ಮಹಿಳೆಯರ ಮೇಲಿನ ಲೈಂಗಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲೇ ಪ್ರತಿಕ್ರಿಯೆ ನೀಡಿದ್ದು, ಮೇ 31 ರಂದು ಎಸ್ಐಟಿ ಮುಂದೆ ಹಾಜರಾಗುತ್ತೇನೆ. ನಾನು ವಿದೇಶಕ್ಕೆ ಹೋಗಿದ್ದು ಪ್ರಿ ಪ್ಲ್ಯಾನ್ ಆಗಿತ್ತು. ವಿದೇಶಕ್ಕೆ ಹೋಗೋದು ಮೊದಲೇ ನಿಗದಿಯಾಗಿತ್ತು. ನನ್ನ ತಂದೆ ತಾಯಿ ತಾತನಿಗೆ ಹಾಗೂ ರಾಜ್ಯದ ಜನತೆ, ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೋರುತ್ತೇನೆ ಎಂದು ವಿದೇಶದಲ್ಲೇ ಕೂತು ಪ್ರಜ್ವಲ್ ರೇವಣ್ಣ ವಿಡಿಯೋ ರಿಲೀಸ್ ಮಾಡಿದ್ದಾರೆ.
ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು..?
ಎಲ್ಲರಿಗೂ ನಮಸ್ಕಾರ… ಮೊದಲನೆಯದಾಗಿ ನನ್ನ ತಂದೆ ತಾಯಿಗೆ, ತಾತನಿಗೆ ನನ್ನ ಕುಮಾರಣ್ಣನಿಗೆ ನಾಡಿನ ಜನತೆಗೆ ಹಾಗೂ ಎಲ್ಲ ನನ್ನ ಕಾರ್ಯಕರ್ತರಿಗೆ ಕ್ಷಮಾಪಣೆ ಕೇಳುತ್ತ, ನಾನು ಫಾರಿನ್ ನಲ್ಲಿ ಎಲ್ಲಿದ್ದೇನೆ ಅಂತ ಮಾಹಿತಿ ಕೊಡದೇ ಇರೋದಕ್ಕೆ, ಇವತ್ತು ಮಾಹಿತಿ ಕೊಡುವುದಕ್ಕೆ ಬಂದಿದ್ದೇನೆ. ಏನು 26 ನೇ ತಾರೀಖು ಚುನಾವಣೆ ನಡೆಯಿತು. 26 ತಾರೀಖು ಚುನಾವಣೆ ನಡೆದ ಸಂದರ್ಭದಲ್ಲಿ ಅವತ್ತು ನನ್ನ ಮೇಲೆ ಯಾವುದೇ ರೀತಿಯ ಪ್ರಕರಣ, ಕೇಸ್ ಆಗಲಿ ಏನು ಇರಲಿಲ್ಲ. ಎಸ್ಐಟಿ ಕೂಡ ರಚನೆ ಆಗಿರಲಿಲ್ಲ. 26 ತಾರೀಖು ನಾನು ಫಾರೀನ್ ಹೋಗೋದು ಕೂಡ ಮುಂಚೆನೇ ಪ್ರೀ ಪ್ಲ್ಯಾನ್ ಆಗಿತ್ತು.
ನಾನು ಫಾರೀನ್ ಹೊರಟಾದ ಮೇಲೆ ಮೂರ್ನಾಲ್ಕು ದಿನದ ನಂತರ ಯೂಟ್ಯೂಬ್ ನೋಡುವ ಸಂದರ್ಭದಲ್ಲಿ ನನಗೆ ಈ ಮಾಹಿತಿ ದೊರಕುವ ಕೆಲಸ ಆಯಿತು. ಮಾಹಿತಿ ದೊರಕಿದ ನಂತರ ಎಸ್ಐಟಿ ನೋಟೀಸ್ ಕೊಡುವ ಕೆಲಸ ಆಯಿತು. ಎಸ್ಐಟಿ ನೋಟೀಸಗೂ ಕೂಡ ನಾನು ನನ್ನ ಎಕ್ಸ್ ಖಾತೆ ಮೂಲಕ, ಲಾಯರ್ ಮುಖಾಂತರ ನಾನು ಏಳು ದಿನ ಸಮಯಾವಕಾಶ ಕೇಳಿದ್ದೆ. ಏಳು ದಿನ ಸಮಾಯಾವಕಾಶ ಕೇಳಿದ ಮೇಲೆಯೂ ಕೂಡ, ಮಾರನೇಯ ದಿನ ಏನೂ ಕಾಂಗ್ರೆಸ್ ಹಿರಿಯ ನಾಯಕರಾದಂತಹ ರಾಹುಲ್ ಗಾಂಧಿಯವರು ಹಾಗೂ ಎಲ್ಲ ನಾಯಕರು ಏನು ಓಪನ್ ವೇದಿಕೆಗಳಲ್ಲಿ ಈ ವಿಚಾರಗಳನ್ನು ಪ್ರಚಾರ ಮಾಡಲು ಪ್ರಾರಂಭ ಮಾಡಿದರು. ಚರ್ಚೆ ಮಾಡುವುದಕ್ಕೆ ಪ್ರಾರಂಭ ಮಾಡಿದರು. ರಾಜಕೀಯ ಪಿತೂರಿ ಮಾಡುವ ಕೆಲಸ ಮಾಡಿದರು. ಈ ಎಲ್ಲ ನೋಡಿದ ನಂತರ ನಾನು ಡಿಪ್ರೇಷನ್ ಹೋಗುವ ಕೆಲಸ ಆಯ್ತು. ಐಸುಲೇಷನ್ ಹೋಗುವಂತಾಯಿತು. ಹಾಗಾಗಿ ನಾನು ಮೊದಲೇನಯದಾಗಿ ನಿಮ್ಮೆಲ್ಲರನ್ನು ಕ್ಷಮಾಪಣೆ ಕೇಳಿದೆ. ದಯವಿಟ್ಟು ಕ್ಷಮಿಸಿ ಎಂದು ಕೇಳಿದೆ.
