ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ವಿಚಾರವಾಗಿ ವಿಪಕ್ಷ ಆರ್ ಅಶೋಕ್ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕೆಂದು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಜನರ ನಿರೀಕ್ಷೆಗಳನ್ನ ಹುಸಿಗೊಳಿಸಿದೆ,ಭ್ರಷ್ಟಾಚಾರ, ದಲಿತರ ಸಾವು, ಅಕ್ರಮಗಳೇ ಗ್ಯಾರಂಟಿ ಆಗಿ ಹೋಗಿದೆ ಈಗಾಗ್ಲೆ ಜನ ಕಾಂಗ್ರೆಸ್ ನಡಿಗೆ ಭ್ರಷ್ಟಾಚಾರದ ಕಡೆಗೆ ಅಂತ ಮಾತ್ನಾಡ್ತಿದ್ದಾರೆ. ಸಿದ್ದರಾಮಯ್ಯ ಯಾವಾಗ್ಲೂ ನಾನು ಕ್ಲೀನ್ ಕ್ಲೀನ್ ಅಂತ ಹೇಳ್ತಿರ್ತಾರೆ ಅವರು ಕ್ಲೀನ್ ಆಗಿದ್ರೆ ರಾಜ್ಯಪಾಲರ ಅನುಮತಿಯನ್ನ ಸ್ವಾಗತ ಮಾಡಿ ನಾನು ತನಿಖೆ ಎದುರಿಸುತ್ತೀನಿ ಅಂತ ಹೇಳ್ಬೆಕಿತ್ತು, ಆದ್ರೆ ರಾಜ್ಯಪಾಲರು ಬಿಜೆಪಿ ಸರ್ಕಾರದ ಕೈ ಗೊಂಬೆ ಆಗಿದ್ದಾರೆ ಅಂತ ಆರೋಪ ಮಾಡ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 65 ಕೇಸ್ಗಳಿದ್ದವು. ಎಲ್ಲಾ ಕೇಸ್ ಗಳನ್ನ ಎಸಿಬಿ ಮೂಲಕ ಮುಚ್ಚಿ ಹಾಕ್ಸಿ 5 ವರ್ಷಗಳ ಕಾಲ ಆಡಳಿತ ನಡೆಸಿದ್ರು ಅಂತ ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಈ ವೇಳೆ ಕಾಂಗ್ರೆಸ್ ಪರ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಕಾರರ ವಿರುದ್ಧ ಕೂಡ ಆರ್.ಅಶೋಕ್ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ರಾಜ್ಯಪಾಲರ ಕಟೌಟ್ ಗೆ ಬೆಂಕಿ ಹಚ್ಚಿದ್ರು. ಪೊಲೀಸರು ಕೈ ಕಟ್ಕೊಂಡು ಸುಮ್ನೆ ನಿಂತಿದ್ದಾರೆ ಕಾಂಗ್ರೆಸ್ ಸರ್ಕಾರದವರು ಎಲ್ಲಾರನ್ನು ಕೊಂಡ್ಕೊಂಡಿದ್ದಾರೆ ಅಂತ ಹರಿಹಾಯ್ದರು. ಇನ್ನೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌದದ ಗಾಂಧಿ ಪ್ರತಿಮೆ ಎದುರು ಬಿಜೆಪಿಯ ಎಲ್ಲಾ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.