ಇದು ಸಪ್ಟೆಂಬರ್ ತಿಂಗಳ ಮೊದಲ ವಾರ. 01 ರಿಂದ 07ರವರೆಗೆ ಇರಲಿದೆ. ಬುಧನ ಪರಿವರ್ತನೆ ಈ ವಾರವಾಗಲಿದೆ. ಸಿಂಹರಾಶಿಯನ್ನು ಪ್ರವೇಶಿಸಿ ಮಿತ್ರನ ಜೊತೆ ಅಲ್ಲಿಯೇ ವಾಸವಿರುವನು. ಉಚ್ಚಗತಿಯನ್ನು ಹೊಂದಿದ ಕಾರಣ ಬುಧನಿಂದ ಉತ್ತಮವಾದ ಫಲ ಸಿಕ್ಕರೂ ಕೆಲವರಿಗೆ ಮಿಶ್ರ, ಅಶುಭಫಲಗಳೂ ಇವೆ. ಎಲ್ಲರೂ ಮನುಷ್ಯ ಮಾಡಿದ ಒಳ್ಳೆಯ ಕರ್ಮಕ್ಕೆ ಶುಭಫಲವನ್ನೇ ನೀಡಲಿ.
ಮೇಷ ರಾಶಿ : ಸಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಮೊದಲ ರಾಶಿಯವರಿಗೆ ಶುಭಾಶುಭಫಲ. ತೃತೀಯ ಹಾಗೂ ಷಷ್ಠಸ್ಥಾನದ ಅಧಿಪತಿ ಬುಧ ಪಂಚಮದಲ್ಲಿ ಇರುವನು. ಮಕ್ಕಳ ವಿಚಾರದಲ್ಲಿ ನಿಮಗೆ ಪ್ರೀತಿ ಕಡಿಮೆ ಆಗುವುದು. ಯಾವುದನ್ನೂ ಖುಷಿಯಿಂದ ಮಾಡುವ ಯಾವ ಉತ್ಸಾಹವು ಇರದು. ದ್ವಿತೀಯದಲ್ಲಿ ಗುರುವಿರುವ ಕಾರಣ ಮಾತಿನಲ್ಲಿ ಸೌಮ್ಯತೆ ಇರಲಿದೆ. ಒಳ್ಳೆಯ ಮಾತುಗಳಿಗೆ ಆಡುವಿರಿ. ಉದ್ಯಮಾಧಿಪತಿ ಏಕಾದಶದಲ್ಲಿ ಇರುವ ಕಾರಣ ವಿಳಂಬವಾದರೂ ಆದಾಯ ಸಿಗಲಿದೆ. ಕಾರ್ತಿಕೇಯನ ಸ್ಮರಣೆ ಮಾಡಿದರೆ ನಿಮ್ಮ ರಕ್ಷಣೆಯ ದಾರಿಯನ್ನು ಆತ ತೋರಿಸುತ್ತಾನೆ.
ವೃಷಭ ರಾಶಿ : ಸಪ್ಟೆಂಬರ್ ತಿಂಗಳ ಈ ವಾರ ನಿಮಗೆ ಶುಭ. ದ್ವಿತೀಯ ಹಾಗೂ ಪಂಚಮದ ಅಧಿಪತಿ ಚತುರ್ಥದಲ್ಲಿ ಇದ್ದಾನೆ. ಕುಟುಂಬದಲ್ಲಿ ನಿಮ್ಮ ಮಾತು ಕಡಿಮೆ ಆಗುವುದು. ಈ ವಾರ ನಿಮ್ಮ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವನ್ನು ಕಾಣುವಿರಿ. ಕೃಷಿ ಕಾರ್ಯದಲ್ಲಿ ಇದ್ದವರಿಗೆ ಲಾಭ. ಸಣ್ಣ ವಿಚಾರಗಳಿಗೆ ಅಜ್ಞಾನದಿಂದ ನಷ್ಟವಾಗಲಿದೆ. ಯಂತ್ರೋಪಕರಣಗಳ ಬಳಕೆಯನ್ನು ಜಾಗರೂಕತೆಯಿಂದ ಮಾಡಿ. ಮಕ್ಕಳಿಂದ ನಿಮಗೆ ಯಾವುದೇ ಸಂತೋಷ ಸಿಗದು. ಕಷ್ಟದಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಗೋಪೂಜೆಯಿಂದ ನಿಮಗೆ ಅನೇಕ ವಿಘ್ನಗಳು ನಿವೃತ್ತಿಯಾಗುವುದು.
