ವಿಧಾನಸೌಧದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ಮುಡಾ ಹಗರಣದ ಬಗ್ಗೆ ಸಿದ್ದು ಪರ ಬ್ಯಾಟ್ ಬೀಸಿದ ಪ್ರದೀಪ್ ಈಶ್ವರ್, ಕುಮಾರಾಸ್ವಾಮಿ ವಿರುದ್ಧ ಕೆಲವು ಆರೋಪಗಳನ್ನ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನಮ್ಮ ಸಿದ್ದರಾಮಯ್ಯ ನವರ ಬಗ್ಗೆ, ಮುಡಾ ಹಗರಣ ಬಗ್ಗೆ ಮಾತಾಡ್ತಾಯಿದ್ರು. ಈಗಾಗಲೇ ಏಕಸದಸ್ಯ ಪೀಠ ದೇಸಾಯಿ ಅವರ ಆಯೋಗ ರಚನೆ ಆಗಿದೆ. ಕುಮಾರಸ್ವಾಮಿ ಅವರೇ ಬಿಜೆಪಿ ಜೊತೆ ಮೈತ್ರಿಯಾಗಿದ್ದೀರ. ಯಡಿಯೂರಪ್ಪ ಸಾಹೇಬ್ರು 17 ಮಾರ್ಚ್ 2011ರಲ್ಲಿ ವಿಧಾನಪರಿಷತ್ ನಲ್ಲಿ ಭಾಷಣ ಮಾಡ್ತಾರೆ. ಇದು ನಾನು ತಂದಿರುವ ದಾಖಲೆ ಅಲ್ಲ, ವಿಧಾನಪರಿಷತ್ ದಾಖಲೆ. ಇದರಲ್ಲಿ ಯಡಿಯೂರಪ್ಪ ಅವರು ದೇವೇಗೌಡ ಕುಟುಂಬದ ಕುಮಾರಸ್ವಾಮಿ ಅವರಿಗೆ 17b ಸೈಟ್ ಅಲರ್ಟ್ ಆಗಿದೆ. ದೇವೇಗೌಡರಿಗೆ 48 ಸೈಟ್ ಅಲರ್ಟ್ ಆಗಿದೆ. ಮುಡಾ ವಿಚಾರದಲ್ಲಿ ಬಿಎಸ್ವೈ ವಿರುದ್ಧ ಮಾತಾಡಿದ್ರಾ? ಇದೇ ವಿಚಾರಕ್ಕೆ ಬಿಜೆಪಿಯವರು ನೀವು ಪ್ರತಿಭಟನೆ ಮಾಡ್ತೀರಾ ಸರ್? ಎಂದು ಕುಮಾರಸ್ವಾಮಿಯವರಿಗೆ ಪ್ರಶ್ನೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಹಿಂದ ಸಮುದಾಯ ಅತಿದೊಡ್ಡ ನಾಯಕ. ಅದನ್ನು ನೀವು ಸಹಿಸೋಕೆ ಆಗ್ತಾ ಇಲ್ಲ. ಪ್ರಧಾನಿಮಂತ್ರಿಯ ಮಗ ಮುಖ್ಯಮಂತ್ರಿಯಾಗೋದು ಗ್ರೇಟ್ ಅಲ್ಲ ಕುಮಾರಸ್ವಾಮಿ ಅವರೇ, ಕನಕಪುರದ ಒಬ್ಬ ರೈತನ ಮಗ ರಾಜ್ಯಕ್ಕೆ ಉಪಮುಖ್ಯಮಂತ್ರಿಯಾಗೋದು ಅಷ್ಟು ಸುಲಭ ಅಲ್ಲ. ನೀವು ಬಸ್ ನಲ್ಲಿ ಎಂಎಲ್ಎಗಳನ್ನ ಕರೆದುಕೊಂಡು ಹೋಗಿ ರಾತ್ರೋರಾತ್ರಿ ಪದವಿ ತೆಗೆದುಕೊಂಡಷ್ಟು ಸುಲಭ ಅಲ್ಲ. ಇವತ್ತು ಅಹಿಂದ ನಾಯಕನನ್ನು ಸಹಿಸ್ತಿಲ್ಲ. ಹೋಗಲಿ ಬಿಡಿ ನಿಮ್ಮ ಸಮುದಾಯ ಹುಡುಗ ರಾಜ್ಯಕ್ಕೆ ಡಿಸಿಎಂ ಆಗಿದ್ದಾರೆ, ಖುಷಿ ಪಡಬೇಕು ಅಲ್ವ ನೀವು ಅದನ್ನ ಸಹಿಸ್ತಿಲ್ಲ. ಬೇರೆ ಸಮುದಾಯ ಬೆಳೆಯೋದು ನಿಮಗೆ ಇಷ್ಟ ಇಲ್ಲ. ನಿಮ್ಮ ಸಮುದಾಯದವರು ಬೆಳೆಯೋದು ನಿಮಗೆ ಇಷ್ಟ ಇಲ್ಲ. ಮತ್ತೆ ಇನ್ನಾರನ್ನ ಬೆಳೆಸಬೇಕು ಅಂತ ಇದ್ದೀರಾ ಕುಮಾರಸ್ವಾಮಿ ಅವರೇ ಎಂದು ಹೇಳಿದ್ದಾರೆ.
ಮುಡಾ ಹಗರಣದ ಬಗ್ಗೆ ತಾವು ಏನು ಪ್ರಸ್ತಾಪ ಮಾಡ್ತಾ ಇದ್ದೀರಾ, ದಯವಿಟ್ಟು ಇದರ ಬಗ್ಗೆನು ಸಿಬಿಐ ಕೊಡಿ ಅನ್ನುವ ತಾಕತ್ತು ಕುಮಾರಸ್ವಾಮಿಗೆ ಇದೀಯಾ ಅನ್ನೊಂದು ನನ್ನ ಪ್ರಶ್ನೆ. 17 ಮಾರ್ಚ್ 2011 ರಲ್ಲಿ ಬೆಳಗ್ಗೆ 11 ಗಂಟೆಗೆ ಮಾತಾಡಿರೋದು. ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಸುಳ್ಳು ಆರೋಪ ಮಾಡಿದ್ರು ಅಂತಾರೆ. ಅದಕ್ಕೆ ಈ ಎಲ್ಲ ದಾಖಲೆಗಳನ್ನ ಮಾಧ್ಯಮಗಳಿಗೆ ನೀಡ್ತಾ ಇದ್ದೀನಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.