ಪ್ರತಿದಿನ ಮಕ್ಕಳಿಗೆ ಪಾಠ-ಪ್ರವಚನ ಮಾಡುವುದರಲ್ಲೇ ತಲ್ಲೀನರಾಗಿರುತ್ತಿದ್ದ ಶಿಕ್ಷಕರಿಗೆ, ಅವರ ಸಂಸ್ಥೆಯ ಆಡಳಿತ ಮಂಡಳಿಯೊಂದು ಶಿಕ್ಷಕರಿಗಾಗಿಯೇ ಮುದ್ದೆ ಹಾಗೂ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಚಿಕ್ಕಬಳ್ಳಾಪುರ ನಗರದ ಪಂಚಗಿರಿ ಬೋಧನಾ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿತ್ತು. ಇದರಿಂದ ಶಿಕ್ಷಕರು ವಿದ್ಯಾರ್ಥಿಗಳ ಮುಂದೆ ಮುಗಿಬಿದ್ದು ಮುದ್ದೆ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಭಾಗಿಯಾಗಿ ಸೈ ಎನಿಸಿಕೊಂಡರು.
ಕೆ.ವಿ. ವೆಂಕಟಪತಪ್ಪ ಶಿಕ್ಷಣ ದತ್ತಿ ಹಾಗೂ ಟ್ರಸ್ಟ್ ಡೇ ಪ್ರಯುಕ್ತ ಆಡಳತಿ ಮಂಡಳಿ, ಶಿಕ್ಷಕರಿಗಾಗಿ ಮುದ್ದೆ ಹಾಗೂ ಬಾಳೆ ಹಣ್ಣು ತಿನ್ನುವ ಸ್ಪರ್ದೆ ಆಯೋಜಿಸಿತ್ತು. ಇದ್ರಿಂದ ಶಿಕ್ಷಕರು ವಿದ್ಯಾರ್ಥಿಗಳ ಮುಂದೆ ಮುಗಿಬಿದ್ದು ಗಬ ಗಬನೆ ಮುದ್ದೆ ತಿಂದರು. ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಶಿಕ್ಷಕ ಶ್ರೀನಿವಾಸ್ ಎರಡು ಕೆಜಿ ತೂಕದ ಮುದ್ದೆ ತಿಂದು ಬಲೆ ಎನಿಸಿಕೊಂಡರು. ಇನ್ನು ಶಿಕ್ಷಕಿಯರಿಗಾಗಿ ಪಚ್ಚ ಬಾಳೆಹಣ್ಣುಗಳ ತಿನ್ನುವ ಸ್ಪರ್ದೆ ಆಯೋಜನೆ ಮಾಡಲಾಗಿತ್ತು.
ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳ ಮುಂದೆ ಮುಗಿಬಿದ್ದು ಮುದ್ದೆ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಭಾಗಿಯಾಗಿ ಸೈ ಎನಿಸಿಕೊಂಡರು.