ಚಾಣಕ್ಯನ ವಿಚಾರ ವಾಸ್ತವಿಕತೆಗೆ ತುಂಬಾ ಹತ್ತಿರವಾಗಿವೆ. ಆಚಾರ್ಯ ಚಾಣಕ್ಯ ಒಂದು ಶ್ಲೋಕದಲ್ಲಿ ಹೇಳ್ತಾರೆ ಅಪಮಾನದ ಜೀವನವನ್ನು ನಡೆಸುವುದು ಸಾವಿಗಿಂತಲು ಭಯಂಕರ.
ಯಾವ ಮನುಷ್ಯ ತನ್ನ ಸ್ವಾರ್ಥಕ್ಕೆ ತನ್ನ ಸ್ವಾಭಿಮಾನ ಬಲಿ ಕೊಡುತ್ತಾನೊ ಆತ ರಣಹದ್ದಿಗೆ ಸಮಾನನೆಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಇಂತಹ ವ್ಯಕ್ತಿಯ ವ್ಯಕ್ತಿತ್ವ ಮಣ್ಣು ಪಾಲಾಗಿ ಬಿಡುತ್ತದೆ. ಆಗ ಆ ವ್ಯಕ್ತಿ ಮನೆಗೂ ಭಾರ, ನಮ್ಮ ಸಮಾಜಕ್ಕೂ ಭಾರ.
ನೀವು ಮಾಡುವ ಕೆಲಸಕ್ಕೆ ನಿಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳುವ ಸಂದರ್ಭ ಬಂದರೆ ನೀವು ಸಾವಿಗೆ ಶರಣಾಗಿ ಹೊರತು ನಿಮ್ಮ ಆತ್ಮ ಗೌರವಕ್ಕೆ ದಕ್ಕೆ ತರುವ ಕೆಲಸವನ್ನು ಮಾಡಬೇಡಿ ಎಂದು ಚಾಣಕ್ಯ ಹೇಳುತ್ತಾರೆ.
ಅಪಮಾನ ಮಾಡಿಸಿಕೊಂಡು ಬದುಕುವುದಕ್ಕಿಂತ ಬಡ ಜೀವನ ನಡೆಸುವುದು ಉತ್ತಮ. ದುಡ್ಡಿನ ಆಸೆಗೆ ತಮ್ಮ ಸರ್ವಸ್ವವನ್ನೂ ಮಾರಿಕೊಳ್ಳುವವರು ಅಪಮಾನಕ್ಕೆ ಅರ್ಹರು. ನಿಮ್ಮ ಆತ್ಮಗೌರವವನ್ನು ಎಂದಿಗೂ ಬೇರೆಯವರಿಗೆ ಮಾರಿಕೊಳ್ಳಬೇಡಿ ಅದು ನಿಮ್ಮ ಜೀವನದ ಬಂಡವಾಳ ಎಂಬುದನ್ನು ಎಂದಿಗೂ ಮರೆಯದಿರಿ ಎಂದು ಕೌಟಿಲ್ಯ ಹೇಳಿದ್ದಾರೆ.
ಆತ್ಮಗೌರವದಿಂದ ಬದುಕುವ ವ್ಯಕ್ತಿ ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗಿರುತ್ತಾನೆ. ಅಂತಹ ವ್ಯಕ್ತಿ ಒಬ್ಬರಿಗೆ ಸಹಾಯ ಮಾಡುತ್ತಾನೆ ಹೊರತು ಸಹಾಯವನ್ನು ಎಂದಿಗೂ ಬೇಡುವುದಿಲ್ಲ. ನಮ್ಮ ಸುಖಕರ ಜೀವನಕ್ಕೆ ಎರಡು ಮಹತ್ವದ ದಾರಿಗಳಿವೆ. ಒಂದು ಗೌರವ ಮತ್ತೊಂದು ಪರಿಶ್ರಮ.