ಮಾವಿನ ಹಣ್ಣು ಕದ್ದರೆಂದು ತೋಟದ ಮಾಲೀಕನೊಬ್ಬ ಮೂವರು ಪುಟ್ಟ ಮಕ್ಕಳನ್ನು ಮರಕ್ಕೆ ಕಟ್ಟಿ ಹಾಕಿ, ಅವರ ಬಾಯಿಗೆ ಮಾವು ತುರುಕಿ ಅಮಾನುಷವಾಗಿ ಥಳಿಸಿರೋ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಎಂಬಲ್ಲಿ ನಡೆದಿದೆ.
ಮಾವಿನ ಹಣ್ಣನ್ನು ಕದ್ದರೆಂಬ ಒಂದೇ ಒಂದು ಕಾರಣಕ್ಕೆ ತೋಟದ ಮಾಲೀಕ ಮೂವರು ಪುಟ್ಟ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ, ಮಕ್ಕಳು ಕಿರಿಚಾಡುವ ಸದ್ದು ಯಾರಿಗೂ ಕೇಳಬಾರದೆಂದು ಅವರ ಬಾಯಿಗೆ ಮಾವಿನ ಹಣ್ಣು ತುರುಕಿ, ಕ್ರೂರವಾಗಿ ಥಳಿಸಿದ್ದಾನೆ. ತೋಟದ ಮಾಲೀಕ ಸುದರ್ಶನ್ ಎಂದು ಗುರುತಿಸಲಾಗಿದೆ. ಇದೀಗ ಈತನ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಡಿಯೋ ತುಣುಕು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಾಲೀಕನನ್ನು ಬಂಧಿಸಲಾಗಿದೆ.