ದರ್ಶನ್ಗೆ ರಾಜಾತಿಥ್ಯದ ಫೋಟೋ ವೈರಲ್ ಆದ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ ಅವರು ಸೋಮವಾರ ಮಧ್ಯಾಹ್ನ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೈಲಿನಲ್ಲಿ ಮೊಬೈಲ್ ಬಳಕೆ ಆಗುತ್ತಿದೆ ಎಂಬುದು ಕಂಡು ಬಂದಿದೆ. ಹೈ ಫ್ರೀಕ್ವೆನ್ಸಿ ಜಾಮರ್, ಅತ್ಯುತ್ತಮ ಗುಣಮಟ್ಟದ ಮೆಟಲ್ ಡಿಟೆಕ್ಟರ್ ಯಂತ್ರ, ಸಿಸಿಟಿವಿ. ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೆಲ್ಲಾ ಬಂದೋಬಸ್ತ್, ಪರಿಶೀಲನೆ ನಡುವೆಯೂ ಕಾರಾಗೃಹದೊಳಗೆ ಸಿಗರೇಟ್, ಮೊಬೈಲ್ ತಲುಪಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸಿಗರೇಟ್, ಟೀ ತಂದುಕೊಟ್ಟವರು ಮತ್ತು ಕುರ್ಚಿ ಹಾಕಿದವರು ಎಲ್ಲದನ್ನ ಸಿಸಿಟಿವಿ ಆದರಿಸಿ ಕ್ರಮ ಆಗಿದೆ. ಈ ಬ್ಯಾರಕನಿಂದ ಮತ್ತೊಂದು ಬ್ಯಾರಕ್ ಗೆ ಹೋಗೋಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ 9 ಜನರನ್ನು ಸಸ್ಪೆಂಡ್ ಮಾಡಿದ್ದೆವೆ. ಐಪಿಎಸ್ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಲಾಗುತ್ತಿದೆ ಎಂದರು.
ದರ್ಶನ್ನ್ನು ಬೇರೆ ಜೈಲಿಗೆ ಶಿಫ್ಟ್ ಮಾಡೋ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ, ಅದನ್ನ ನಾನು ತೀರ್ಮಾನ ಮಾಡೋಕೆ ಆಗಲ್ಲ, ಕೋರ್ಟ್ ಗಮನಕ್ಕೆ ತಂದು ಪ್ರಿಸನ್ ಅಥಾರಿಟಿ ಅವ್ರು ಮಾಡ್ತಾರೆ. ಸರ್ಕಾರ ತೀರ್ಮಾನ ಮಾಡೋಕೆ ಬರೋದಿಲ್ಲ, ತನಿಖೆ ಹಂತದಲ್ಲಿ ಇರೋದ್ರಿಂದ ಕೆಲವೊಂದು ಮಾರ್ಗಸೂಚಿ ಇದೆ. ಎರಡು ಮೂರು ದಿನದಲ್ಲಿ ತೀರ್ಮಾನ ಅಗುತ್ತೆ ಎಂದು ಹೇಳಿದರು.
ಜೈಲಿನ ಸುಧಾರಣೆಗೆ ವರದಿ ಅನುಷ್ಠಾನ ವಿಚಾರ ಸಂಬಂಧಿಸಿದಂತೆ ಎಚ್ ಕೆ ಪಾಟೀಲ್ ವರದಿ ಕೊಟ್ಟಿದ್ದು ಗಮನಕ್ಕೆ ಬಂದಿರಲಿಲ್ಲ, ಅದನ್ನ ತರಿಸಿಕೊಳ್ಳುತ್ತೇನೆ, ಈಗಿರೋ ವ್ಯವಸ್ಥೆ ಬದಲಾವಣೆ ಅಗತ್ಯವಿದೆ ಅದನ್ನ ಮಾಡುತ್ತೆವೆ ಎಂದರು.