ಮಧ್ಯಪ್ರಾಚ್ಯ ಇಸ್ಲಾಮಿಕ್ ದೇಶ ಸಿರಿಯಾದಲ್ಲಿ 14 ವರ್ಷಗಳಿಂದ ನಡೆಯುತ್ತಿದ್ದ ಹಾಗೂ 5 ಲಕ್ಷ ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಅಂತರ್ಯುದ್ದ ತಾರ್ಕಿಕ ಅಂತ್ಯದ ಘಟ್ಟಕ್ಕೆ ತಲುಪಿದ್ದು, ದೇಶದ ಅಧ್ಯಕ್ಷರಾಗಿದ್ದ ಸರ್ವಾಧಿಕಾರಿ ಬಷರ್ ಅಲ್ ಅಸಾದ್ ದೇಶ ಬಿಟ್ಟು ಭಾನುವಾರ ನಸುಕಿನಲ್ಲಿ ರಷ್ಯಾಕ್ಕೆ ಪರಾರಿಯಾಗಿದ್ದಾರೆ. ಈ ಮೂಲಕ ಅಸಾದ್ ಅವರ 24 ವರ್ಷದ ಆಳ್ವಿಕೆ ಹಾಗೂ ಅವರ ಕುಟುಂಬದ 50 ವರ್ಷದ ಆಳ್ವಿಕೆ ಅಂತ್ಯಗೊಂಡಿದೆ.
ಅಲ್ಖೈದಾ ಬೆಂಬಲಿತ ಹಯಾತ್ ತಹೀರ್ ಅಲ್-ಶಾಮ್ (ಎಚ್ ಟಿಎಸ್) ಎಂಬ ಉಗ್ರ ಸಂಘಟನೆಯ ನಾಯಕ ಅಬು ಮೊಹಮ್ಮದ್ ಅಲ್-ಗೋಲಾನಿ ಕಳೆದ 2011ರಿಂದ ಧಿಕಾರದ ವಿರುದದ ದಂಗೆಯ ನೇತೃತ್ವ ವಹಿಸಿದ್ದ. ಈ ದಂಗೆ ಬಷರ್ ಅಲ್ ಅಸಾದ್ ಸುಮಾರು ಒಂದೂ ವರೆ ದಶಕಗಳ ಬಳಿಕ ಫಲನೀಡಿದ್ದು, ರಾಜಧಾನಿ ಡಮಾಸ್ತಸ್ ಬಂಡುಕೋರರ ವಶಕ್ಕೆ ಬಂದಿದೆ. ಅಧ್ಯಕ್ಷೀಯ ಅರಮನೆಯನ್ನೂ ಬಂಡುಕೋ ರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ದೇಶದ ಹಾಲಿ ಪ್ರಧಾನಿ ಮೊಹಮ್ಮದ್ ಅಲ್-ಜಲಾಲಿ ಅವರನ್ನು ಸದ್ಯದ ಮಟ್ಟಿಗೆ ಅಧಿಕಾರ ಹಸ್ತಾಂತರ ಪೂರ್ಣಗೊಳ್ಳುವ ಪ್ರಕ್ರಿಯೆವರೆಗೆ ಮುಂದುವರಿಯಲು ಉಗ್ರ ನಾಯಕ ಗೋಲಾನಿ ಸೂಚಿಸಿದ್ದಾನೆ ಹಾಗೂ ಅಧಿಕಾರ ಹಸ್ತಾಂತರಕ್ಕೆ ಪ್ರಾಧಿಕಾರ ರಚಿಸಲು ತಾಕೀತು ಮಾಡಿದ್ದಾನೆ.
