ಮುಡಾ ಹಗರಣದ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ಮುಡಾ ಬಗ್ಗೆ ಬಿಜೆಪಿಯವರು ಮಾತಾಡ್ತಾರೆ, ಹಗರಣ ಅಂತಾರೆ, ನಡೆದಿರೋದು ಯಾರ ಕಾಲದಲ್ಲಿ? ಆಗ ಯಡಿಯೂರಪ್ಪ ಸಿಎಂ ಆಗಿದ್ರು, ಬಿಜೆಪಿಯವರೇ ಮಂತ್ರಿ ಆಗಿದ್ರು. ಮುಡಾ ಅಧ್ಯಕ್ಷರು ಬಿಜೆಪಿಯವರೇ, ಹಗರಣಕ್ಕೆ ಬಿಜೆಪಿಯವರೇ ಕಾರಣ ಎಂದಿದ್ದಾರೆ. ನಮ್ಮ ಮುಖ್ಯಮಂತ್ರಿ ಕಾನೂನು ಬಾಹಿರವಾಗಿ ಸೈಟ್ ಬೇಕು ಅಂತ ಕೇಳಿಲ್ಲ. ವಾಲ್ಮೀಕಿ, ಮುಡಾ ಎರಡೂ ಹಗರಣ ತನಿಖೆಗೆ ಕೊಟ್ಟಿದ್ದೇವೆ. ಬಿಜೆಪಿ ಕಾಲದಲ್ಲಿ ನೂರಾರು ಹಗರಣ ಆಗಿದೆ. ಆದ್ರೆ ಯಾವುದೇ ತನಿಖೆಕೆ ಕೊಟ್ಟಿಲ್ಲ ಅವ್ರು. 40% ಕಮಿಷನ್ ತನಿಖೆಗೆ ಕೋರ್ಟ್ ಕೇಳಿದಾಗ ಸಾಕ್ಷಿ ಕೊಡುತ್ತೇವೆ ಎಂದಿದ್ದಾರೆ.
ಇನ್ನು ಕೆಎಸ್ಅರ್ಟಿಸಿ ಬಸ್ ಟಿಕೆಟ್ ದರ ಏರಿಕೆ ವಿಚಾರಕ್ಕೆ ಮಾತಾಡಿದ ಸಾರಿಗೆ ಸಚಿವರು, ಬಸ್ ದರ ಏರಿಕೆ ಸದ್ಯಕ್ಕಿಲ್ಲ, ರಾಜುಕಾಗೆ ದರ ಏರಿಕೆ ಬಗ್ಗೆ ಹೇಳಿರೋದು ಅವರ ವಯಕ್ತಿಕ ಅಭಿಪ್ರಾಯ, ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಇಲ್ಲ ಎಂದಿದ್ದಾರೆ.