ಪ್ಯಾರಿಸ್ ಒಲಿಂಪಿಕ್ಸ್ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಮಾತನಾಡಿದ್ದು, ವಿನೇಶ್ ಮೇಲೆ ಗೋಲ್ಡ್ ಗೆಲ್ಲುವ ವಿಶ್ವಾಸ ಹೆಚ್ಚಿತ್ತು, ಆದರೆ ದೊಡ್ಡ ಅನ್ಯಾಯ ಆಗಿದೆ, ನಿನ್ನೆ ಸೆಮಿಫೈನಲ್ ಗೆದ್ದು ಫೈನಲ್ಗೆ ಬಂದಿದ್ದಾರೆ, ಕುಸ್ತಿಯಲ್ಲಿ ಮಾತ್ರ ಪ್ರತಿ ಪಂದ್ಯಕ್ಕೆ ತೂಕ ಪರಿಶೀಲನೆ ಮಾಡ್ತಾರೆ ಎಂದಿದ್ದಾರೆ.
ಹಾಗೆಯೇ ಒಲಿಂಪಿಕ್ಸ್ ಕಾನೂನು ಪುನರ್ ವಿಮರ್ಶೆ ಮಾಡಬೇಕಾಗಿದೆ, ಅಲ್ಲಿಯೂ ಕೂಡ ರಾಜಕೀಯ ಮತ್ತು ತಂತ್ರಗಾರಿಕೆ ನಡೆಯುತ್ತಿದೆ, ಕೆಲವು ಬಾರಿ ವಿರೋಧ ಕೂಡ ಉಂಟಾಗಿದೆ, ಹೀಗಾಗಿ ಈ ಘಟನೆಯನ್ನು ಕೇಂದ್ರ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.