ಸ್ಯಾಂಡಲ್ವುಡ್ನ ಒಂಟಿಸಲಗ ದುನಿಯಾ ವಿಜಯ್ ಅಭಿನಯದ ಹೊಸ ಸಿನಿಮಾ ಅನೌನ್ಸ್ ಆಗಿದೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಹೊಸ ಚಿತ್ರಗಳ ಹಿಂಟ್ ಕೊಟ್ಟಿದ್ದರು. ಎರಡು ಪ್ರಾಜೆಕ್ಟ್ಗಳು ಶುರುವಾಗ್ತಿವೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲೆಂದು ಕೇಳಿಕೊಂಡಿದ್ದರು. ಇಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸಿನಿಮಾ ಪ್ರೇಮಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಇದು ವಿಜಯ್ ನಟನೆಯ 30 ನೇ ಚಿತ್ರವಾಗಿದ್ದು ಫಸ್ಟ್ ಲುಕ್ ಪೋಸ್ಟರ್ ನೋಡುಗರ ಗಮನ ಸೆಳೆಯುತ್ತಿದೆ. ಭೀಮನ ಲುಕ್ಕು-ಗೆಟಪ್ಪು ಪ್ರೇಕ್ಷಕರ ತಲೆಗೆ ಹುಳಬಿಟ್ಟಿದ್ದು, ಹತ್ತಾರು ಕುತೂಹಲದ ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಅಷ್ಟಕ್ಕೂ, ವಿಜಯ್ ನಯಾ ಅವತಾರದ ಹಿಂದಿನ ಕತೆಯೇನು? ಅದ್ಯಾವ ಕಥೆನಾ ಹೇಳಲಿಕ್ಕೆ ಹೊರಟಿದ್ದಾರೆ ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಫಸ್ಟ್ ಲುಕ್ ನೋಡಿದ್ರೆ ಇದೊಂದು ಕ್ರಾಂತಿಕಾರಿ ಕಥೆ ಅನ್ಸುತ್ತೆ ಅಟ್ ದಿ ಸೇಮ್ ಟೈಮ್ ಕಾಡುಜನರ ಬದುಕು-ಬವಣೆಯ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗ್ಬೋದು ಎಂತಲೂ ಡೌಟ್ ಶುರುವಾಗುತ್ತೆ. ಅದೇನೇ ಇರಲಿ ಸದ್ಯ ಭೀಮ ಸಕ್ಸಸ್ನಲ್ಲಿರೋ ದುನಿಯಾ ವಿಜಯ್ ತಮ್ಮದೇ ಬಳಗದ ಜೊತೆಗೆ ಮಗದೊಂದು ಸಿನಿಮಾ ಘೋಷಿಸಿದ್ದಾರೆ. ಸಲಗ ಹಾಗೂ ಭೀಮ ತಂಡ ಈ ಚಿತ್ರಕ್ಕೆ ಕೆಲಸ ಮಾಡಲಿದ್ದು, ನಿರ್ದೇಶನದ ಜವಬ್ದಾರಿನಾ ಆರ್ ಆರ್ ವೇಟ್ರಿ ವೇಲ್ ಉರುಫ್ ತಂಬಿ ಮಹೇಶ್ ಅನ್ನೋರು ವಹಿಸಿಕೊಂಡಿದ್ದಾರೆ. ಭೀಮ ಚಿತ್ರಕ್ಕೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ಇವ್ರು ವಿಜಯ್ ನಟನೆಯ 30ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತ್ರಂತ್ರ ನಿರ್ದೇಶಕರಾಗಲು ಹೊರಟಿದ್ದಾರೆ.
ಸದ್ಯ ಪ್ರಿಪ್ರೊಡಕ್ಷನ್, ರೈಟಿಂಗ್ ಕೆಲಸಕ್ಕೆ ಚಾಲನೆ ಕೊಡಲಾಗಿದೆ. ಇತ್ತ ಸಲಗ ನಂತರ ಭೀಮ ಮೂಲಕ ನಿರ್ದೇಶಕನಾಗಿ ಜೈಕಾರ ಹಾಕಿಸಿಕೊಂಡಿರೋ ವಿಜಯ್ ಮತ್ತೆ ಡೈರೆಕ್ಷನ್ಗೆ ಕೈ ಹಾಕ್ತಾರಾ? ತಮ್ಮ 31ನೇ ಸಿನಿಮಾವನ್ನ ಅವರೇ ಡೈರೆಕ್ಟ್ ಮಾಡ್ತಾರಾ? ಈ ಕುತೂಹಲಕ್ಕೆ ಅವರೇ ಬ್ರೇಕ್ ಹಾಕ್ಬೇಕು. ಬಟ್ ಕೆಲಸವಂತೂ ಶುರುವಾಗಿದೆ, ಯಾರೂ ಟಚ್ ಮಾಡದ ಕಥೆಗಳನ್ನ ಸಿನಿಮಾ ಪ್ರೇಮಿಗಳ ಮುಂದೆ ಹರವಿಡೋದಕ್ಕೆ ವಿಜಯ್ ಕುಮಾರ್ ತೀರ್ಮಾನಿಸಿರೋದಂತೂ ಸತ್ಯ. ತಮ್ಮ ನಿರ್ದೇಶನದ ಎರಡು ಚಿತ್ರಗಳ ಮೂಲಕ ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಟ್ಟಿರೋ ವಿಜಯ್, ತಮ್ಮ ಮುಂದಿನ ಚಿತ್ರದಲ್ಲಿ ಯಾವ ಕಥೆನಾ ಆಯ್ಕೆಮಾಡಿಕೊಳ್ತಾರೆ? ಹ್ಯಾಟ್ರಿಕ್ ಬಾರಿಸಲು ಯಾವ್ ರೀತಿ ತಯಾರಿ ಮಾಡ್ಕೊಂಡು ಅಖಾಡಕ್ಕೆ ಇಳಿಯುತ್ತಾರೆ ಜಸ್ಟ್ ವೇಯ್ಟ್ ಅಂಡ್ ಸೀ