ವಯನಾಡು ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 402ಕ್ಕೆ ಏರಿದ್ದು, ಇನ್ನು 170 ಜನರು ಕಾಣೆಯಾಗಿದ್ದಾರೆ. ಪ್ರಾಣ ಅಥವಾ ಆಸ್ತಿಪಾಸ್ತಿ ಕಳೆದುಕೊಂಡವರು ಸೇರಿದಂತೆ ಸಂತ್ರಸ್ತರ ಸಾಲವನ್ನು ಕೇರಳ ಬ್ಯಾಂಕ್ ಮನ್ನಾ ಮಾಡಲಿದೆ. ತಜ್ಞರ ತಂಡವು ಆಗಸ್ಟ್ 14 ರಂದು ದುರಂತದ ಕಾರಣವನನು ತನಿಖೆ ನಡೆಸಲಿದೆ.
ಕೇರಳ ಸರ್ಕಾರವು ಪರಿಹಾರ ಮತ್ತು ಪುನರ್ವಸತಿಗಾಗಿ 2,000 ಕೋಟಿ ರೂ ಕೋಟಿ ಬಿಡುಗಡೆ ಮಾಡಲಿದೆ. ದೇಹದ ಭಾಗಗಳು ಪತ್ತೆಯಾದ ಪ್ರದೇಶಗಳ ಮೇಲೆ ಕೇಂದ್ರೀಕರಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅಪರಿಚಿತ ಸಂತ್ರಸ್ತರಿಗಾಗಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು. ಬದುಕುಳಿದವರಿಗೆ ಪುನರ್ವಸತಿ ಪ್ಯಾಕೇಜ್ ಒದಗಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಕೇಂದ್ರ ಸರ್ಕಾರದ ಬೆಂಬಲದ ಭರವಸೆ ನೀಡಿದರು.