ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ.
ದುನಿಯಾ ವಿಜಯ್ ತುಮಕೂರಿಗೆ ಆಗಮಿಸಿದ ವೇಳೆ ಅಭಿಮಾನಿಗಳು ಹೂವು ಸುರಿದು ಸ್ವಾಗತ ಮಾಡಿದ್ದಾರೆ. ತುಮಕೂರು-ಬೆಂಗಳೂರು ರಸ್ತೆಯಲ್ಲಿ ಅಭಿಮಾನಿಗಳು ಹೂ ಸುರಿದಿದ್ದಾರೆ. ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡಿದ ನಟ ದುನಿಯಾ ವಿಜಯ್, ಗದ್ದುಗೆಗೆ ನಮಸ್ಕರಿಸಿದ ಬಳಿಕ ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಕೆಲ ಹೊತ್ತು ಮಾತನಾಡಿದರು.
ಭೀಮ’ ಸಿನಿಮಾ ನೀಡುತ್ತಿರುವ ಸಂದೇಶವನ್ನು ಶ್ರೀಗಳಿಗೆ ದುನಿಯಾ ವಿಜಯ್ ವಿವರಿಸಿದರು. ಈ ಸಿನಿಮಾ ಸಾಮಾಜಿಕ ಕಾಳಜಿ ಇರೋ ಸಿನಿಮಾವಾಗಿದೆ. ಪ್ರತಿಯೊಬ್ಬರು ನೋಡಲೇ ಬೇಕೆಂದು ಶ್ರೀಗಳು ಹೇಳಿದರು. ಆ ಬಳಿಕ ತಮಕೂರು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಭಾಗಿಯಾಗಿದ್ದು, ವಿದ್ಯಾರ್ಥಿಗಳಿಗೆ ಭೀಮ ಚಿತ್ರದ ಕುರಿತು ದುನಿಯಾ ವಿಜಯ್ ವಿವರಿಸಿದರು.