ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ 2024ರ ವರ್ಷದ ಮ್ಯೂಸಿಕಲ್ ಬ್ಲಾಕ್ ಬಸ್ಟರ್ ಸಿನಿಮಾವಾದ ಮೇಲೆ, ಗಣಿ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಹಲವರಲ್ಲಿ ಇತ್ತು. ಆ ಪೈಕಿ ಗಣೇಶ್ 2 ಮಲ್ಟಿಸ್ಟಾರರ್ ಸಿನಿಮಾ ತುಂಬಾನೇ ಹೈಪ್ ಕ್ರಿಯೇಟ್ ಮಾಡಿದ್ವು, ಅವುಗಳಲ್ಲಿ ಗಣೇಶ್ ಹಾಗೂ ಶಿವಣ್ಣ ಅಭಿನಯದ ಶಿವಗಣ ಒಂದಾದ್ರೆ ಮತ್ತೊಂದು, ಸ್ಯಾಂಡಲ್ವುಡ್ನ ಇಬ್ಬರು ʻತ್ಯಾಗʼರಾಜರು ನಟಿಸ್ತಾ ಇರೋ ವಿಖ್ಯಾತ್ ನಿರ್ದೇಶನದ ಮತ್ತೊಂದು ಸಿನಿಮಾ. ಈಗ ವಿಖ್ಯಾತ್ ನಿರ್ದೇಶನದ ಸಿನಿಮಾ ಮೊದಲು ಸೆಟ್ಟೇರೋಕೆ ಮುಹೂರ್ತ ಫಿಕ್ಸ್ ಆಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮೇಶ್ ಅರವಿಂದ್ ಅಭಿನಯದ ಇನ್ನು ಹೆಸರಿಡದ ಸಿನಿಮಾ ಇದೇ ಸೆ.6ನೇ ತಾರೀಖು ಗೌರಿ ಹಬ್ಬದ ದಿನ ಮೂಹೂರ್ತ ಮಾಡಿಕೊಳ್ತಾ ಇದೆ. ಸತ್ಯ ರಾಯಲ ನಿರ್ಮಾಣದ ಈ ಸಿನಿಮಾಕ್ಕೆ ವಿಖ್ಯಾತ್ ನಿರ್ದೇಶನ ಮಾಡ್ತಿದ್ದಾರೆ. ಮಾಣ್ಸೂನ್ ರಾಗ, ಪುಷ್ಪಕ ವಿಮಾನ, ರಂಗನಾಯಕ ಸಿನಿಮಾಗಳನ್ನ ನಿರ್ಮಾಣ ಮಾಡಿದ ವಿಖ್ಯಾತ ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡ್ತಾ ಇದ್ದಾರೆ. ಈ ಇಬ್ಬರು ಸೂಪರ್ ಸ್ಟಾರ್ಗಳು ಒಟ್ಟಾಗಿ ತೆರೆಗೆ ಬರ್ತಾ ಇದ್ದು, ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಅನ್ನೋ ಕ್ಯೂರ್ಯಾಸಿಟಿ ಈಗ ಅಭಿಮಾನಿಗಳದ್ದು.