ಮಿಥುನ ರಾಶಿ : ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ವಾರ ಅಶುಭ. ರಾಶಿಯ ಅಧಿಪತಿ ಹಾಗೂ ಚತುರ್ಥದ ಅಧಿಪತಿ ಬುಧ ತೃತೀಯಕ್ಕೆ ಬರುವನು. ಕೌಟುಂಬಿಕವಾದ ವಿಚಾರದಲ್ಲಿ ನಿಮಗೆ ಸಮಾಧಾನ ಇರದು. ನಿಮ್ಮ ಬಗ್ಗೆಯೂ ಒಳ್ಳೆಯ ಅಭಿಪ್ರಾಯವು ಇರದು. ಉದ್ಯೋಗದಲ್ಲಿ ಬೇಡವೆಂದರೂ ಕೆಟ್ಟವರ ಸಹವಾಸವೇ ಸಿಗುವುದು. ನಿಮ್ಮ ಸಾಮರ್ಥ್ಯಕ್ಕೆ ಹೊರಗೆ ತರುವುದು ಕಷ್ಟ. ನಿಮಗೆ ಆ ಮನಸ್ಸು ಇರದು. ಅದಲ್ಲದೇ ಯಾರು ಏನೇ ಮಾಡಿದರೂ ಸಾಧ್ಯವಾಗದು. ನಿಮ್ಮನ್ನು ಅಲ್ಲಿಂದ ಪ್ರೇರಿಸುವ ಅವಶ್ಯಕತೆ ಇದೆ. ವಿವಾಹದ ಬಗ್ಗೆ ಸದ್ಯ ಯಾವ ಮಾತುಕತೆಗಳನ್ನೂ ಮಾಡುವುದು ಬೇಡ. ಬಂದಿರುವ ಸಂಬಂಧವನ್ನು ಹಾಗೆಯೇ ಉಳಿಸಿಕೊಳ್ಳಿ. ಗುರುಚರಿತ್ರಿಯನ್ನು ನಿತ್ಯವೂ ಪಠಿಸಿ.
ಕರ್ಕಾಟಕ ರಾಶಿ : ಸಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ನಿಮಗೆ ಮಿಶ್ರಫಲವಿದೆ. ದ್ವಾದಶ ಹಾಗೂ ತೃತೀಯಾಧಿಪತಿ ಬುಧನು ದ್ವಿತೀಯದಲ್ಲಿ ಇದ್ದು ನಿಮ್ಮ ಸಾಮರ್ಥ್ಯಕ್ಕೆ ಹಿನ್ನಡೆ ಕೊಡುವನು. ಕುಜನಿಂದ ಯಂತ್ರಜ್ಞರಿಗೆ ಕೆಲಸವು ಕಡಿಮೆಯಾಗುವುದು. ಶ್ರಮದಿಂದ ಮಾಡಿದ ಕಾರ್ಯವು ಅಪ್ರಯೋಜಕವಾಗುವುದು. ನಿಮ್ಮನ್ನು ಸದ್ಯ ಗುರುಬಲವೊಂದು ಕಾಪಾಡುತ್ತಿರುವುದು. ಸ್ತ್ರೀಯರಿಂದ ನಿಮಗೆ ಅವಗಢವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಗಮನಕೊಡುವರು. ಮಹಾಗೌರಿಯನ್ನು ಪೂಜಿಸಿ.
ಸಿಂಹ ರಾಶಿ : ರಾಶಿ ಚಕ್ರದ ಐದನೇ ರಾಶಿಯರಿಗೆ ಈ ವಾರ ಶುಭ. ದ್ವಿತೀಯ ಹಾಗೂ ಏಕಾದಶದ ಅಧಿಪತಿ ಬುಧನು ನಿಮ್ಮ ರಾಶಿಗೆ ಬರಲಿದ್ದಾನೆ. ಮಿತ್ರನ ಜೊತೆ ಮಿತ್ರನ ರಾಶಿಯಲ್ಲಿ ಇರುವುದು ಶುಭಕರ. ಆರೋಗ್ಯ ಸುಸ್ಥಿರವಾಗಲಿದೆ. ವಾಗ್ಮಿಗಳಿಗೆ ಸಮಯ ಯಶಸ್ಸು ಸಿಗಲಿದೆ. ನಿಮ್ಮ ಮಾತಿಗೂ ಬೆಲೆ ಕೊಟ್ಟು ಕಾರ್ಯವನ್ನು ಮಾಡುವರು. ದೊಡ್ಡವರು ಎಂದು ಎನಿಸಿಕೊಂಡವರಿಂದ ನಿಮ್ಮ ಕಾರ್ಯವಾಗಲಿದೆ. ಶುಕ್ರನು ನೀಚನಾಗಿ ದ್ವಿತೀಯದಲ್ಲಿ ಇರುವ ಕಾರಣ ಕಲಾವಿದ್ಯಾರ್ಥಿಗಳಿಗೆ ಸ್ವಲ್ಪ ಕಾಲ ಹಿನ್ನಡೆಯಾಗುವುದು. ಸೂರ್ಯಾಷ್ಟಕವನ್ನು ಪಠಿಸಿ.
