ಹೊಲದಲ್ಲಿದ್ದ ಶೆಡ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೆಳಗಲಿ ವ್ಯಾಪ್ತಿಯ ಹೊಲವೊಂದರಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ಮೂವರು ಪಾರಾಗಿದ್ದಾರೆ. ಮಹಾಲಿಂಗಪೂರ ಮೂಲದ ದಸ್ತಗೀರ ಸಾಬ ಮೌಲಾಸಾಬ್ ಪೆಂಡಾರಿ ಎಂಬುವವರ ಮನೆ ಮೇಲೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಪೆಟ್ರೋಲ್ ಹಾಕಿ ಶೆಡ್ಗೆ ಬೆಂಕಿ ಹಚ್ಚಿದ್ದಾರೆ. ಶೆಡ್ನಲ್ಲಿ 5 ಜನ ನಿದ್ರೆಯಲ್ಲಿದ್ದರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ. ಮಗಳು ಶಬಾನಾ ಪೆಂಡಾರಿ, ಜಯನಬಿ ಪೆಂಡಾರಿ ಪತ್ನಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ದಸ್ತಗೀರ್, ಸುಭಾನಾ, ಸಿದ್ದಿಕ್ ಎಂಬುವವರಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಲದಲ್ಲಿ ಉಳುಮೆ ಮಾಡಿಕೊಂಡಿದ್ದ ಕುಟುಂಬ ದಸ್ತಗೀರ ಸಾಬ ಮೌಲಾಸಾಬ್ ಪೆಂಡಾರಿ ಕುಟುಂಬ ಎರಡೂವರೆ ಎಕರೆ ಹೊಲದಲ್ಲಿ ಉಳುಮೆ ಮಾಡಿಕೊಂಡಿದ್ದರು. ಆದರೆ ತಡರಾತ್ರಿ ದುಷ್ಕರ್ಮಿಗಳು ಶೆಡ್ ಮೇಲೆ ಪೆಟ್ರೋಲ್ ಸುರಿದು ಕೃತ್ಯವೆಸಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮೂವರು ಮನೆಯಿಂದ ಓಡೋಡಿ ಹೊರಬಂದಿದ್ದಾರೆ. ಇನ್ನಿಬ್ಬರನ್ನ ಪಾರು ಮಾಡುವಷ್ಟರಲ್ಲಿ ಬೆಂಕಿಗೆ ಹೊತ್ತಿ ಉರಿದಿದ್ದಾರೆ.
ಡೋರ್ ಲಾಕ್ ಮಾಡಿ ಬೆಂಕಿ ಹಚ್ಚಿದ್ರು. ದುಷ್ಕರ್ಮಿಗಳು ಶೆಡ್ ಗೆ ಪೆಟ್ರೋಲ್ ಸುರಿಯಲು 2 HP ಸಾಮರ್ಥ್ಯದ ಮೋಟರ್ ಬಳಕೆ ಮಾಡಿದ್ದಾರೆ. 100 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಗೆ ಪೆಟ್ರೋಲ್ ಹಾಕಿ ಸಿಂಪಡಿಸಿದ್ದಾರೆ. ಶೆಡ್ ನ ಹೊರಗಡೆಯಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.