ಇದರ ಬೆನ್ನಲ್ಲೇ ಮಾತನಾಡಿರುವ ಗೋಲಾನಿ, ‘ಬಂಡುಕೋರರಿಗೆ ನಾನು ಅಧಿಕಾರ ಹಸ್ತಾಂತರಿಸಲು ಸಿದ್ಧ’ ಎಂದಿದ್ದು, ಮುಂದೆ ಚುನಾವಣೆ ನಡೆಯಲಿ ಎಂಬ ಮನವಿಯನ್ನೂ ಮಾಡಿದ್ದಾರೆ. ರಾಜಧಾನಿ ಉಗ್ರರ ತೆಕ್ಕೆಗೆ: 2011ರಿಂದ ಅಸಾದ್ ಸರ್ವಾಧಿಕಾರದ ವಿರುದ್ಧ ದಂಗೆ ಆರಂಭವಾಗಿತ್ತು. ಅಲ್ ಖೈದಾ ಬೆಂಬಲಿತ ಹಯಾತ್ ತಹೀರ್ಅಲ್-ಶಾಮ್ (ಎಚ್ ಟಿಎಸ್) ಬಂಡುಕೋರರು ಇದರ ನೇತೃತ್ವವಹಿ ಸಿದ್ದರು. 2018ರವರೆಗೆ ಜೋರಾಗಿ ನಡೆದಿದ್ದ ದಂಗೆಯನ್ನು ಆ ಬಳಿಕ ಇರಾನ್, ಹಿಜ್ಜುಲ್ಲಾ ಉಗ್ರರು ಹಾಗೂ ರಷ್ಯಾ ಬೆಂಬಲದೊಂದಿಗೆ ಅಸಾದ್ ಯಶಸ್ವಿಯಾಗಿ ಹತ್ತಿಕ್ಕಿದ್ದರು.
ಆದರೆ ಇತ್ತೀಚೆಗೆ ಎಚ್ಟಿಎಸ್ ಉಗ್ರರ ಮೇಲೆ ಅಸಾದ್ ಸ್ನೇಹಿ ದೇಶ ರಷ್ಯಾ ವಾಯು ದಾಳಿ ಆರಂಭಿಸಿತ್ತು. ಇದರಿಂದ ವ್ಯಗ್ರರಾದ ಎಚ್ಟಿಎಸ್ ಉಗ್ರರು ಕಳೆದ 1 ವಾರದಿಂದ ಮತ್ತೆ ದಂಗೆ ಆರಂಭಿಸಿ ಶನಿವಾರದವರೆಗೆ 4 ಪ್ರಮುಖ ನಗರಗಳನ್ನು ವಶಕ್ಕೆ ತೆಗೆದುಕೊಂಡಿ ದ್ದರು. ಕೊನೆಗೆ ಶನಿವಾರ ತಡರಾತ್ರಿ ಅಥವಾ ಭಾನುವಾರನಸುಕಿನಲ್ಲಿರಾಜಧಾನಿ ಡಮಾಸ್ಕಸ್ ಅನ್ನೂ ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಉಗ್ರರ ಆರ್ಭಟಕ್ಕೆ ಬೆಚ್ಚಿ ಸೇನೆಯು ಶಸ್ತ್ರಾಸ್ತ್ರ ಬಿಟ್ಟು ಪರಾರಿ ಆಗಿದೆ. ಹಿಜ್ಜುಲ್ಲಾ ಸಂಘಟನೆ ಕೂಡ ಸೇನೆಗೆ ತಣ್ಣಗಾಗುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಅಸಾದ್ ದೇಶ ಬಿಟ್ಟು ರಷ್ಯಾಕ್ಕೆ ವಿಮಾನವೊಂದನ್ನು ಹತ್ತಿ ಶನಿವಾರ ತಡರಾತ್ರಿ ಪರಾರಿಯಾಗಿದ್ದಾರೆ.
ಆಗಿದ್ದೇನು?