ಕನ್ಯಾ ರಾಶಿ : ಈ ವಾರದಲ್ಲಿ ನಿಮಗೆ ಶುಭಾಶುಭ ಫಲವೇ ಇದೆ. ರಾಶಿ ಅಧಿಪತಿ ಹಾಗೂ ದಶಮಾಧಿಪತಿಯು ದ್ವಾದಶಕ್ಕೆ ಬಂದಿದ್ದಾನೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಬೇಕು ಮತ್ತು ಅದಕ್ಕಾಗಿ ಖರ್ಚನ್ನೂ ಮಾಡಬೇಕಾಗುವುದು. ಉದ್ಯೋಗದಲ್ಲಿ ಹೊಸ ಗೆಳೆತನ ಶುರುವಾಗುವುದು. ಭೂಮಿಯ ವ್ಯವಹಾರದಲ್ಲಿ ಅತಂತ್ರ ಸ್ಥಿಯಿಂದ ನಿಮಗೆ ಕಷ್ಟವಾಗಲಿದೆ. ನಿಮ್ಮ ಯೋಜನೆಗಳು ಪೂರ್ಣತೆಯಿಂದ ಇರಲಾರದು. ಮನಸ್ಸಿಗೆ ಶಾಂತಿಯನ್ನು ತಂದುಕೊಳ್ಳುವುದು ಕಷ್ಟವಾಗಲಿದೆ. ಒಳ್ಳೆಯವರಿಂದ ಮಾರ್ಗದರ್ಶನ ಪಡೆದು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ರಾಮರಕ್ಷಾ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ.
ತುಲಾ ರಾಶಿ : ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಮಿಶ್ರಫಲ. ದ್ವಾದಶ ಹಾಗೂ ನವಮಾಧಿಪತಿ ಬುಧ ಏಕಾದಶಕ್ಕೆ ಬರುವನು. ಒಳ್ಳೆಯ ಕಾರ್ಯಕ್ಕೆ ಧನವ್ಯಯವಾಗುವುದು. ಕಛೇರಿಯಲ್ಲಿ ಅಸಮಾಧನವಿದ್ದು, ಮನೆಯಲ್ಲೂ ಅದರ ಮುಂದುವರಿಕೆ ಎನಿಸಬಹುದು. ವಿದೇಶ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಉತ್ತಮ ಕಾಲ. ರಾಶಿ ಅಧಿಪತಿ ದ್ವಾದಶದಲ್ಲಿ ಇರುವ ಕಾರಣ ಬಂದ ಹಣವು ನಾನಾ ಮಾರ್ಗಗಳಿಂದ ಹರಿದುಹೋಗುವುದು. ಮಕ್ಕಳಿಂದ ನಿಮಗೆ ನೆಮ್ಮದಿ ಸಿಕ್ಕಂತೆ ಆಗುವುದು. ಗುರುಬಲವು ಇಲ್ಲದ ಕಾರಣ ಎಲ್ಲವೂ ನಿಮಗೇ ಬಂದು ಚುಚ್ಚಿದಂತೆ ಭಾಸವಾಗುತ್ತದೆ. ಮಹಾಲಕ್ಷ್ಮಿಯ ಉಪಾಸನೆಯನ್ನು ಸಂಜೆಯ ಸಮಯದಲ್ಲಿ ಮಾಡಿ.
