ಕಳೆದ 15 ತಿಂಗಳಲ್ಲಿ 50000 ಕ್ಕೂ ಹೆಚ್ಚು ಜನರ ಬಲಿಪಡೆದ, 1 ಲಕ್ಷಕ್ಕೂ ಹೆಚ್ಚು ಜನರನ್ನು ಗಾಯಾಳುಗಳಾಗಿ ಮಾಡಿದ್ದ ಕದನಕ್ಕೆ ತಾತ್ಕಾಲಿಕ ವಿರಾಮ ಹೇಳಲು ಕೊನೆಗೂ ಇಸ್ರೇಲ್, ಹಮಾಸ್ ಉಗ್ರರು ಸಮ್ಮತಿಸಿದ್ದಾರೆ. ಹೀಗಾಗಿ ಶೀಘ್ರ ಯುದ್ದಕ್ಕೆ ತೆರೆ ಬೀಳುವ ವಿಶ್ವಾಸ ವ್ಯಕ್ತವಾಗಿದೆ. ಕದನ ವಿರಾಮ ಘೋಷಣೆ ಸಂಬಂಧ ಅರಬ್ ದೇಶಗಳು ಮತ್ತು ಅಮೆರಿಕದ ಪ್ರತಿನಿಧಿಗಳು ಕತಾರ್ನಲ್ಲಿ ಹಲವು ದಿನಗಳಿಂದ ನಡೆಸಿದ ಸಂಧಾನ ಫಲಿಸಿದ್ದು, ಕದನ ವಿರಾಮದ ಅಂಶಗಳಿಗೆ ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯಿಂದ ಸಮ್ಮತಿ ವ್ಯಕ್ತವಾಗಿದೆ.
ಈ ಸಂಧಾನದ ಪ್ರಸ್ತಾಪಕ್ಕೆ ಇಸ್ರೇಲ್ ಸಚಿವ ಸಂಪುಟ ಅನುಮೋದನೆ ನೀಡಿದ ಬಳಿಕ ಜಾರಿಯಾಗಲಿದೆ. ಒಪ್ಪಂದದ ಅನ್ವಯ ಎರಡೂ ಗುಂಪು ಗಳು ಪರಸ್ಪರರ ಮೇಲಿನ ದಾಳಿ ನಿಲ್ಲಿಸ ಲಿವೆ. ಜೊತೆಗೆ ಹಮಾಸ್ ಉಗ್ರರು ತಾವು ಒತ್ತೆ ಇಟ್ಟುಕೊಂಡಿರುವ ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಕದನ ವಿರಾಮದ ಅವಧಿ ಸದ್ಯಕ್ಕೆ 6 ವಾರಗಳಿಗೆ ಸೀಮಿತವಾಗಿದ್ದು, ಈ ಅವಧಿಯಲ್ಲಿ ಒಪ್ಪಂದ ಅಂಶಗಳನ್ನು ಎರಡೂ ಬಣಗಳು ಪಾಲಿಸಿದರೆ, ಯುದ ಸಗಿತದ ಕುರಿತು ಮಾತುಕತೆಗಳು ಕೂಡಾ ನಡೆಯಲಿವೆ.
ಯುದ್ಧಕ್ಕೆ ಕಾರಣ?
2023 ರ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ನೊಳಗೆ ನುಗ್ಗಿ 1200 ಜನರ ಹತ್ಯೆಗೈದು, 250 ಜನರನ್ನು ಅಪಹರಿಸಿದ್ದರು. ಬಳಿಕ ಹಮಾಸ್ ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ಆರಂಭವಾಗಿತ್ತು. ಈ ಯುದ್ಧದಲ್ಲಿ ಇದುವರೆಗೂ ಗಾಜಾಪಟ್ಟಿ ಪ್ರದೇಶದಲ್ಲಿನ 45000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನ ಪ್ಪಿದ್ದರು. ಇನ್ನೊಂದೆಡೆ ಇಸ್ರೇಲ್ನಲ್ಲೂ 2000ಕ್ಕೂ ಹೆಚ್ಚು ಜನರ ಸಾವು ಸಂಭವಿಸಿತ್ತು.