ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿದ್ದು, ದೇವೇಗೌಡರ ಆರೋಗ್ಯ ವಿಚಾರಿಸಿದರು. ಇನ್ನು ಬಳಿಕ ಮಾತನಾಡಿದ ಕಾನೂನು ಸುವ್ಯವಸ್ಥೆ ಹದಗೆಟ್ಟ ಆರೋಪ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳು ನಿರಂತರವಾಗಿದೆ. ಕರ್ನಾಟಕ ಕ್ರೈಂ ರಾಜ್ಯ ಆಗಿದೆ. ರೌಡಿಗಳಿಗೆ ಕೊಲೆಗಡುಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಬ್ಬ. ನೇಹಾ ಹತ್ಯೆ ಬೆನ್ನಲ್ಲೇ ಅಂಜಲಿ ಹತ್ಯೆಯಾಗಿದೆ. ಈ ರಾಜ್ಯ ಸರ್ಕಾರ ಅಪರಾಧಿ ಸ್ಥಾನದಲ್ಲಿದೆ. ರಾಜ್ಯ ಸರ್ಕಾರವನ್ನೇ ಗಲ್ಲಿಗೇರಿಸಬೇಕು. ಕೊಲೆ ಸುಲಿಗೆ ಅತ್ಯಚಾರಕ್ಕೆಲ್ಲಾ ಈ ಸರ್ಕಾರ ಬೆಂಬಲ ಕೊಡ್ತಿದೆ. ಸಿದ್ದರಾಮಯ್ಯ ಸರ್ಕಾರ ಬಂದ್ರೆ ಮಳೆ ಬರಲ್ಲ. ಸರ್ಕಾರ ಸತ್ತು ಹೋಗಿದ್ದು, ಕೋಮಾ ಸ್ಥಿತಿಯಲ್ಲಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್ ಅಶೋಕ್ ಕಿಡಿಕಾರಿದರು.