- ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯ
- ನವಜೋಡಿಗೆ ಶುಭ ಹಾರೈಸಿದ ಸೌತ್ ಸಿನಿಮಾ ಇಂಡಸ್ಟ್ರಿ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ.
ಅಂದ್ಹಾಗೇ, ಜೂನ್ 10 ರಂದು ಚೆನ್ನೈನಲ್ಲಿ ಅರ್ಜುನ್ ಸರ್ಜಾ ಅವರು ಕಟ್ಟಿಸಿದ ಹನುಮಾನ್ ಟೆಂಪಲ್ ನಲ್ಲಿ ಸರ್ಜಾ ಪುತ್ರಿಯ ಕಲ್ಯಾಣೋತ್ಸವ ನೆರವೇರಿತ್ತು.
ಜೂನ್ 14 ರಂದು ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಅಂದರೆ ತಲೈವಾ ರಜನಿಕಾಂತ್, ಖುಷ್ಬು, ಪ್ರಭುದೇವ, ಲೋಕೇಶ್ ಕನಗರಾಜ್ ಸೇರಿದಂತೆ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯೇ ನವಜೋಡಿಗೆ ಶುಭ ಹಾರೈಸಲು ಬಂದಿದ್ದರು.
ಅಂದ್ಹಾಗೇ, ಐಶ್ವರ್ಯ ಹಾಗೂ ಉಮಾಪತಿ ಅವ್ರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಜೋಡಿಯ ಎಂಗೇಜ್ಮೆಂಟ್ ನೆರವೇರಿತ್ತು.
ಸರ್ಜಾ ಕುಟುಂಬಸ್ಥರು, ಆಪ್ತರು ಸೇರಿದಂತೆ ಸಿನಿಮಾ ಮಂದಿ ಕೂಡ ಎಂಗೇಜ್ ಮೆಂಟ್ ನಲ್ಲಿ ಭಾಗಿಯಾಗಿದ್ದರು. ಈಗ ಮದ್ವೇಲೂ ಕೂಡ ಸೌತ್ ಸಿನಿಮಾ ಇಂಡಸ್ಟ್ರಿಯ ಅನೇಕ ತಾರೆಯರು ಐಶ್ವರ್ಯ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೇ ಐಶ್ವರ್ಯ ಕೂಡ ನಾಯಕಿ. ಪ್ರೇಮಬರಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ತಂದೆ ಅರ್ಜುನ್ ಸರ್ಜಾರೇ ಮಗಳ ಮೊದಲ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ನಿರ್ಮಾಣ ಕೂಡ ತಾವೇ ಮಾಡಿ ಸ್ಯಾಂಡಲ್ ವುಡ್ ಗೆ ಮಗಳನ್ನ ಲಾಂಚ್ ಮಾಡಿದ್ದರು.
ಅಂದ್ಹಾಗೇ ಐಶ್ವರ್ಯ ಹೆಚ್ಚೇನು ಸಿನಿಮಾಗಳನ್ನ ಮಾಡಲಿಲ್ಲ. ಇಲ್ಲಿತನಕ ಅವರು ಬಣ್ಣ ಹಚ್ಚಿರೋದು ಮೂರು ಸಿನಿಮಾಗಳಲ್ಲಿ ಮಾತ್ರ. ಕನ್ನಡದ ಪ್ರೇಮಬರಹ ಸೇರಿ ತಮಿಳಿನ ಇನ್ನೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸಬಾಳಿನ ಹೊಸಿಲಲ್ಲಿ ನಿಂತಿದ್ದಾರೆ