- ದರ್ಶನ್ ಹಳೆಯ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣ
- 2018ರಿಂದ ಏಕಾಏಕಿ ಮಲ್ಲಿಕಾರ್ಜುನ್ ನಾಪತ್ತೆ
- ಬದುಕಿದ್ದಾನಾ ಅಥವಾ ಕೊಲೆಯಾಗಿ ಹೋದ್ನಾ..?
ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ ಒಟ್ಟು 13 ಆರೋಪಿಗಳ ಬಂಧನ ಆಗಿದೆ. ಬಂಧಿತರನ್ನು ತೀವ್ರ ತನಿಖೆಗೆ ಒಳಪಡಿಸಿರುವ ಪೊಲೀಸರು ಒಂದೊಂದು ರಹಸ್ಯವನ್ನು ಬಯಲಿಗೆ ಎಳೆಯುತ್ತಿದ್ದಾರೆ. ನಿನ್ನೆಯವರೆಗೆ ಸ್ಥಳ ಮಹಜರು ಸೇರಿದಂತೆ ಇತರೆ ವಿಚಾರಣೆಗಳು ಪೂರ್ಣಗೊಂಡಿವೆ. ಸ್ಥಳ ಮಹಜರು ಬಳಿಕ ಆರೋಪಿಗಳ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ದರ್ಶನ್ ಹಳೆಯ ಮ್ಯಾನೇಜರ್ ನಾಪತ್ತೆ ಪ್ರಕರಣ
ಇನ್ನು ಈ ವೇಳೆ ದರ್ಶನ್ ಹಳೆಯ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣದ ಬಗ್ಗೆ ಆತಂಕ ಮೂಡಿದೆ. ಕಾರಣ, ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಸಂಕನಗೌಡರ್ 2018ರಿಂದಲೂ ನಾಪತ್ತೆಯಾಗಿದ್ದಾರೆ. 2011 ರಿಂದ 2018ರವರೆಗೂ ದರ್ಶನ್ ಮ್ಯಾನೇಜರ್ ಆಗಿದ್ದವರು ಮಲ್ಲಿಕಾರ್ಜುನ್. ಅದರೆ, 2018ರಿಂದ ಏಕಾಏಕಿ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದಾರೆ. ನಾಪತ್ತೆಗೂ ಮುನ್ನ ಮಲ್ಲಿಕಾರ್ಜುನ್ ಸಂಕನಗೌಡರ್ ಪತ್ನಿಗೆ ಪತ್ರವೊಂದನ್ನ ಬರೆದಿದ್ದನು ಎಂದು ಹೇಳಲಾಗಿದೆ. ದರ್ಶನ್ಗೆ ಸೇರಿದ 10 ಕೋಟಿ ಹಣ ವಂಚನೆ ಮಾಡಿದ್ದಾಗಿ ಮಲ್ಲಿಕಾರ್ಜುನ್ ಮೇಲೆ ಆರೋಪ ಕೇಳಿಬಂದಿದ್ದು, ರೇಣುಕಾಸ್ವಾಮಿ ಕೊಲೆಯಂತೆ ಮೋರಿ ಪಾಲಾದ್ನಾ ಮ್ಯಾನೇಜರ್ ಮಲ್ಲಿಕಾರ್ಜುನ್ ಎಂಬ ಅನುಮಾನ ಹುಟ್ಟಿಕೊಂಡಿದೆ.
ನಟ ದರ್ಶನ್ ಮ್ಯಾನೇಜ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣ ಈಗ ಎಲ್ಲರಿಗೆ ನೆನಪಾಗತೊಡಗಿದೆ. ಕಳೆದ ಏಪ್ರಿಲ್ನಲ್ಲಿ ಮಲ್ಲಿಕಾರ್ಜುನ್ ಬಗ್ಗೆ ಮಾಹಿತಿ ನೀಡಿ, ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲು ಕೋರ್ಟ್ ಸೂಚನೆ ನೀಡಿತ್ತು. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.