ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ನಾಡದೇವತೆಯ ದರ್ಶನ ಪಡೆದಿದ್ದಾರೆ. ಕಡೇ ಆಷಾಡ ಶುಕ್ರವಾರದ ಪ್ರಯುಕ್ತ ಪತ್ನಿ ರೇವತಿ ಹಾಗೂ ಪುತ್ರನೊಟ್ಟಿಗೆ ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಕುಟುಂಬದ ಜೊತೆಗೆ ಶಿರಡಿಗೆ ಭೇಟಿ ಕೊಟ್ಟು ಸಾಯಿಬಾಬ ದರ್ಶನ ಪಡೆದಿದ್ದರು. ಸದ್ಯ ನಿಖಿಲ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ರಾಜಕೀಯ ಹಾಗೂ ಸಿನಿಮಾ ಎರಡು ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದಾರೆ.
ರೈಡರ್ ನಂತರ ಯದುವೀರ್ ಸಿನಿಮಾ ಅನೌನ್ಸ್ ಆಗಿತ್ತು. ಆದರೆ, ಅದ್ಯಾಕೋ ಏನೋ ಈ ಸಿನಿಮಾಗೆ ಕಾಲ ಕೂಡಿ ಬರ್ತಿಲ್ಲ. ಯದುವೀರ್ ಅಂಗಳದಿಂದ ಅಪ್ಡೇಟ್ ಲಭ್ಯವಾಗಿಲ್ಲ. ಈ ಚಿತ್ರ ಹೊರತುಪಡಿಸಿದರೆ ಲೈಕಾ ಪ್ರೊಡಕ್ಷನ್ ಸಂಸ್ಥೆಯಿಂದ ಅದ್ಧೂರಿ ಸಿನಿಮಾವೊಂದು ಅನೌನ್ಸ್ ಆಗಿದೆ. ಕಳೆದೊಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮುಹೂರ್ತ ಮಾಡಿ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು.
ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾದ ಲೈಕಾ ಮೊದಲ ಭಾರಿಗೆ ಕನ್ನಡ ಚಿತ್ರ ನಿರ್ಮಾಣ ಮಾಡ್ತಿದ್ದು, ಜಾಗ್ವಾರ್ ನಿಖಿಲ್ ಹೀರೋ ಆಗಿದ್ದಾರೆ. ಸ್ಯಾಂಡಲ್ವುಡ್ ಒಂಟಿ ಸಲಗ ದುನಿಯಾ ವಿಜಯ್ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ಲಕ್ಷಣ್ ನಿರ್ದೇಶನ ಚಿತ್ರಕ್ಕಿದ್ದು ಈ ಸಿನಿಮಾದ ಅಪ್ಡೇಟ್ಗಾಗಿ ಸಿನಿಮಾ ಪ್ರೇಮಿಗಳು ಎದುರುನೋಡ್ತಿದ್ದಾರೆ.