ಸಿಲಿಕಾನ್ ಸಿಟಿಯ ಯಲಹಂಕ ವಾಯುನೆಲೆಯಲ್ಲಿ ಇದೇ ಫೆಬ್ರುವರಿ 10 ರಿಂದ 14ರವರಗೆ ಏರ್ಶೋ ನಡೆಯಲಿದೆ. ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ರಂಗೇರಲಿದ್ದು ದೇಶ-ವಿದೇಶಗಳಿಂದ ಸಾಕಷ್ಟು ಜನರು ವಿಮಾನಗಳ ಹಾರಾಟ ನೋಡಲು ಆಗಮಿಸುತ್ತಾರೆ. ಹೀಗಾಗಿ ಜನ ದಟ್ಟಣೆ, ವಾಹನ ದಟ್ಟಣೆ ಆಗುವುದು ಸಾಮಾನ್ಯ. ಇದರಿಂದ ಏರ್ಶೋ ನಡೆಯುವ ಸುತ್ತಮುತ್ತ ಹಲವು ಸಂಚಾರ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿದೆ.
ಯಾವ ಗೇಟ್ನಿಂದ ಬರಬೇಕು?
ವಿಮಾನಗಳ ಹಾರಾಟ ನೋಡಲು ಬರುವವರು ನೀಡಲಾದ ಟಿಕೆಟ್ ಅಥವಾ ಪಾಸ್ ಅನ್ನು ಪಡೆದವರು ಮೊದಲೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. ಇದರಿಂದ ಯಾವ ಗೇಟ್ನಿಂದ ಬರಬೇಕು ಎನ್ನುವುದು ತಿಳಿಯುತ್ತದೆ. ಪಾಸ್ ಪಡೆದವರಿಗೆ ಮಾತ್ರ ಫ್ರೀ ಪಾರ್ಕಿಂಗ್ ಇರುವುದರಿಂದ ಜಿಕೆವಿಕೆಯ ಶಟಲ್ ಬಸ್ ಸೇವೆ ಬಳಕೆ ಮಾಡಿಕೊಳ್ಳಬಹುದು.
ಏರ್ ಶೋಗೆ ಆಗಮಿಸಲು ವಾಹನ ಸವಾರರು ಬಳಸಬೇಕಾದ ಮಾರ್ಗ
- ಬೆಂಗಳೂರು ಪೂರ್ವ ದಿಕ್ಕಿನಿಂದ ಬರುವ ವಾಹನಗಳು, ಕೆ.ಆರ್. ಪುರ- ಬಾಗಲೂರು- ಹೆಣ್ಣೂರು ಕ್ರಾಸ್ – ಕೊತ್ತನೂರು – ಗುಬ್ಬಿ ಕ್ಲಾಸ್ – ಕಣ್ಣೂರು ಆಕ್ ಪಾಳ್ಯ – ವಿದ್ಯಾನಗರ ಕ್ರಾಸ್- ಹುಣಸಮಾರನಹಳ್ಳಿ ಮೂಲಕ ಆಗಮಿಸಬಹುದು.
- ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವ ವಾಹನಗಳು, ಗೊರಗುಂಟೆಪಾಳ್ಯ- ಉನ್ನಿಕೃಷ್ಣನ್ ರಸ್ತೆ- ಬಿಇಎಲ್ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ- ದೊಡ್ಡಬಳ್ಳಾಪುರ ರಸ್ತೆ- ನಾಗೇನಹಳ್ಳಿ ಗೇಟ್- ಗಂಟಿಗಾನಹಳ್ಳಿ ಸರ್ಕಲ್ ಮೂಲಕ ಬರಬಹುದು.
- ಬೆಂಗಳೂರು ದಕ್ಷಿಣದ ಕಡೆಯಿಂದ ಬರುವ ವಾಹನಗಳು, ಮೈಸೂರು ರಸ್ತೆ- ನಾಯಂಡಹಳ್ಳಿ- ಚಂದ್ರಾಲೇಔಟ್- ಗೊರಗುಂಟೆಪಾಳ್ಯ- ಬಿಇಎಲ್ ವೃತ್ತ- ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ ಜಂಕ್ಷನ್ – ಉನ್ನಿ ಕೃಷ್ಣನ್ ಜಂಕ್ಷನ್ -ದೊಡ್ಡಬಳ್ಳಾಪುರ ಮುಖ್ಯ ರಸ್ತೆ ನಾಗೇನಹಳ್ಳಿ ಗೇಟ್ ಮೂಲಕ ಆಗಮಿಸಬಹುದು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಪ್ರಯಾಣ ಮಾರ್ಗ:
ಬೆಂಗಳೂರು ಪೂರ್ವ: ಕೆ.ಆರ್ ಪುರಂ, ಹೆಣ್ಣೂರು ಕ್ರಾಸ್, ಕೊತ್ತನೂರು, ಗುಬ್ಬಿಕ್ರಾಸ್ ಕಣ್ಣೂರು ಹಾಗೂ ಬಾಗಲೂರು.
ಬೆಂಗಳೂರು ಪಶ್ಚಿಮ: ಗೊರಗುಂಟೆ ಪಾಳ್ಯ, ಬಿ.ಇ.ಎಲ್ ವೃತ್ತ, ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್. ಮದರ್ಡೈರಿಯಿಂದ ಬರಬೇಕು
ಬೆಂಗಳೂರು ದಕ್ಷಿಣ: ಮೈಸೂರು ರಸ್ತೆ, ನಾಯಂಡನಹಳ್ಳಿ, ಚಂದ್ರ ಲೇಔಟ್ ಗೊರಗುಂಟೆಪಾಳ್ಯ, ಬಿಇಎಲ್ ವೃತ್ತ, ಗಂಗಮ್ಮ ವೃತ್ತ, ಎಂ.ಎಸ್ ಪಾಳ್ಯ ಸರ್ಕಲ್, ಮದರ್ಡೈರಿ ಜಂಕ್ಷನ್ ಉನ್ನಿಕೃಷ್ಣನ್ ಜಂಕ್ಷನ್ ಮೂಲಕ ಹೋಗಬೇಕು.
ಸಂಚಾರ ನಿಷೇಧ
ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ, ಮೇದ್ರಿ ವೃತ್ತದಿಂದ ಎಂಎಐಟಿ ಕ್ರಾಸ್ವರೆಗೆ ಹಾಗೂ ಎಂವಿಐಟಿ ಕ್ರಾಸ್ ನಿಂದ ಮೇಖ್ರಿ ವೃತ್ತದವರೆಗೆ, ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್ವರೆಗೆ, ನಾಗವಾರ ಜಂಕ್ಷನ್ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರಿನ ರೇವಾ ಕಾಲೇಜ್ ಜಂಕ್ಷನ್, ಹೆಸರಘಟ್ಟ ಹಾಗೂ ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಬರುವ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.
ವಾಹನ ನಿಲುಗಡೆ ನಿಷೇಧ
ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರುವರೆಗೆ, ನಾಗವಾರ ಜಂಕ್ಷನ್ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗದ ರೇವಾ ಕಾಲೇಜ್ ಜಂಕ್ಷನ್, ಎಫ್ಟಿಐ ಜಂಕ್ಷನ್ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್, ಹೆಣ್ಣೂರು ಕ್ರಾಸ್ನಿಂದ ಬೇಗೂರು ಬ್ಯಾಕ್ ಗೇಡ್ವರೆಗೆ, ನಾಗೇನಹಳ್ಳಿ ಗೇಟ್ ಜಂಕ್ಷನ್ನಿಂದ ಯಲಹಂಕ ಸರ್ಕಲ್ವರೆಗೆ, ಎಂವಿಐಟಿ ಕ್ರಾಸ್ನಿಂದ ನಾರಾಯಣಪುರ ರೈಲ್ವೇ ಕ್ರಾಸ್ವರೆಗೆ, ಕೋಗಿಲು ಕ್ರಾಸ್ ಜಂಕ್ಷನ್ನಿಂದ ಕಣ್ಣೂರು ಜಂಕ್ಷನ್ ವರೆಗೆ ಮತ್ತಿಕೆರೆ ಕ್ರಾಸ್ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್ ಜಂಕ್ಷನ್ ವರೆಗೆ, ಜಾಲಹಳ್ಳಿ ಕ್ರಾಸ್ ಜಂಕ್ಷನ್ನಿಂದ ಗಂಗಮ್ಮ ಸರ್ಕಲ್ ಜಂಕ್ಷನ್ವರೆಗೆ ವಾಹನ ನಿಲುಗಡೆ ನಿಷೇಧ ಇರುತ್ತದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc