ದೇಶದೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಶುರುವಾಗಿದೆ. ಗೋಕುಲ ವಾಸಿ ದೇವಕಿ ನಂದನ ಆರಾಧನೆ ನಡೆಯುತ್ತಿದೆ. ಕೃಷ್ಣ ಜನ್ಮಾಷ್ಟಮಿಯಂದು ಬಾಲ ಕೃಷ್ಣನ ಪೂಜೆ ಹೇಗೆ ಮಾಡಬೇಕು? ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂತ್ರವೇನು? ಎಂಬುದನ್ನ ಇಲ್ಲಿ ನೋಡಿ.
ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ
- ಜನ್ಮಾಷ್ಟಮಿ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.
- ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸಿ.
- ಎಲ್ಲಾ ದೇವಾನು ದೇವತೆಗಳ ಜಲಾಭಿಷೇಕವನ್ನು ಮಾಡಿ. ಈ ದಿನ, ಶ್ರೀ ಕೃಷ್ಣನ ಮಗುವಿನ ರೂಪವನ್ನು ಅಂದರೆ ಬಾಲ ಗೋಪಾಲನನ್ನು ಪೂಜಿಸಲಾಗುತ್ತದೆ.
- ಈ ದಿನ ಬಾಲ ಗೋಪಾಲನನ್ನು ಉಯ್ಯಾಲೆಯಲ್ಲಿ ಕೂರಿಸಿ.
- ನಿಮ್ಮ ಇಚ್ಛೆಯಂತೆ ಗೋಪಾಲನಿಗೆ ಲಡ್ಡು ಅರ್ಪಿಸಿ.
- ಈ ದಿನದಂದು ರಾತ್ರಿಯ ಪೂಜೆಯು ಮುಖ್ಯವಾಗಿದೆ. ಏಕೆಂದರೆ ಭಗವಾನ್ ಶ್ರೀ ಕೃಷ್ಣ ರಾತ್ರಿಯಲ್ಲಿ ಜನಿಸಿದನು.
- ರಾತ್ರಿ ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಾಡಿ. ಗೋಪಾಲನಿಗೆ ಬೆಣ್ಣೆ, ಕಲ್ಲು ಸಕ್ಕರೆ, ಹಣ್ಣುಗಳು, ಸಿಹಿತಿಂಡಿಗಳು ಮತ್ತು ಒಣ ಹಣ್ಣುಗಳನ್ನು ಅರ್ಪಿಸಿ.
- ನೈವೇದ್ಯವನ್ನು ಅರ್ಪಿಸಿದ ನಂತರ ಗೋಪಾಲನಿಗೆ ಆರತಿಯನ್ನು ಮಾಡಬೇಕು.
ಶ್ರೀಕೃಷ್ಣ ಜನ್ಮಾಷ್ಟಮಿ ಮಂತ್ರ
- ‘ಕೃಂ ಕೃಷ್ಣಾಯ ನಮಃ’ !
- ‘ಓಂ ಶ್ರೀಂ ನಮಃ ಶ್ರೀ ಕೃಷ್ಣಾಯ ಪರಿಪೂರ್ಣತಮಾಯ ಸ್ವಾಹಾ’!
- ‘ಗೋಕುಲನಾಥಾಯ ನಮಃ’ ‘ಗೋವಲ್ಲಭಾಯ ಸ್ವಾಹಾ’ !
- ‘ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಕೃಷ್ಣಾಯ ಗೋವಿಂದಾಯ ಗೋಪಿಜನ ವಲ್ಲಭಾಯ ಶ್ರೀಂ ಶ್ರೀಂ ಶ್ರೀಂ’ !