ನನ್ನ ಬಂಧನಕ್ಕೆ ಡಿ.ಕೆ.ಸುರೇಶ್ ಮತ್ತು ಕುಸುಮ ಷಡ್ಯಂತ್ರ ನಡೆಸಿದ್ದಾರೆ ಅನ್ನೋ ಮುನಿರತ್ನ ಆಡಿಯೋಗೆ ಕುಸುಮ ಹನುಮಂತರಾಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮುನಿರತ್ನ ಅವರು ಹಿರಿಯ, ಅನುಭವಿ ರಾಜಕಾರಣಿಯಾಗಿದ್ದಾರೆ, ಯಾರೋ ಹೇಳಿ ಕೊಡುವಷ್ಟು ಸಣ್ಣ ಮಗುವಲ್ಲ,ಏನು ಮಾತಾಡ್ತಿದ್ದೇನೆ ಅಂತ ಅವರ ಜ್ಞಾನದಲ್ಲಿರಬೇಕಿತ್ತು ಎಂದು ಮುನಿರತ್ನ ವಿರುದ್ಧ ಆರ್ಆರ್ ನಗರ ಪರಾಜಿತ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಬಂಧಿಸಿದ ಮೇಲೆ ಈಗ ಷಡ್ಯಂತ್ರ ಅಂತಿದ್ದಾರೆ, ಮಹಿಳೆಯರು ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಗುತ್ತಿಗೆದಾರರಿಗೆ ಜೀವ ಬೆದರಿಕೆ ಹಾಕಿದ್ದಾರೆ ಆದರೆ ಇದಕ್ಕೆ ಬದಲಾಗಿ ಗುತ್ತಿಗೆದಾರರು ಮುನಿರತ್ನ ಅವರ ಇನ್ನೊಂದು ಮುಖ ಪರಿಚಯಿಸಿದ್ದಾರೆ. ಸಾಮಾನ್ಯ ವ್ಯಕ್ತಿಗೆ ಶಿಕ್ಷೆಯಾಗುವಂತೆ ಮುನಿರತ್ನಗೆ ಶಿಕ್ಷೆಯಾಗಲಿ ಎಂದು ಕುಸುಮ ಹನುಮಂತರಾಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.