ಬಳ್ಳಾರಿಗೆ ಪಾದಯಾತ್ರೆ ಹೊರಡ್ತೀವಿ ಅಂತ ತುದಿಗಾಲಲ್ಲಿ ನಿಂತಿರೋ ಬಿಜೆಪಿ ಬಂಡಾಯ ನಾಯಕರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಸಾಥ್ ನೀಡುವ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
ಬಳ್ಳಾರಿ ಪಾದಯಾತ್ರೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಬಸನಗೌಡ ಯತ್ನಾಳ್ ಅವರು ಅನುಮತಿ ಕೊಟ್ರೆ ಬಳ್ಳಾರಿ ಪಾದಯಾತ್ರೆಯಲ್ಲಿ ನಾನು ಭಾಗಿ ಆಗ್ತೀನಿ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ. ಯತ್ನಾಳ್ ಬಣದ ಪಾದಯಾತ್ರೆ ನಡೆಯಬೇಕು ಅನ್ನೋದು ನನ್ನ ಆಸೆ, ಪಾದಯಾತ್ರೆ ಪರವಾಗಿ ಬಿಜೆಪಿಯಲ್ಲಿ ಅನೇಕರಿದ್ದಾರೆ, ಆ ಅನೇಕರಲ್ಲಿ ನಾನು ಒಬ್ಬ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ.