ಸದ್ಯಕ್ಕೆ ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಲಕ್ಷಣವಂತೂ ಇಲ್ಲವೇ ಇಲ್ಲ. ಹೀಗಿರುವಾಗ ಪತಿಯ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಇನ್ನಿಲ್ಲದಂತೆ ಕಸರತ್ತು ನಡೆಸಿದ್ದು ಈಗ ದೇವರ ಮೊರೆ ಹೋಗಿದ್ದಾರೆ. ಪತಿಯ ಜೈಲು ವಿಮೋಚನೆಗಾಗಿ ಧರ್ಮಪತ್ನಿ ಶಕ್ತಿ ದೇವತೆಯ ಮೊರೆ ಹೋಗಿದ್ದು, ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನವಚಂಡಿಕಾ ಯಾಗ ನೆರವೇರಿಸಿದ್ದಾರೆ.
ದರ್ಶನ್ ವಿಚಾರವಾಗಿ ಮಾತನಾಡಿದ ಹಿರಿಯ ವಿದ್ವಾಂಸ, ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್, ನಾವು ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತವನ್ನು ಒಪ್ಪಿಕೊಂಡಿದ್ದೇವೆ. ಕೆಟ್ಟ ಕೆಲಸ ಮಾಡಿದರೆ ಕೆಟ್ಟದಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ. ದರ್ಶನ್ ಮಾಡಿರುವುದು ಕೆಟ್ಟದ್ದು, ಒಳ್ಳೆಯದು ಗೊತ್ತಿಲ್ಲ. ಪ್ರಕರಣವೊಂದು ತನಿಖೆ ಹಂತದಲ್ಲಿದೆ. ಈಗಲೇ ನಾವು ಒಳ್ಳೆಯವರು, ಕೆಟ್ಟವರು ಎಂದು ನಿರ್ಧರಿಸೋಕೆ ಆಗಲ್ಲ. ಅವರು ಹಿಂದೆ ಮಾಡಿರುವ ಒಳ್ಳೆಯ ಕೆಲಸಗಳಿಂದ ಒಳ್ಳೆಯದಾಗಬಹುದು. ಯಾವುದೇ ಕಷ್ಟದ ಕಾಲದಲ್ಲಿ ದೇವಿಯನ್ನ ಪಠಣೆ ಮಾಡೋದ್ರಿಂದ ಒಳ್ಳೆಯದಾಗುತ್ತದೆ. ದರ್ಶನ್ ಅವರ ಧರ್ಮ ಪತ್ನಿಗೆ ಅದರ ಬಗ್ಗೆ ನಂಬಿಕೆ ಇದೆ. ಅದು ಅವರ ನಂಬಿಕೆ ಇರಬಹುದು. ಅಲ್ಲದೇ ದರ್ಶನ್ ಪ್ರಕರಣದಲ್ಲಿ ಅಸಲಿ ವಿಚಾರಗಳು ಆಕೆಗೆ ಗೊತ್ತಿರುತ್ತದೆ. ಕಷ್ಟದ ಪರಿಸ್ಥಿತಿಯಲ್ಲಿ ನವ ಚಂಡಿಕಾಯಾಗ ಮಾಡಿದರೆ ಒಳ್ಳೆಯದಾಗುತ್ತದೆ. ನವ ಚಂಡಿಕಾ ಯಾಗದಿಂದ ಸಂಕಷ್ಟದಿಂದ ಪಾರಾಗಬಹುದು. ನಟ ದರ್ಶನ್ ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶ ಪತ್ನಿ ವಿಜಯಲಕ್ಷ್ಮಿ ಅವರದ್ದು. ಯಾಗ ಮಾಡಿಸುತ್ತಿರುವುದರಿಂದ ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.