ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸಿಎಂ, ಡಿಸಿಎಂ ವಿರುದ್ಧ ಕಂಠಸಮರವನ್ನೇ ಸಾರಿದರು. ಮಿಸ್ಟರ್ ಶಿವಕುಮಾರ್ ಚಾಮುಂಡೇಶ್ವರಿ ತಾಯಿ ಕ್ಷೇತ್ರದಲ್ಲಿ ನಿಂತು ಮಾತಾಡ್ತಿದ್ದೇನೆ. ಕೊತ್ವಾಲ್ ಜೊತೆ ಜೀವನ ಮಾಡಿಕೊಂಡಿದ್ದವನಿಗೆ ಎಸ್.ಎಂ ಕೃಷ್ಣ ರಾಜಕೀಯ ಜೀವನ ಕೊಟ್ರು, ಸಿದ್ದಾರ್ಥ ಎಂಬ ಶ್ರಮ ಜೀವಿ ಆತ್ಮಹತ್ಯೆಗೆ ಕಾರಣ ಯಾರು ಅಂತ ಜನರ ಮುಂದೆ ಇಡ್ತಿರಾ..? ನಮ್ಮ ಬಗ್ಗೆ ಮಾತಾಡೊದಕ್ಕೆ ಯಾವ ನೈತಿಕತೆ ಇದೆ. ನಾನು ರಾಜಕೀಯಕ್ಕೆ ಹುಟ್ಟಿದ್ದಾಗ ನಿಖಿಲ್ ಹುಟ್ಟಿರಲಿಲ್ಲಾ ಅಂತಾರೆ ಡಿ.ಕೆ ಶಿವಕುಮಾರ್ ದೇವೇಗೌಡ್ರು ಮೊದಲು ಶಾಸಕರಾಗಿದ್ದಾಗ ನೀವು ಹುಟ್ಟಿದ್ರಾ? ಎಂದು ತೀವ್ರ ವಾಗ್ದಾಳಿ ನಡೆಸಿದರು.
ರೇವಣ್ಣನ ಕುಟುಂಬದ ಮಕ್ಕಳನ್ನು ಜೈಲಿಗೆ ಕಳಿಸಿದ್ದಿರಾ, ರೇವಣ್ಣ ಮೇಲೆ ಯಾವ ಕೇಸ್ ಇಲ್ಲಾ, ಕೇಸನ್ನ ಸೃಷ್ಟಿ ಮಾಡಿದ್ದಿರಾ, ನನ್ನ ಮಗನನ್ನ ಬೆಳೆಸೊದಕ್ಕೆ ಅವರ ಮಕ್ಕಳನ್ನ ಹಾಳು ಮಾಡಿದ್ರು ಅಂತಾ ಹೇಳ್ತಿರಾ ಮಿಸ್ಟರ್ ಶಿವಕುಮಾರ್ ಎಂದು ಡಿಕೆಶಿನ ತರಾಟೆಗೆ ತೆಗೆದುಕೊಂಡರು. ಯಡಿಯೂರಪ್ಪ ಅವರಿಗೆ 82 ವರ್ಷ, ಸುಳ್ಳು ಕೇಸ್ ಫಿಕ್ಸ್ ಮಾಡಿ ಜೈಲಿಗೆ ಕಳಿಸಬೇಕಂತ ಹೊರಟಿದ್ದಿರಾ, ನಾಚಿಕೆ ಆಗಬೇಕು ನಿಮಗೆ ಎಂದರು.
21 ಅಕ್ರಮಗಳನ್ನ ಬಿಚ್ಚಿಡ್ತಿವಿ ಅಂತಾರೆ ಏನು ಬಿಚ್ಚಿಡ್ತಿರಾ ನಿಮ್ಮ ಯೋಗ್ಯತೆಗೆ, ಯಾರ ದುಡಿಮೆ, ಯಾರೊ ಹುತ್ತ ಕಟ್ಟಿರ್ತಾರೆ ಬಂದು ರಾಜಕೀಯ ಮಾಡೊರು ನೀವು ಸಿದ್ದರಾಮಯ್ಯ ಎಂದರು. ಇನ್ನು ಮೋದಿ ಪ್ರಧಾನಿಯಾದರೆ ದೇಶ ಬಿಡ್ತಿನಿ ಎಂದಿದ್ದ ದೇವೇಗೌಡ್ರ ಹೇಳಿಕೆಗೆ ಕೌಂಟರ್ ಕೊಟ್ಟ ಕುಮಾರಸ್ವಾಮಿ, ಗುಜರಾತ್ ನಲ್ಲಿ ಆದ ಹಿಂಸೆಯ ಬಳಿಕ ದೇವೇಗೌಡ್ರು ಮಾತಾಡಿದ್ರು ಆದ್ರೆ ಮೊದಿ ವಿರುದ್ದವಲ್ಲಾ, ದೇವೇಗೌಡರನ್ನ ಪ್ರಧಾನಿ ಮಾಡುದ್ರಂತೆ, ತೆಗೆದಿದ್ದು ಯಾರಪ್ಪ? ಎಂದು ಪ್ರಶ್ನಿಸಿದ್ದಾರೆ.
20-20 ಸರ್ಕಾರ ಇದ್ದಾಗ, ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಿಕೊಡಬೇಕಂತ ಹೊರಟಿದ್ದೆ, ನಾನು ಮಾಡಿದಿರುವ ತಪ್ಪಿಗೆ 15 ವರ್ಷ ಶಿಕ್ಷೆ ಅನುಭವಿಸಿದ್ದೇನೆ, ನಾನು ಸುಳ್ಳು ಹೇಳ್ತಿದ್ರೆ ತಾಯಿ ಚಾಮುಂಡೇಶ್ವರಿ ತೀರ್ಮಾನಕ್ಕೆ ಬಿಡುತ್ತೇನೆ ಎಂದರು. ಅರ್ಕಾವತಿ, ಕೆಂಪಣ್ಣ ವರದಿ ಇದ್ಯಾಲ್ಲಾ ತೆಗಿರಪ್ಪ ಬಾಗಿಲು, ರಿಡು ಇದ್ಯಲಾ, ಪೊನಣ್ಣ ಕೈಯಲ್ಲಿ ಸಂಚು ಎಂಬ ಪುಸ್ತಕ ಬಿಡುಗಡೆ ಮಾಡಿಸಿದ್ದಾರೆ, ಸ್ವಂತಿಕೆ ಅನ್ನೋದು ಒಂದಾದ್ರು ಬೇಡ್ವ ನಿಮಗೆ ಸಿದ್ದರಾಮಯ್ಯ ಅವರೇ ಅಧಿಕಾರ ಯಾರಿಗೂ ಶಾಶ್ವತ ಅಲ್ಲಾ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.