ಸಿನಿಮಾದಿಂದ ಹಲವು ವರ್ಷಗಳ ಕಾಲ ದೂರ ಉಳಿದಿದ್ದ ರಾಧಿಕಾ ಕುಮಾರಸ್ವಾಮಿ ಈಗ ಭೈರಾದೇವಿ ಸಿನಿಮಾ ರಿಲೀಸ್ಗೆ ಸಜ್ಜಾಗುತ್ತಿದ್ದಾರೆ. ಅಕ್ಟೋಬರ್ 3ರಂದು ಸಿನಿಮಾ ತೆರೆ ಕಾಣುತ್ತಿದೆ. ಇದೀಗ ಸಿನಿಮಾಗೆ ಮತ್ತೆ ಕಮ್ಬ್ಯಾಕ್ ಆಗಿದ್ದಾರೆ. ರಾಧಿಕಾ ಅವರಿಗೆ ಫ್ಯಾನ್ಸ್ ಹಲವು ಬಾರಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂದು ಪ್ರಶ್ನೆ ಇಡುತ್ತಿದ್ದರು. ಇದೀಗ ನಟಿ ಖಾಸಗಿ ವಾಹಿನಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಿಂದ ಏನಾದರೂ ಪಾಲಿಟಿಕ್ಸ್ಗೆ ಅವಕಾಶ ಇದೆ ಅಂದರೆ ಎರಡೂ ಓಕೆ ಎಂದು ಖಾಸಗಿ ವಾಹಿಯ ಸಂದರ್ಶನವೊಂದರಲ್ಲಿ ರಾಧಿಕಾ ಕುಮಾರಸ್ವಾಮಿ ರಿವೀಲ್ ಮಾಡಿದ್ದಾರೆ.
ಅಷ್ಟೇ ಅಲ್ಲ ತಮಗೆ ಹಲವು ಬಾರಿ ಹಲವಾರು ಆಫರ್ಗಳು ಬಂದಿದ್ದವು ಎಂದು ಹೇಳಿಕೊಂಡಿದ್ದಾರೆ. ನನ್ನ ಕುಟುಂಬ ಕೂಡ ಪಾಲಿಟಿಕ್ಸ್ ಹಿನ್ನೆಲೆ ಇದ್ದ ಕಾರಣ ನನಗೂ ಹೆಚ್ಚಾಗಿ ಇದೇ ಪ್ರಶ್ನೆ ಕೇಳುತ್ತಾರೆ. ಆದರೆ ನನಗೆ ಸಿನಿಮಾನೆ ಇಷ್ಟ ಕಲರ್ಫುಲ್ ಆಗಿರುತ್ತೆ’ ಎಂದು ಹೇಳಿಕೊಂಡಿದ್ದಾರೆ ರಾಧಿಕಾ. ನಟ ದರ್ಶನ್ ಕುರಿತಾಗಿಯೂ ಮಾತನಾಡಿದ್ದರು. ಅನಾಥರು ಸಿನಿಮಾದಲ್ಲಿ ರಾಧಿಕಾ ಅವರು ದರ್ಶನ್ ಜತೆ ನಟಿಸಿರೋದು ಗೊತ್ತೇ ಇದೆ.
ನಾಲ್ಕು ವರ್ಷಗಳ ಹಿಂದೆ ರಾಧಿಕಾ ಕುಮಾರಸ್ವಾಮಿ ನಟಿಸಿದ್ದ ‘ದಮಯಂತಿ’ ಸಿನಿಮಾದ ಆಡಿಯೋ ಲಾಂಚ್ಗೆ ಅತಿಥಿಯಾಗಿ ಬಂದಿದ್ದರು. ಆ ವೇಳೆ ದರ್ಶನ್ ವೇದಿಕೆ ಮೇಲೆ ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ತನಗಿಂತ ಮೊದಲೇ ಬಂದಿದ್ದಾರೆ ಎಂದು ಹೇಳಿದ್ದರು. ನಟ ದರ್ಶನ್ ಜೊತೆ ನಟಿಸಿರುವ ರಾಧಿಕಾ ಕುಮಾರಸ್ವಾಮಿ, ಜೈಲು ಸೇರಿರುವ ನಟ ದರ್ಶನ್ ಸ್ಥಿತಿ ಕಂಡು ಬೇಸರವಾಗ್ತಿದೆ ಎಂದಿದ್ದಾರೆ. ದರ್ಶನ್ ವಿಚಾರ ಮಾತಾಡುವಾಗ ಮನಸ್ಸಿಗೆ ನೋವಾಗ್ತಿದೆ. ಅವರ ಜೊತೆ ನಾನು ಎರಡು ಸಿನಿಮಾ ಮಾಡಿದ್ದೇನೆ. ಮಂಡ್ಯ ಹಾಗೂ ಅನಾಥರು ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಯಾವ ರೀತಿ ನಡೆದುಕೊಳ್ತಿದ್ದರು ಎಂಬುದನ್ನು ನಾನು ನೋಡಿದ್ದೇನೆ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ರು.