ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದ ಮೇಲೆ ದರ್ಶನ್ ಅಂಡ್ ಗ್ಯಾಂಗ್ ಮಾಡಿದ ಅಟ್ಟಹಾಸ, ಕ್ರೌರ್ಯದ ಬಗ್ಗೆ ಕಳೆದೆರಡು ದಿನಗಳಿಂದ ರಾಜ್ಯದ ಜನರಿಗೆ ಶಾಕ್ ಆಗ್ತಿದೆ. ಮೇಲಿಂದ ಮೇಲೆ ಆ ನರಕ ಸದೃಶ ವಾತಾವರಣದಲ್ಲಿ ನರಳಿ ನರಳಿ ಪ್ರಾಣಬಿಟ್ಟ ರೇಣುಕಾಸ್ವಾಮಿಯ ಅಸಹಾಯಕತೆ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡ್ತಿದೆ. ಈ ಮಧ್ಯೆ ಮತ್ತೆ ಮತ್ತೆ ಪೋಟೋಗಳು ರಿಲೀಸ್ ಆಗ್ತಿವೆ.
ರೇಣುಕಾಸ್ವಾಮಿಗೆ ಡೆವಿಲ್ ಌಂಡ್ ಗ್ಯಾಂಗ್ ಬದುಕಿದ್ದಾಗಲೇ ನರಕ ತೋರಿಸಿ, ಕ್ರೂರಿಗಳಂತೆ ಕೊಲೆ ಮಾಡಿತ್ತು. ಪರಿ ಪರಿಯಾಗಿ ರೇಣುಕಾಸ್ವಾಮಿ ಬೇಡಿಕೊಳ್ಳುತ್ತ ಕಣ್ಣೀರಿನ ಜೊತೆ ನೆತ್ತರು ಸುರಿಸಿದ್ರೂ ಬಿಡದ ಪಾಪಿಗಳು ಕ್ರೂರವಾಗಿ ಹೊಡೆದು ಸಾಯಿಸಿದ್ದು, ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಲಾಠಿ, ಮೆಗ್ಗರ್, ಹಗ್ಗ, ಸಿಕ್ಕ ಸಿಕ್ಕ ಆಯುಧಗಳನ್ನು ಹಿಡಿದು ಬಡಿದು ಕೊಲೆ ಮಾಡಿದ್ದು ಅಪರಾಧದ ಪುಟದಲ್ಲಿ ರೆಕಾರ್ಡ್ ಆಗಿದೆ. ಮೊನ್ನೆ ಎರಡು ಪೋಟೋ, ನಿನ್ನೆ ಮೈಸೂರಿನ ಹೋಟೆಲ್ ಮುಂದಿನ ಫೋಟೋ ಬೆನ್ನಲ್ಲೇ ಸದ್ಯ ಮತ್ತೆ ಕೆಲ ಕಾಟೇರ ಕಠೋರವಾಗಿ ವರ್ತಿಸಿದ ಪೋಟೋಗಳು ರಿಲೀಸ್ ಆಗಿವೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಮೃತದೇಹವನ್ನು ಡಿ ಗ್ಯಾಂಗ್ ಬಿಸಾಡಲು ಪ್ಲಾನ್ ಮಾಡಿತ್ತು. ಅದರಂತೆ ಸುಮ್ಮನಹಳ್ಳಿ ರಾಜಕಾಲುವೆ ಬಳಿ ಆರೋಪಿಗಳು ಯಾರ ಭಯವು ಇಲ್ಲದೇ ಶವವನ್ನು ಬೇಕಾಬಿಟ್ಟಿ ಬಿಸಾಡಿ ಹೋಗಿದ್ದರು. ಶವ ಎಸೆದು ಹೋಗುತ್ತಿರುವ ಫೋಟೋ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ. ಮೃತದೇಹವನ್ನು ಬಿಸಾಡಿದ ಬಳಿಕ ಆರೋಪಿಗಳು ತೆರಳುತ್ತಿರುವ ಫೋಟೋಗಳು ಸಿಕ್ಕಿವೆ. ಕಾರ್ತಿಕ್, ರಾಘವೇಂದ್ರ, ನಿಖಿಲ್ ಇರುವ ಫೋಟೋಗಳು ಸೆರೆಯಾಗಿವೆ. ಬಿಳಿ ಸ್ಕಾರ್ಪಿಯೋದಲ್ಲಿ ಬಂದು ಮೃತದೇಹ ಬಿಸಾಡಿ ಆರೋಪಿಗಳು ಹೋಗಿದ್ದರು ಅಂತ ಸಿಸಿಟಿವಿ ದೃಶ್ಯವನ್ನ ಪೊಲೀಸರು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಾರೆ ಪೊಲೀಸರು ಕೋರ್ಟ್ಗೆ 3991 ಪುಟಗಳಷ್ಟು ಡೆವಿಲ್ ಗ್ಯಾಂಗ್ ಮಾಡಿದ ಕ್ರೈಂ ಶೀಟ್ನ್ನು ನೀಡಿದ್ದಾರೆ. ಅದರಲ್ಲಿರುವ ಒಂದೊಂದು ಪುಟವೂ ದರ್ಶನ್ ಮತ್ತು ಗ್ಯಾಂಗ್ನ ಕರಾಳ ಮೃಗೀಯ ವರ್ತನೆಯನ್ನು ತೆರೆದಿಡುತ್ತಿವೆ. ಸದ್ಯ ಮೇಲಿಂದ ಮೇಲೆ ಹಂತಕ ಪಡೆಯ ಒಂದೊಂದು ಪೋಟೋಗಳು ಬಿಡುಗಡೆಯಾಗಿ ರೀಲ್ ಹೀರೋ ರಿಯಲ್ ವಿಲನ್ ಆಗಿದ್ದನ್ನ ಸಿನಿಮಾ ಪೋಸ್ಟರ್ನಂತೆ ರಿವೀಲ್ ಮಾಡ್ತಿವೆ.