ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್ ಹಾಗೂ ತಂಡದ ವಿರುದ್ದ ನೆನ್ನೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಇದೇ ವೇಳೆ ಪಟ್ಟಣಗೆರೆ ಶೇಡ್ನಲ್ಲಿ ರೇಣುಕಾಸ್ವಾಮಿಗೆ ಹಲ್ಲೆ ಮಾಡುವ ವೇಳೆಯಲ್ಲಿ ತೆಗೆದ ಕೊನೆ ಕ್ಷಣದ ಫೋಟೋಗಳು ವೈರಲ್ ಅಗಿವೆ. ಇದೇ ಸಂದರ್ಭದಲ್ಲಿ ಸ್ಥಳ ಮಹಜರು ವೇಳೆಯಲ್ಲಿ ಪೊಲೀಸರು ಸ್ಟೋನಿ ಬ್ರೂಕ್ಸ್ ಪಬ್ ನಲ್ಲಿ ರೇಣುಕಾಸ್ವಾಮಿ ಕೊಲೆ ಮುಂಚೆ ಹಾಗೂ ಕೊಲೆ ನಂತರ ಡಿ ಗ್ಯಾಂಗ್ ಪಾರ್ಟಿ ಮಾಡಿದ್ರು. ಅದೇ ದೃಶ್ಯವನ್ನೇ ರೀ-ಕ್ರಿಯೇಟ್ ಮಾಡಿದ್ದರು. ಆ ಕ್ಷಣದ ಎಕ್ಸ್ಕ್ಲೂಸೀವ್ ಫೋಟೋ ಗ್ಯಾರಂಟಿ ನ್ಯೂಸ್ಗೆ ಲಭ್ಯವಾಗಿದೆ.
ಈ ಫೋಟೋದಲ್ಲಿ ಚಿಕ್ಕಣ್ಣ, ದರ್ಶನ್, ವಿನಯ್, ನಾಗರಾಜ್ ಇದ್ದು ಡಿ ಗ್ಯಾಂಗ್ ಪಾರ್ಟಿ ಮಾಡಿದ್ದನ್ನ ರೀ ಕ್ರಿಯೇಟ್ ಮಾಡಿದ್ದರು ಪೊಲೀಸ್ರು. ಸ್ಟೋನಿ ಬ್ರೂಕ್ ಪಬ್ ನಲ್ಲಿದೆ ಡಿ ಬಾಸ್ ಸಫಾರಿ, ದರ್ಶನ್ಗಾಗಿಯೇ ಮಾಡಿರುವ ಸ್ಪೆಷಲ್ ರೂಂ ಇದಾಗಿದ್ದು, ಇಲ್ಲಿಯೇ ನಟ ದರ್ಶನ್ ತಮ್ಮ ಸಂಗಡಿಗರೊಂದಿಗೆ ಪಾರ್ಟಿ ಮಾಡುತ್ತಿದ್ದರು. ಈ ಸಪರೇಟ್ ರೂಂ ಹೆಸರೇ ಡಿ ಬಾಸ್ ಸಫಾರಿ. ಇಲ್ಲೇ ಕೂತು ನಡೆದಿತ್ತು ರೇಣುಕಾಸ್ವಾಮಿ ಹತ್ಯೆಯ ಪ್ಲ್ಯಾನ್ ಎಂದು ತಿಳಿದುಬಂದಿದೆ.