ಅದಾದ ನಂತರ ಹಾಸನದಲ್ಲಿ ಕೆಲವು ಶಕ್ತಿಗಳು ಎಲ್ಲ ಒಟ್ಟಾಗಿ ಸೇರಿಕೊಂಡು ಇವತ್ತು ನನ್ನ ಮೇಲೆ ರಾಜಕೀಯ ಪಿತೂರಿ ಕೆಲಸ ಮಾಡುವಂತದ್ದು ಇರಬಹುದು. ರಾಜಕೀಯವಾಗಿ ನಾನು ಏನು ಬೆಳೆಯುತ್ತಿದ್ದೇನೆ ಅದನ್ನು ಕುಗ್ಗಿಸಬೇಕು ಅನ್ನುವ ರೀತಿಯಲ್ಲಿ ಇವತ್ತು ಏನೇನು ಪ್ರಕರಣಗಳಲ್ಲಿ ಅವರು ಎಲ್ಲರೂ ಕೂಡ ಭಾಗಿಯಾಗುವ ಕೆಲಸ ಮಾಡಿಕೊಂಡರು. ಹಾಗಾಗಿ ಇದೆಲ್ಲ ನೋಡಿದ ಸಂದರ್ಭದಲ್ಲಿ ಇದ್ದಿದ್ದು ಇನ್ನು ಒಂದು ಆಘಾತ ಆಗುವವಂತಹ ಕೆಲಸ ಆಗಿ ನಾನೇ ಖುದ್ದಾಗಿ ಶುಕ್ರವಾರ ಮೇ 31 ತಾರೀಖು 10 ಗಂಟೆಗೆ ಎಸ್ಐಟಿ ಮುಖಾಂತರ, ಎಸ್ಐಟಿ ಮುಂದೆ ಬಂದಿ, ನಾನು ಸಂಪೂರ್ಣ ಇನ್ವೇಷ್ಟಿಗೇಷನ್ ಗೆ ಸಹಕಾರ ಕೊಡುವ ಮುಖಾಂತರ ನಾನು ಇದಕ್ಕೆ ಸರಿಯಾದ ಉತ್ತರ ಕೊಡುವಂತಹ ಕೆಲಸ ಮಾಡುತ್ತೇನೆ.
ಹಾಗೇಯೇ ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಕೂಡ ಏನು ಈ ಸುಳ್ಳು ಪ್ರಕರಣಗಳಿವೆ, ಈ ಸುಳ್ಳು ಪ್ರಕರಣದಿಂದ ಆಚೆ ಬರುವಂತಹ ಕೆಲಸ ನ್ಯಾಯಾಲಯದ ಮುಖಾಂತರದ ಮಾಡುತ್ತೇನೆ ಎನ್ನುವ ನಂಬಿಕೆ ನನ್ನಲ್ಲಿದೆ. ದೇವರ ಆಶೀರ್ವಾದ ಮತ್ತು ಜನರ ಆಶೀರ್ವಾದ, ನನ್ನ ಕುಟುಂಬದ ಆಶೀರ್ವಾದ ನನ್ನ ಮೇಲಿರಲಿ. ಖಂಡಿತವಾಗಿಯೂ 31ನೇ ತಾರೀಖು ಶುಕ್ರವಾರ ಎಸ್ಐಟಿ ಮುಂದೆ ಬರ್ತಿನಿ. ಬಂದ ನಂತರ ಈ ಎಲ್ಲದಕ್ಕೂ ತೆರೆ ಎಳೆಯುವ ಕೆಲಸ ನಾನು ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇರಲಿ. ನಿಮ್ಮನ್ನೆಲ್ಲರನ್ನು ಧನ್ಯವಾದ ಕೋರುತ್ತೇನೆ.