ಲೋಕಸಭಾ ಚುನಾವಣೆಗೆ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಮತ್ತೆ ಗ್ಯಾರಂಟಿ ಮೊರೆ ಹೋಗಿದೆ. ಕರ್ನಾಟಕ, ತೆಲಂಗಾಣದಲ್ಲಿ “ಗ್ಯಾರಂಟಿ” ಗೆಲುವಿನಿಂದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಹೈಕಮಾಂಡ್, ಈಗ ಲೋಕಸಭಾ ಚುನಾವಣೆಗೆ ಬರೋಬರೀ 25 ಭರವಸೆಗಳನ್ನ ಕೊಟ್ಟಿದೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 5 ಗ್ಯಾರಂಟಿಗಳ 25 ಭರವಸೆಗಳನ್ನ ವಿವರಿಸಿದ್ದಾರೆ.
ಕಾಂಗ್ರೆಸ್ “ನ್ಯಾಯ”
- ನಾರಿ ನ್ಯಾಯ
- ರೈತ ನ್ಯಾಯ
- ಶ್ರಮಿಕರ ನ್ಯಾಯ
- ಸಮಾನತೆ ನ್ಯಾಯ
ಕಾಂಗ್ರೆಸ್ ಯುವ ನ್ಯಾಯ
- ಉದ್ಯೋಗ ಖಾತ್ರಿ ಮೂಲಕ ಯುವಕ, ಯುವತಿಯರಿಗೆ ವರ್ಷಕ್ಕೆ 1 ಲಕ್ಷ ಅಪ್ರೆಂಟಿಸ್ಶಿಪ್
- ನೇಮಕಾತಿ ವೇಗ, 30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ
- ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಹೊಸ ಕಾನೂನು
- ಗುತ್ತಿಗೆ ಆಧಾರದಲ್ಲಿ ಅರೆಕಾಲಿಕ ಉದ್ಯೋಗಿಗಳ ರಕ್ಷಣೆ
- “ಯುವ ರೋಷನಿʼ ಮೂಲಕ ಯುವಜನರಿಗೆ 5,000 ಕೋಟಿ ಸ್ಟಾರ್ಟಪ್ ಫಂಡ್
ಕಾಂಗ್ರೆಸ್ ನಾರಿ ನ್ಯಾಯ
- ಮಹಾಲಕ್ಷ್ಮೀ ಯೋಜನೆಯಿಂದ ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೂ ವಾರ್ಷಿಕ 1 ಲಕ್ಷ ಧನಸಹಾಯ
- ಕೇಂದ್ರ ಸರ್ಕಾರದ ಹೊಸ ಉದ್ಯೋಗ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲು
- ಆಶಾ, ಬಿಸಿಯೂಟ, ಅಂಗನವಾಡಿ ಕಾರ್ಯಕರ್ತರಿಗೆ ಹೆಚ್ಚಿನ ಸಂಬಳ
- “ಅಧಿಕಾರ ಮೈತ್ರಿ”ಯಿಂದ ಪ್ರತಿಯೊಂದು ಪಂಚಾಯಿತಿಯಲ್ಲೂ ಮಹಿಳೆಯರಿಗೆ ಯೋಜನೆಗಳು ಮತ್ತು ಕಾನೂನು ಹಕ್ಕುಗಳ ಬಗ್ಗೆ ಮಾಹಿತಿ ಕೊಡುವ ಅಧಿಕಾರಸಖಿ
