ಇತ್ತೀಚೆಗೆ ಸ್ಟಾರ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ನಿವೃತ್ತಿ ಘೋಷಣೆ ಮಾಡಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಬಳಿಕ ಕೆ.ಎಲ್ ರಾಹುಲ್ ತಾನು ಹಾಕಿದ್ದ ಇನ್ಸ್ಟಾಗ್ರಾಮ್ ಪೋಸ್ಟ್ ಡಿಲೀಟ್ ಮಾಡಿದ್ದು, ಇದು ಸುಳ್ಳು ಎಂದು ಹೇಳಲಾಗಿತ್ತು. ಇದರ ಮಧ್ಯೆ ಈ ವಿಚಾರಕ್ಕೆ ಕೆ.ಎಲ್ ರಾಹುಲ್ ತನ್ನ ಜೀವನದಲ್ಲಿ ಅತಿಯಾಗಿ ಹೆದರಿದ್ದರು ಎನ್ನುವ ಸ್ಫೋಟಕ ಸುದ್ದಿ ಹೊರಬಿದ್ದಿದೆ.
ಹಲವು ವರ್ಷಗಳ ಹಿಂದೆ ಕಾಫಿ ವಿತ್ ಕರಣ್ ಶೋನಲ್ಲಿ ಕೆ.ಎಲ್ ರಾಹುಲ್ ಭಾಗಿಯಾಗಿದ್ದ ಹಳೆಯ ವಿಡಿಯೋ ಭಾರೀ ವೈರಲ್ ಆಗಿದೆ. ಈ ಶೋನಲ್ಲಿ ಕೆಎಲ್ ರಾಹುಲ್ ಜೊತೆ ಹಾರ್ದಿಕ್ ಪಾಂಡ್ಯ ಇದ್ದರು. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡಿ ಇಬ್ಬರು ವಿವಾದಕ್ಕೆ ಗುರಿಯಾಗಿದ್ದರು. ಈ ಘಟನೆ ಬಗ್ಗೆ ರಾಹುಲ್ ಬಾಯ್ಬಿಟ್ಟಿದ್ದಾರೆ.
ಶೋನಲ್ಲಿ ನಾನು ಏನೋ ಮಾತಾಡಿದೆ. ನಾನು ನಾಚಿಕೆ ಮತ್ತು ಮೃದು ಸ್ವಭಾವದ ಹುಡುಗ. ಯಾವತ್ತೂ ಯಾರ ವಿರುದ್ಧವೂ ಮಾತಾಡಿರಲಿಲ್ಲ. ಅಂದು ಯಾವುದೇ ಭರದಲ್ಲಿ ಮಾತಾಡಿದೆವು. ನಾನು ಭಾರತ ತಂಡಕ್ಕಾಗಿ ಆಡುತ್ತಿದೆ. ಆ ಒಂದು ವಿಚಾರಕ್ಕೆ ಟೀಮ್ ಇಂಡಿಯಾದ ಬಹಳ ನಡೆಯಿತು. ನನ್ನಲ್ಲಿ ಹೆಚ್ಚು ಆತ್ಮ ವಿಶ್ವಾಸ ಬಂದಿತು. ನಾನು ಎಲ್ಲರ ಜೊತೆ ಆತ್ಮವಿಶ್ವಾಸದಿಂದ ಮಾತನಾಡುತ್ತಾನೆ. ಕಾಫಿ ವಿತ್ ಕರಣ್ ಸಂದರ್ಶನ ನನ್ನ ಮೇಲೆ ಕೆಟ್ಟ ಪ್ರಭಾವ ಬೀರಿತ್ತು. ತಂಡದಿಂದ ನನ್ನನ್ನು ತೆಗೆದು ಹಾಕಿದ್ರು. ಇದೆಲ್ಲಾ ನನಗೆ ಎಂದಿಗೂ ಆಗಿರಲಿಲ್ಲ. ನಾನು ಸಣ್ಣ ಪುಟ್ಟ ಚೇಷ್ಠೆಗಳನ್ನು ಮಾಡಿದ್ದೇನೆ. ಶಾಲೆಯಿಂದ ಎಂದಿಗೂ ನನ್ನನ್ನು ಹೊರಹಾಕಿಲ್ಲ. ತಂಡದಿಂದ ನನ್ನನ್ನು ಹೊರ ಹಾಕಿದ್ರು. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ರು. ನನಗೆ ಆದ ಅವಮಾನ ನಾನು ಮರೆಯಲಾರೆ ಎಂದರು.