- ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ತುಂಬಿ ಹರಿಯುತ್ತಿರುವ ಕಾವೇರಿ
- ಕರ್ನಾಟಕದಲ್ಲಿ ಹೆಚ್ಚು ಮಳೆಯಾದರೆ ತಮಿಳುನಾಡಿಗೆ ಲಾಭ ಆಗಲಿದೆ
ಮುಂಗಾರು ಮಳೆ ಶುರುವಾಗಿದೆ ಜೂನ್ ಆರಂಭದಿಂದಲೇ ಭಾರಿ ಮಳೆಯಾಗಿದೆ. ಇದರಿಂದ ನಗರಗಳಲ್ಲಿ ಅವಾಂತರ ಸೃಷ್ಟಿಯಾಗಿತ್ತು. ಇನ್ನು ಕಾವೇರಿ ಜಲಾಶಯಗಳ ಕಡೆ ವ್ಯಾಪಾಕ ಮಳೆಯಾಗಿದೆ. ಮಂಡ್ಯ, ಮೈಸೂರು, ಕೊಡಗು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕಾವೇರಿ ನದಿಯ ಹರಿವು ಹೆಚ್ಚುತ್ತಿದ್ದು, ತಮಿಳುನಾಡಿಗೆ ನೀರು ಹರಿಯುತ್ತಿದೆ. ದಕ್ಷಿಣ ಒಳನಾಡು, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕಾವೇರಿ, ಕಪಿಲಾ, ವೇದಾವತಿ ನದಿಗಳು ಮೈದುಂಬಿಕೊಳ್ಳುತ್ತಿವೆ. ಕಾವೇರಿ ನದಿಗೆ ತಮಿಳುನಾಡು ರಾಜ್ಯದಲ್ಲಿ ಕಟ್ಟಿರುವ ಮೆಟ್ಟೂರು ಡ್ಯಾಂ ಕೂಡ ತುಂಬುತ್ತಿದೆ. ಕರ್ನಾಟಕದಲ್ಲಿ ಹೆಚ್ಚು ಮಳೆಯಾದರೆ ತಮಿಳುನಾಡಿಗೆ ಲಾಭ ಆಗಲಿದೆ. ಸದ್ಯ ಮೆಟ್ಟೂರು ಜಲಾಶಯದ ಒಳಹರಿವು 77 ಕ್ಯೂಸೆಕ್ಸ್ ಇದೆ. ಕಾವೇರಿ ಜಲಾಶಯದಿಂದ ನದಿಗೆ 2100 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 93.47 ಟಿಎಂಸಿ ಆಗಿದ್ದು, 13.523 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇನ್ನು ಜೂನ್ 10ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ಸಮಸ್ಯೆಗೆ ರಿಲೀಫ್ ನೀಡುವ ನಿರೀಕ್ಷೆ ಇದೆ.