‘ಗಿಚ್ಚಿ ಗಿಲಿಗಿಲಿ 3′ ಕಾರ್ಯಕ್ರಮದ ಗೆಲುವಿನ ನಂತರ ಕೆಲ ಸಿನಿಮಾಗಳ ಬಿಡುಗಡೆಯ ಪ್ರಚಾರದಲ್ಲಿ ಕಾರ್ತಿಕ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ನಟ ಮಾತನಾಡಿದ್ದಾರೆ. ಈ ಪ್ರಕರಣದಿಂದ ದರ್ಶನ್ ಆಚೆ ಬರಬೇಕು ಎಂದಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಕುರಿತು ಮಾತನಾಡಿ, ದರ್ಶನ್ ಸರ್ಗೆ ಏನು ಆಗಬಾರದು. ಅವರು ಇದನ್ನು ಮಾಡಿರಬಾರದು. ಅವರಿಗೆ ಒಳ್ಳೆಯದು ಆಗಬೇಕು, ಇದರಿಂದ ಅವರು ಆಚೆ ಬಂದು ಸಿನಿಮಾ ಮಾಡಬೇಕು ಎಂದಿದ್ದಾರೆ. ಅವರ ಸಿನಿಮಾಗಾಗಿ ಅಪಾರ ಅಭಿಮಾನಿಗಳ ಬಳಗ ಕಾಯುತ್ತಿದೆ. ‘ಮೆಜೆಸ್ಟಿಕ್’ನಿಂದ ಹಿಡಿದು ‘ರಾಬರ್ಟ್’ವರೆಗೂ ಹೇಗೆ ಕುಣಿಸಿದರೋ ಹಾಗೇ ಅವರು ಬಂದ್ಮೇಲೆ ದುಪ್ಪಟ್ಟು ಅವರನ್ನು ಮೆರಸಬೇಕು. ನಾನೊಬ್ಬ ದರ್ಶನ್ ಅಭಿಮಾನಿಯಾಗಿ ಆಸೆ ಎಂದು ಮಾತನಾಡಿದ್ದಾರೆ.
ಈ ವೇಳೆ, ‘ಟಗರು ಪಲ್ಯ’ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಗೆಸ್ಟ್ ಆಗಿ ದರ್ಶನ್ ಸರ್ ಬಂದಿದ್ದರು. ಆಗ ಹುಲಿ ಕಾರ್ತಿಕ್ ಅಲ್ವಾ, ನಾನು ನಿಮ್ಮ ನಟನೆ ಶೋನಲ್ಲಿ ನೋಡಿದ್ದೀನಿ ಒಳ್ಳೆಯದಾಗಲಿ ಎಂದು ಹರಸಿದರು. ಅಷ್ಟೂ ದರ್ಶನ್ ಸರ್ ಡೌನ್ ಟು ಅರ್ಥ್. ನಮಗೆ ಅವರ ಹಾಗೇ ಅಭಿನಯಿಸೋಕೆ ಆಗಲ್ಲ. ಅವರು ಪೌರಣಿಕ ಪಾತ್ರದಲ್ಲೂ ಮಾಡಿದ್ದಾರೆ. ನಿಮ್ಮ ನಟನೆ ಚೆನ್ನಾಗಿದೆ ಎಂದು ಹೇಳುವ ದೊಡ್ಡ ಗುಣ ಅವರಿಗೆ ಎಂದು ಕಾರ್ತಿಕ್ ಸ್ಮರಿಸಿದರು.