ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಸಿನಿಮಾ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ ಎಂದು ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಹೇಳಿದ್ದಾರೆ. ಡೆವಿಲ್ ಸಿನಿಮಾ ನಿಲ್ಲುತ್ತೆ ಅನ್ನೋದು ಅಂತೆ ಕಂತೆ ಅಷ್ಟೇ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಡೆವಿಲ್ ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ದರ್ಶನ್ ಸರ್ ಜೈಲಲ್ಲಿ ಇರೋ ಕಾರಣ ಸದ್ಯಕ್ಕೆ ಶೂಟಿಂಗ್ ನಿಂತಿದೆ. ಡೆವಿಲ್ ಚಿತ್ರದ ಟೈಟಲ್ ಚೇಂಜ್ ಆಗುತ್ತೆ ಅನ್ನೋದು ಸುಳ್ಳು. ಶೀಘ್ರದಲ್ಲೇ ಡೆವಿಲ್ ಸಿನಿಮಾ ಮತ್ತೆ ಶುರುವಾಗುತ್ತೆ ಅಂತ ಪ್ರೊಡಕ್ಷನ್ ಹೌಸ್ ಹೇಳಿದೆ ಎಂದಿದ್ದಾರೆ. ಈ ಕೇಸ್ ಏನಾಗುತ್ತೆ ಅಂತ ಚಿತ್ರತಂಡ ಕಾಯುತ್ತಿದ್ದೆ. ನಾನು ಕೂಡ ಚಿತ್ರದಲ್ಲಿ ದರ್ಶನ್ ಸರ್ ಜೊತೆ ಆಕ್ಟ್ ಮಾಡಿದ್ದೀನಿ, ನಾನು ಕೇವಲ 5 ದಿನ ಶೂಟಿಂಗ್ ಹೋಗಿದ್ದೀನಿ ಇನ್ನೂ 15 ದಿನ ಬಾಕಿ ಇದೆ.
ಮಿಲನ ಪ್ರಕಾಶ್ ನಿರ್ದೇಶನ ಡೆವಿಲ್ ಸಿನಿಮಾಗೆ ಸಂಕಷ್ಟ ತಪ್ಪಿಲ್ಲ. ನಟ ದರ್ಶನ್ ಗೆ ಬೇಲ್ ಸಿಕ್ಕರೂ ಸಿನಿಮಾ ಶೂಟಿಂಗ್ ಶುರುವಾಗೋದು ಸಾಧ್ಯವಿಲ್ಲ. ಇದಕ್ಕೆ ಕಾರಣ ಕೂಡ ಇದೆ. ಡೆವಿಲ್ ಸಿನಿಮಾದ ಶೂಟಿಂಗ್ ಬಹುತೇಕ ಫಾರಿನ್ ನಲ್ಲಿ ನಡೆಯಬೇಕಿದೆ. 30 ದಿನಗಳ ಕಾಲ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಇದೀಗ ನಟ ದರ್ಶನ್ ಕೊಲೆ ಆರೋಪ ಹೊತ್ತು ಜೈಲು ಸೇರಿದ್ದಾರೆ. ಬೇಲ್ ಸಿಕ್ಕರೂ ವಿದೇಶಕ್ಕೆ ಹೋಗುವ ಅವಕಾಶ ಸಿಗೋದು ಡೌಟ್ ಎನ್ನಲಾಗ್ತಿದೆ. ನಟ ದರ್ಶನ್ ಜಾಮೀನನ ಮೇಲೆ ಹೊರಗೆ ಬಂದ್ರೂ ದರ್ಶನ್ ಪಾಸ್ ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ಪಡೆಯೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕೋಟ್ಯಾಂತರ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗ್ತಿದ್ದ ಚಿತ್ರ ಇದಾಗಿದ್ದು, ಜೂನ್ ಅಂತ್ಯದವರೆಗೆ ಡೆವಿಲ್ ಟೀಮ್ ಮೈಸೂರಿನಲ್ಲಿ ಹೋಟೆಲ್ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದು ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೋಟ್ಯಾಂತರ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗ್ತಿದ್ದ ಚಿತ್ರ ಇದಾಗಿದ್ದು, ಜೂನ್ ಅಂತ್ಯದವರೆಗೆ ಡೆವಿಲ್ ಟೀಮ್ ಮೈಸೂರಿನಲ್ಲಿ ಹೋಟೆಲ್ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದು ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೊಲೆ ಆರೋಪಿ ಆಗಿದ್ದವರು ವಿದೇಶಕ್ಕೆ ಹೋಗೋಕು ಅಂದ್ರೆ ಸಾಕಷ್ಟು ಷರತ್ತು ಇರುತ್ತೆ. ಹೀಗಾಗಿ ದರ್ಶನ್ ಬೇಲ್ ಪಡೆದು ಹೊರಬಂದ್ರು ತಕ್ಷಣ ಶೂಟ್ ಶುರುವಾಗೋದು ಕಷ್ಟ ಕಷ್ಟ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಒಂದು ವೇಳೆ ಸಿನಿಮಾ ತಂಡದ ಮನವಿ ಮೇರೆಗೆ ಕೋರ್ಟ್ ಅನುಮತಿ ನೀಡಿದ್ರೂ ನಿರ್ಬಂಧನೆಗಳನ್ನು ಹೇರುತ್ತಾರೆ.