- ಉದ್ಯೋಗಸ್ಥ ಮಹಿಳೆಯರಿಗೆ ಸಾವಿತ್ರಿಬಾಯಿ ಫುಲೆ ಹಾಸ್ಟಲ್ ಸಂಖ್ಯೆ ಹೆಚ್ಚಳ
ಕಾಂಗ್ರೆಸ್ ರೈತ ನ್ಯಾಯ
- ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಎಂಎಸ್ಪಿ
- ಸಾಲ ಮನ್ನಾ ಜಾರಿಗೊಳಿಸಲು ಶಾಶ್ವತ ಆಯೋಗ ರಚನೆ
- ಬೆಳೆ ವಿಮೆ ಮಾಡಿಸಿದವರಿಗೆ ಬೆಳೆ ನಷ್ಟವಾದರೆ ಪರಿಹಾರ, 30 ದಿನದೊಳಗೆ ಖಾತೆಗೆ ಜಮೆ
- ರೈತರ ಸಲಹೆ ಪಡೆದು ಹೊಸ ಆಮದು ಮತ್ತು ರಫ್ತು ನೀತಿ ರಚನೆ
- ಕೃಷಿಗಾರಿಕೆಯಲ್ಲಿ ಜಿಎಸ್ಟಿಯಿಂದ ಮುಕ್ತ ಮತ್ತು ತೆರಿಗೆ ಕಡಿತ
ಕಾಂಗ್ರೆಸ್ ಕಾರ್ಮಿಕ ನ್ಯಾಯ
- ಮನ್ರೇಗಾ ಯೋಜನೆ ಅಡಿ ಕೆಲಸ ಮಾಡುವ ಕಾರ್ಮಿಕರಿಗೂ 400 ದಿನಗೂಲಿ
- ಪ್ರತಿಯೊಬ್ಬರಿಗೂ 25 ಲಕ್ಷ ರೂ ಆರೋಗ್ಯ ವಿಮೆ, ಉಚಿತ ಚಿಕಿತ್ಸೆ, ಆಸ್ಪತ್ರೆ, ವೈದ್ಯ, ಔಷಧ, ಪರೀಕ್ಷೆ, ಸರ್ಜರಿ ವೆಚ್ಚ ಭರಿಸುವುದು
- ನರೇಗಾದಂತಹ ಹೊಸ ಯೋಜನೆಗಳನ್ನು ನಗರ ಪ್ರದೇಶಗಳಲ್ಲೂ ಜಾರಿ
- ಅಸಂಘಟಿತ ವಲಯದ ಕಾರ್ಮಿಕರಿಗೆ ಲೈಫ್ ಇನ್ಷೂರೆನ್ಸ್ ಮತ್ತು ಆ್ಯಕ್ಸಿಡೆಂಟ್ ಇನ್ಷೂರೆನ್ಸ್
- ಮುಖ್ಯ ಸರ್ಕಾರಿ ಕಾರ್ಯಗಳಿಗೆ ಗುತ್ತಿಗೆ ಆಧಾರಿತ ವೇತನ ನಿಲ್ಲಿಸಲಾಗುವುದು
ಕಾಂಗ್ರೆಸ್ ಸಮಾನತೆ ನ್ಯಾಯ
- ಪ್ರತಿಯೊಂದು ವರ್ಗ, ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ
- ಸಂವಿಧಾನಿಕ ತಿದ್ದುಪಡಿ ಮೂಲಕ ಶೇ. 50ರಷ್ಟಿರುವ ಮೀಸಲಾತಿ ಮಿತಿ ತೆಗೆದು, sc/st & obcಗೆ ಸಂಪೂರ್ಣ ಮೀಸಲಾತಿ ಹಕ್ಕು
- ಎಸ್ಸಿ ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅವರಿಗೆ ಹೆಚ್ಚು ಪಾಲು
- ಅರಣ್ಯ ಹಕ್ಕು ಕಾಯ್ದೆ ಅಡಿ ಒಂದು ವರ್ಷಕ್ಕೆ ಗುತ್ತಿಗೆಗಳನ್ನು ನೀಡಲು ನಿರ್ಧರಿಸಲಾಗುವುದು
- ನಮ್ಮ ಭೂಮಿ ನಮ್ಮ ಆಡಳಿತ : ಪರಿಶಿಷ್ಟ ಪಂಗಡದವರ ಸಂಖ್ಯೆ ಹೆಚ್ಚಿರುವ ಕಡೆ PESA ಜಾರಿ