲ್ಲಿ ಕಂಡರೆ ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ.
6)ದೃಷ್ಟಿ
ನಮ್ಮ ಕನಸಿನಲ್ಲಿ ಸುಂದರವಾದ ಪ್ರಕೃತಿಯನ್ನು ನಮ್ಮ ಕಣ್ಣಿನಿಂದ ನೋಡುತ್ತಿದ್ದೇವೆ ಎಂಬ ಭಾಸವಾದರೆ ಅದು ಸಹ ಶುಭ ಎಂದು ಕರೆಯಲಾಗುತ್ತದೆ.