ವೃಶ್ಚಿಕ ರಾಶಿ : ಸಪ್ಟೆಂಬರ್ ತಿಂಗಳ ಈ ವಾರ ನಿಮಗೆ ಮಿಶ್ರ ಫಲ. ಅಷ್ಟಮ ಹಾಗೂ ಏಕಾದಶಾಧಿಪತಿ ಬುಧ ದಶಮದಲ್ಲಿ ಇದ್ದಾನೆ. ವೃತ್ತಿಯಲ್ಲಿ ಉತ್ತಮ ಆದಾಯ ಬಂದರೂ ಅದು ಇನ್ನೊಂದು ರೀತಿಯಲ್ಲಿ ಖಾಲಿಯಾಗುವುದು. ಯೋಜಿತ ಕಾರ್ಯಗಳಲ್ಲಿ ಯಶಸ್ಸು ಪಡೆಯುವರು. ಮಾತುಗಾರಿಕೆಯಿಂದ ನಿಮಗೆ ಪ್ರಶಂಸೆ ಸಿಗಲಿದೆ. ಆದಾಯವೂ ಅದರ ಮೂಲಕ ಬರುವುದು. ವೃತ್ತಿ ಬದುಕಿನಲ್ಲಿ ಪ್ರತಿ ಕೆಲಸದಲ್ಲೂ ಯಶಸ್ಸು ಸಾಧಿಸುವಿರಿ. ಕೌಟುಂಬಿಕ ತಲ್ಲಣಗಳನ್ನು ನೀವು ಶಾಂತಗೊಳಿಸಬೇಕಾಗುವುದು. ಈ ವಾರ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆಯನ್ನು ಮಾಡುತ್ತಿರುವವರಿಗೆ ಶುಭ ಸಮಯ. ವಿವಾಹ ಜೀವನದಲ್ಲಿ ಸಂತೋಷ ಸಿಗಲಿದೆ. ಅನಾರೋಗ್ಯವು ಚಿಕಿತ್ಸೆಯ ಮೂಲಕ ಪರಿಹಾರಗೊಳ್ಳುವುದು. ದೇವಸೇನಾನಿಯೇ ನಿಮಗೆ ಮಾರ್ಗವನ್ನು ತೋರಿಸುವನು.
ಧನು ರಾಶಿ : ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ಮಿಶ್ರ ಫಲ. ಸಪ್ತಮಾಧಿಪತಿ ಹಾಗೂ ದಶಮಾಧಿಪತಿ ಬುಧನು ನವಮಕ್ಕೆ ಬರಲಿದ್ದಾನೆ. ಸಂಗಾತಿಯ ಜೊತೆಗಿನ ವೈಮನಸ್ಯ ದೂರಾಗಲಿದೆ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಅದ್ಭುತವಾಗಿರಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿಯು ಲಾಭದಾಯಕವಾಗಿರಲಿದೆ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಈಗ ಪೂರ್ಣಗೊಳ್ಳಲಿದೆ. ವೃತ್ತಿಯಲ್ಲಿ ಗೌರವ, ಯಶಸ್ಸು ಸಿಗಲಿದೆ. ನಿಮ್ಮ ಭೂಮಿಯ ಮಾರಾಟವು ಈ ವಾರ ಆಗವುದು. ಪ್ರೀತಿ ವಿಚಾರಗಳಲ್ಲಿ ಈ ವಾರ ಸಕಾರಾತ್ಮಕ ವಾರ್ತೆ ಸಿಗಲಿದೆ. ಕೆಲವು ಸಂದರ್ಭಗಳಲ್ಲಿ ಮುನ್ನುಗ್ಗಿ ಅಪಮಾನ ಮಾಡಿಕೊಳ್ಳುವಿರಿ. ಗೋಮಾತೆಗೆ ಆಹಾರವನ್ನು ಕೊಡಿ.
ಮಕರ ರಾಶಿ : ಸಪ್ಟೆಂಬರ್ ಮೊದಲ ವಾರದಲ್ಲಿ ನಿಮಗೆ ಶುಭಾಶುಭ ಫಲವಿದೆ. ಬುಧನು ಷಷ್ಠ ಹಾಗೂ ನವಮಾಧಿಪತಿಯೂ ಆಗಿದ್ದು ಅಷ್ಟಮದಲ್ಲಿ ಇರುವನು. ಶತ್ರುಗಳಿಗೆ ಜಯವಾಗುವುದು. ಹಿತಶತ್ರುಗಳ ವಿಚಾರದಲ್ಲಿ ನಿಮಗೆ ಸರಿಯಾದ ದೃಷ್ಟಿಯು ಬಾರದೇ ಇರಬಹುದು. ನಿಮ್ಮ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳಿಂದ ಪರಿಹಾರ ದೊರೆತು ಮಾನಸಿಕ ಚಿಂತೆ ದೂರವಾಗಲಿದೆ. ಹಿರಿಯರ ಬಗ್ಗೆ ಅನಾದರ, ಅಪನಂಬಿಕೆಗಳು ಇರುವುದು. ಕೌಟುಂಬಿಕ ಕಲಹಗಳು ಬಗೆಹರಿಯಲಿದೆ. ವಾರದ ಕೊನೆಯ ಭಾಗದಲ್ಲಿ ನಿಮ್ಮ ಬಹುದೊಡ್ಡ ಕನಸೊಂದು ನನಸಾಗಲಿದೆ. ಪ್ರೀತಿಯಲ್ಲಿ ಇರುವವರಿಗೆ ಸಂಬಂಧಗಳು ಗಟ್ಟಿಯಾಗುತ್ತವೆ. ಉದ್ಯಮದಲ್ಲಿ ನಿಮ್ಮ ಯೋಜನೆಯಷ್ಟು ಲಾಭ ಸಿಗದು. ಲಕ್ಷ್ಮೀನಾರಾಯಣರ ಉಪಾಸನೆ ಮಾಡಿ.