2011ರಲ್ಲಿ ಅರಬ್ ದೇಶಗಳಲ್ಲಿ ಸರ್ವಾಧಿಕಾರಿಗಳ ವಿರುದ್ಧ ‘ಅರಬ್ ದಂಗೆ’ ಆರಂಭವಾಯಿತು. ಈಜಿಪ್ಟ್, ಟ್ಯುನಿಷಿಯಾ, ಲಿಬಿಯಾ ಸರ್ವಾಧಿಕಾರಿಗಳು ಪತನರಾದರು
ಆ ದಂಗೆ ಸಿರಿಯಾಕ್ಕೂ ಪ್ರವೇಶಿ ಸಿತ್ತು. ಬಷರ್ ಅಲ್ ಅಸಾದ್ಗೆ ಆರಂಭದಲ್ಲಿ ನಡುಕ ಹುಟ್ಟಿತ್ತು. ಆದರೆ ರಷ್ಯಾ ಹಾಗೂ ಇರಾನ್ ನೆರವಿನೊಂದಿಗೆ ದಂಗೆಕೋರರನ್ನು ಬಷರ್ ಮಟ್ಟ ಹಾಕಿದ್ದರು
ಸಿರಿಯಾ ದಂಗೆಯ ನೇತೃತ್ವ ಹೊತ್ತಿದ್ದು ಅಲ್ಖೈದಾ ಉಗ್ರರ ಬೆಂಬಲಿತ ಹಯಾತ್ ತಹೀರ್ ಅಲ್- ಶಾಮ್ (ಎಚ್ಟಿಎಸ್) ಬಂಡು ಕೋರರು. 2018ರ ಬಳಿಕ ಎಚ್ಟಿಎಸ್ ಹೋರಾಟ ಕೊಂಚ ಬಲ ಕಳೆದುಕೊಂಡಿತ್ತು.
ಮತ್ತೆ ಉಗ್ರ ಬೆಂಬಲಿತ ಸಂಘಟನೆ ಯ ಹೋರಾಟ ತೀವ್ರಗೊಂಡಾಗ ಸಿರಿಯಾದ ಮಿತ್ರ ದೇಶ ರಷ್ಯಾ ವೈಮಾನಿಕ ದಾಳಿ ನಡೆಸಿ ದಂಗೆಕೋ ರರನ್ನು ಮಟ್ಟ ಹಾಕಲು ಯತ್ನಿಸಿತ್ತು
ಇದರಿಂದ ವ್ಯಗ್ರರಾದ ಉಗ್ರರು ಒಂದು ವಾರದಿಂದ ಹೋರಾಟ ತೀವ್ರಗೊಳಿಸಿ, 4 ಪ್ರಮುಖ ನಗರಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಭಾನುವಾರ ನಸುಕಿನಲ್ಲಿ ರಾಜಧಾನಿ ಡಮಾಸ್ಕಸ್ ಅನ್ನೇ ವಶಕ್ಕೆ ಪಡೆದರು
ರಷ್ಯಾಗೆ ಅಸಾದ್ ಪರಾರಿ
ಸಿರಿಯಾ ಬಂಡುಕೋರರ ದಾಳಿಗೆ ಬೆಚ್ಚಿ ದೇಶ ಬಿಟ್ಟು ಓಡಿ ಹೋಗಿರುವ ಪದಚ್ಯುತ ಅಧ್ಯಕ್ಷ ಬಷರ್ ಅಲ್ ಅಸಾದ್ ಎಲ್ಲಿದ್ದಾರೆ ಎಂಬ ನಿಖರ ಮಾಹಿತಿ ಆರಂಭದಲ್ಲಿ ಲಭ್ಯವಿಲ್ಲ. ಕೆಲವರು ಯುಎಇಗೆ ತೆರಳಿದ್ದಾರೆ ಎಂದಿದ್ದರೆ, ಆದರೆ, ಕೆಲವರು ಅಸಾದ್ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದಿದ್ದರು. ಆದರೆ ಅಸಾದ್ ರಷ್ಯಾಕ್ಕೆ ತೆರಳಿದ್ದು, ಅವರಿಗೆ ರಷ್ಯಾದಲ್ಲಿ ರಾಜಾಶ್ರಯ ಸಿಕ್ಕಿದೆ ಎಂದು ತಡರಾತ್ರಿ ವೇಳೆಗೆ ಗೊತ್ತಾಯಿತು.