ಲೋಕಸಭೆ ಚುನಾವಣೆಯಲ್ಲಿ ಜಿದ್ದಿನ ಕ್ಷೇತ್ರವಾಗಿರೋ ಬೆಂಗಳೂರು ಗ್ರಾಮಾಂತರದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ವೇಗಕ್ಕೆ ಮೈತ್ರಿ ಪಡೆ ಥಂಡಾ ಹೊಡೆದಿದೆ. ಸಹೋದರನ ಗೆಲುವಿಗೆ ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ ಕನಕಪುರದ ಬಂಡೆ. ಡಿಕೆಶಿಯ ಮಿಡ್ನೈಟ್ ಆಪರೇಷನ್ಗೆ ಜೆಡಿಎಸ್ ಶಾಕ್ ಆಗಿದ್ದು, ಆಪರೇಷನ್ ಹಸ್ತದ ಮೂಲಕ 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿದ್ದಾರೆ. ಕ್ಷೇತ್ರದ ಅಕ್ಕೂರು ದೊಡ್ಡಿ ಶಿವಣ್ಣ ಸೇರಿ 300ಕ್ಕೂ ಹೆಚ್ಚು ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ್ರು, ಮಧ್ಯರಾತ್ರಿ 12 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇವರೆಲ್ಲಾರು ಪಕ್ಕಾ ಕುಮಾರಸ್ವಾಮಿ ಬೆಂಬಲಿಗರು. ಪ್ರತಿದಿನ ಸಾವಿರಾರು ಜನ ಕಾಂಗ್ರೆಸ್ ಸೇರುತ್ತಿದ್ದಾರೆ ಅಂತ ಹೇಳಿದರು.