ಕುಂಭ ರಾಶಿ : ಈ ತಿಂಗಳ ಮೊದಲ ವಾರದಲ್ಲಿ ನಿಮಗೆ ಮಿಶ್ರಫಲವಿದೆ. ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರಗಳಿಗೆ ಎಲ್ಲರ ಸಹಮತ ಸಿಗಲಿದೆ. ಪಂಚಮ ಮತ್ತು ಅಷ್ಟಮಾಧಿಪತಿಯು ಸಪ್ತಮಕ್ಕೆ ಬರುವ ಕಾರಣ ಗೊಂದಲಗಳನ್ನು ಎದುರಿಸಬೇಕಾಗುವುದು. ಮಕ್ಕಳ ವಿಚಾರದಲ್ಲಿ ನಿಮಗೆ ಸೂಕ್ತ ನಿರ್ಧಾರ ಮಾಡುವುದು ಕಷ್ಟವಾಗುವುದು. ಉದ್ಯೋಗಲ್ಲಿ ಮುನ್ನಡೆ ಕಷ್ಟವಾಗುವುದು. ವೈವಾಹಿಕ ಜೀವನದಲ್ಲಿ ಯಾವುದೇ ಬಾಧೆಗಳು ಕಾಣಿಸದು. ವಿದ್ಯಾವಂತರಾದ ಸಂಗಾಗಳೇ ನಿಮಗೆ ಸಿಗುವುದು. ಬರುವ ಸಂಪತ್ತನ್ನು ಜೋಪಾನ ಮಾಡುವುದು ಮುಖ್ಯ. ಖರ್ಚಿಗೂ ಬೇಕಾದಂತೆ ಹೊಂದಿಸಿಕೊಳ್ಳಬೇಕು. ಹನುಮಾನ್ ಚಾಲೀಸ್ ನಿಮ್ಮ ಹಲವು ತೊಂದರೆಗಳಿಗೆ ಮದ್ದಾಗುವುದು.
ಮೀನ ರಾಶಿ : ಸಪ್ಟೆಂಬರ್ ತಿಂಗಳ ಮೊದಲ ನಿಮಗೆ ಮಿಶ್ರಫಲವಿದೆ. ಚತುರ್ಥಾಧಿಪತಿಯೂ ಸಪ್ತಮಾಧಿಪತಿಯೂ ಆದ ಬುಧನು ಷಷ್ಠಸ್ಥಾನಕ್ಕೆ ಬರುವ ಕಾರಣ ತಂದೆಯ ಜೊತೆ, ತಾಯಿಯ ಜೊತೆ, ಸಂಗಾತಿಯ ಜೊತೆ ಕಲಹವಾಗಲಿದೆ. ದುಃಖಪಡುವ ಸನ್ನಿವೇಶಗಳು ಬರುವುದು. ನಿಮ್ಮ ವ್ಯವಹಾರವನ್ನು ಇತರರ ಕೈಯಲ್ಲಿ ಬಿಡುವುದನ್ನು ತಪ್ಪಿಸಿ. ಈ ವಾರ ನಿಮಗೆ ಮಾತಿಗಿಂತಲೂ ಮೌನವೇ ಶೋಭೆ ತರುವುದು. ಯಾರನ್ನೂ ಕೂಡ ಹಾಗೆ ಸುಮ್ನನೆ ಕುರುಡಾಗಿ ನಂಬಬೇಡಿ. ನೀವು ಉದ್ಯೋಗ ಬದಲಾಯಿಸಲು ಯೋಚಿಸುತ್ತಿದ್ದರೆ ಒಳ್ಳೆಯದಲ್ಲ. ಕಷ್ಟವೋ ಸುಖವೋ ಇರುವುದನ್ನು ಬಿಟ್ಟುಕೊಳ್ಳುವುದು ಬೇಡ. ಬಂಧುವರ್ಗದಿಂದ ನಿಮಗೆ ಕಿರಿಕಿರಿ ಹೆಚ್ಚಾಗುವುದು. ಉದ್ಯೋಗ ಸ್ಥಳದಲ್ಲಿ ಸವಾಲುಗಳು ಬಂದರೂ ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿರ್ವಹಿಸುವಿರಿ.