ವಿರೋಧ ಪಕ್ಷಗಳು ಸರ್ಕಾರವನ್ನು ಬೀಳಿಸುವ ಪ್ರಯತ್ನಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಕಿಡಿಕಾರಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ಬೀಳಿಸುವುದು ತಮಾಷೆಯಲ್ಲ. 136 ಜನರು ನಾವು ಇದ್ದೇವೆ, ಯಾವ ರೀತಿ ಸರ್ಕಾರ ಬೀಳಿಸುತ್ತಾರೆ ಎಂದು ಪ್ರಶ್ನೆ ಮಾಡಿದರು. ಇನ್ನು ಇದೇ ವೇಳೆ ಬಿಜೆಪಿ, ಜೆಡಿಎಸ್ ನ ಪಾದಯಾತ್ರೆ ಮೈಸೂರು ಪ್ರವೇಶಕ್ಕೆ ನಾವು ಬೇಡ ಅಂತ ಹೇಳಿಲ್ಲ. ಮೊದಲೇ ಪ್ಲ್ಯಾನ್ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಪ್ರಶ್ನೆಗಳನ್ನು ಕೇಳಿದ್ದೇವೆ. ಅದಕೆ ಉತ್ತರ ಕೊಡಲಿ, ಪಾದಯಾತ್ರೆ ಹೊರಟಿದ್ದೇ ಅವರು. ನಾವು ಈಗಾಗಲೇ ಉತ್ತರ ಕೊಟ್ಟಿದ್ದೇವೆ. ಸಿಎಂ ವಿರುದ್ಧದ ವಿಚಾರಕ್ಕೆ ಗೌರ್ನರ್ ಗೆ ಕೂಡ ಉತ್ತರ ಕೊಟ್ಟಿದ್ದೇವೆ ಎಂದರು.
ಸಿಎಂ ವಿರುದ್ಧ ಟಿ ಜೆ ಅಬ್ರಾಹಂ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಾಗಲೇ ಹತ್ತಾರು ಕೇಸ್ ಗಳು ರಾಜ್ಯಪಾಲರ ಕಚೇರಿಯಲ್ಲಿದ್ದಾವೆ. ಈ ಪ್ರಕರಣವನ್ನು ರಾಜ್ಯಪಾಲರ ತರಾತುರಿಯಲ್ಲಿ ಕೊಟ್ಟಿದ್ದಾರೆ. ಇದರ ಹಿಂದೆ ಷಡ್ಯಂತರ ಇದೆ ಎಂದು ಕಾಣಿಸುತ್ತಿದೆ. ಬಿಜೆಪಿಗರು ರಾಜಭವನದ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ. ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ. ಇದನ್ನು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಇನ್ನು ಹಿಂದಿನ ಸರ್ಕಾರದ ಬೇರೆ ಬೇರೆ ಪ್ರಕರಣಗಳಲ್ಲಿ ಈಗಾಗಲೇ ತನಿಖೆ ಆಗುತ್ತಿದೆ. ದೇವರಾಜ್ ಅರಸು ಪ್ರಕರಣದಲ್ಲಿ ಚೆಕ್ ಮೂಲಕ ಹಣ ಪಡೆದಿದ್ದಾರೆ. ಚೇರಮೆನ್, ಅಧ್ಯಕ್ಷರನ್ನು ಅರೆಸ್ಟ್ ಮಾಡಲಾಗಿದೆ. ಭೋವಿ ಹಗರಣದ ತನಿಖೆ ಕೂಡ ಆಗುತ್ತಿದೆ.. ವರದಿ ಬರಲಿ. ವರದಿ ಆಧರಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ರೆ ಹೋರಾಟ ಮಾಡುತ್ತೇವೆ ಎಂದರು