ಇಂಧನವು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯಗತ್ಯವಾಗಿದ್ದು, ಜೀವನದ ಅವಿಭಾಜ್ಯ ಭಾಗವಾಗಿದೆ. ಕೈಗಾರಿಕೆ, ಕೃಷಿ, ಸಾರಿಗೆ, ಹಾಗೂ ಯಂತ್ರೋಪಕರಣಗಳ ನಿರ್ವಹಣೆಯು ಇಂಧನಗಳ ಮೇಲೆ ಅವಲಂಬಿತವಾಗಿದೆ. ಇಂಧನಗಳಿಗೆ ಭಾರಿ ಬೇಡಿಕೆಯಿದ್ದು, ಪೂರೈಕೆ ಮಾತ್ರ ಅದರ ಮಟ್ಟಿಗೆ ತಲುಪಿಲ್ಲ. ತೈಲ ದೇಶಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದ ಪರಿಣಾಮವಾಗಿ ಆಮದು ಮೇಲೆ ಭಾರತದಲ್ಲಿ ಇನ್ನಷ್ಟು ಸಾಗುತ್ತಿದೆ.
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು 2017ರಿಂದ ಪ್ರತಿದಿನವೂ ನವೀಕರಿಸಲಾಗುತ್ತಿದೆ. ಇದಕ್ಕೆ ಮೊದಲು, ಈ ದರಗಳನ್ನು ಹದಿನೈದು ದಿನಕ್ಕೊಮ್ಮೆ ಮಾತ್ರ ಪರಿಷ್ಕರಿಸಲಾಗುತ್ತಿತ್ತು. ನಿತ್ಯದ ದರ ನವೀಕರಣವು ವಾಹನ ಸವಾರರಿಗೆ ಹಾಗೂ ದಿನಸಿ ಸರಕು ಸಾಗಣೆದಾರರಿಗೆ ಹೆಚ್ಚಿನ ಸಹಕಾರವನ್ನು ಒದಗಿಸುತ್ತಿದೆ.
ಬೆಂಗಳೂರು ಸೇರಿದಂತೆ ಮಹಾನಗರಗಳ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಈ ವೀಕೆಂಡ್ಗೆ ಪೆಟ್ರೋಲ್ ದರ ರೂ. 102.92 ಹಾಗೂ ಡೀಸೆಲ್ ದರ ರೂ. 90.99 ಆಗಿದೆ. ಇತರ ಪ್ರಮುಖ ಮಹಾನಗರಗಳಲ್ಲಿ, ಚೆನ್ನೈನಲ್ಲಿ ಪೆಟ್ರೋಲ್ ರೂ.100.80 ಮತ್ತು ಡೀಸೆಲ್ ರೂ.92.39, ಮುಂಬೈನಲ್ಲಿ ಪೆಟ್ರೋಲ್ ರೂ.103.50 ಮತ್ತು ಡೀಸೆಲ್ ರೂ.90.03, ಕೊಲ್ಕತ್ತಾದಲ್ಲಿ ಪೆಟ್ರೋಲ್ ರೂ.105.01 ಹಾಗೂ ಡೀಸೆಲ್ ರೂ.91.82 ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ರೂ.94.77 ಮತ್ತು ಡೀಸೆಲ್ ರೂ.87.67 ರಷ್ಟು ಬೆಲೆಯಲ್ಲಿದೆ.
ಕರ್ನಾಟಕದ ಪ್ರಮುಖ ಜಿಲ್ಲೆಗಳ ಇಂದಿನ ಪೆಟ್ರೋಲ್ ದರಗಳು
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆಯು ಹೀಗಿದೆ:
-
ಬಾಗಲಕೋಟೆ – ₹103.39
-
ಬೆಂಗಳೂರು – ₹102.92
-
ಬೆಳಗಾವಿ – ₹103.59
-
ಬೀದರ್ – ₹104.08
-
ಬಳ್ಳಾರಿ – ₹104.00
-
ವಿಜಯಪುರ – ₹103.10
-
ಚಿಕ್ಕಮಗಳೂರು – ₹104.08
-
ದಕ್ಷಿಣ ಕನ್ನಡ – ₹102.37
-
ಧಾರವಾಡ – ₹102.67
-
ಗದಗ – ₹103.75
-
ಹಾಸನ – ₹103.08
-
ಕೋಲಾರ – ₹102.85
-
ಮೈಸೂರು – ₹102.76
-
ಶಿವಮೊಗ್ಗ – ₹104.08
-
ಉಡುಪಿ – ₹102.81
-
ಯಾದಗಿರಿ – ₹103.38
ಪೆಟ್ರೋಲ್ ದರವು ಕೆಲವು ಜಿಲ್ಲೆಗಳಲ್ಲಿ ಇಳಿಕೆಯಾಗಿದ್ದು, ಕೆಲವೂ ಕಡೆ ಏರಿಕೆಯಾಗಿದೆ. ತೈಲ ಬೆಲೆಗಳು ಬದಲಾವಣೆಯಾದ ಪ್ರತಿದಿನದ ವರದಿ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.
ಕರ್ನಾಟಕದ ಡೀಸೆಲ್ ದರ
ಇಂದಿನ ಡೀಸೆಲ್ ದರಗಳು ಈಂತಿವೆ:
-
ಬಾಗಲಕೋಟೆ – ₹91.45
-
ಬೆಂಗಳೂರು – ₹90.99
-
ಬೀದರ್ – ₹92.16
-
ಚಿಕ್ಕಮಗಳೂರು – ₹92.03
-
ದಕ್ಷಿಣ ಕನ್ನಡ – ₹90.45
-
ಧಾರವಾಡ – ₹90.78
-
ಹಾಸನ – ₹91.04
-
ಮಂಡ್ಯ – ₹90.84
-
ಮೈಸೂರು – ₹90.84
-
ಶಿವಮೊಗ್ಗ – ₹92.12
-
ಉಡುಪಿ – ₹90.85
-
ವಿಜಯನಗರ – ₹92.09
ಇಂಧನವನ್ನು “ದ್ರವರೂಪದ ಚಿನ್ನ” ಎಂದು ಕರೆಯಲಾಗುತ್ತದೆ. ಅದರ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾಮಾನ್ಯ ಜನರ ಮೇಲೆ ತೀವ್ರ ಹೊರೆ ಉಂಟುಮಾಡುತ್ತಿದೆ. ಪ್ರತಿ ದಿನದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣ ಹಾಗೂ ಖರ್ಚುಗಳನ್ನು ಯೋಜನೆಬದ್ಧವಾಗಿ ನಿರ್ವಹಿಸುವುದು ಅವಶ್ಯಕವಾಗಿದೆ.