ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರದ ಆರೋಪದಲ್ಲಿ ದರ್ಶನ್ ಹಾಗೂ ಟೀಂ ಜೈಲಿನಲ್ಲಿದೆ. ನಟಿ ಪವಿತ್ರಾ ಗೌಡ ಕೂಡಾ ಜೈಲಿನಲ್ಲಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದರ್ಶನ್ ಕಡೆಯವರು ಕೂಡಾ ಚಿತ್ರದುರ್ಗಕ್ಕೆ ಪ್ರಯಾಣಿಸಿ ರೇಣುಕಾಸ್ವಾಮಿಯ ಕುಟುಂಬದವರನ್ನು ಭೇಟಿ ಮಾಡುತ್ತಿದ್ದಾರೆ. ಇದೀಗ ರೇಣುಕಾಸ್ವಾಮಿ ಕುಟುಂಬದ ಮೇಲೆ ಪೊಲೀಸರು ನಿಗಾ ಇಡಲು ಶುರು ಮಾಡಿದ್ದಾರೆ. ರೇಣುಕಾಸ್ವಾಮಿ ಕುಟುಂಬದ ಮೇಲೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳುವವರ ಮೇಲೆಯೂ ನಿಗಾ ಇಡಲಾಗುತ್ತಿದೆ. ಖಾಕಿಗೆ ದೊಡ್ಡ ಮಾಹಿತಿಯೊಂದು ಸಿಕ್ಕಿದ್ದು ಈ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕಾಗಿರುವಾಗ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳುವವರಿಗೆ ಸಂಕಷ್ಟ ಎದುರಾಗಿದೆ. ಸಾಂತ್ವನ ಹೇಳುವವರ ಮೇಲೆ ಖಾಕಿ ಕಣ್ಣಿಟ್ಟಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ಹಲವರು ಸಾಂತ್ವನ ಹೇಳುತ್ತಿದ್ದಾರೆ. ಧೈರ್ಯ ತುಂಬುತ್ತಿದ್ದಾರೆ. ದರ್ಶನ್ ಕಡೆಯವರು ಕೂಡಾ ಹೋಗುತ್ತಿದ್ದಾರೆ. ಸಾಂತ್ವನ ಹೇಳುವ ನೆಪದಲ್ಲಿ ದರ್ಶನ್ ಆಪ್ತರು ಕೂಡಾ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡುತ್ತಿದ್ದಾರೆ. ನಟ, ನಟಿಯರು, ನಿರ್ಮಾಪಕರು ಭೇಟಿ ಮಾಡುತ್ತಿದ್ದಾರೆ. ಇಂಥವರ ಮೇಲೆ ನಿಗಾ ಇಡಲಾಗುತ್ತಿದೆ. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯಾ? ಹಣ ಬಲ, ಪ್ರಭಾವ ಬಳಸುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಪೊಲೀಸರು ಭೇಟಿ ನೀಡುವವರ ಮೇಲೆ ಹೆಚ್ಚಿನ ನಿಗಾ ಇಡುತ್ತಿದ್ದಾರೆ. ದರ್ಶನ್ ಮಾತ್ರವಲ್ಲದೆ ದರ್ಶನ್ ಜೊತೆ ಇರುವ ಇತರ ಆರೋಪಿಗಳೂ ಪ್ರಭಾವಿಗಳಾಗಿದ್ದಾರೆ. ಅವರು ಕೂಡಾ ಬೇರೆ ರೀತಿ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇತ್ತೀಚೆಗೆ ನಟ ವಿನೋದ್ ರಾಜ್ ಅವರು ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಬಂದಿದ್ದರು. ಮೃತ ರೇಣುಕಾಸ್ವಾಮಿ ಪತ್ನಿ ಹೆಸರಿಗೆ 1 ಲಕ್ಷದ ಚೆಕ್ ಬರೆದುಕೊಟ್ಟಿದ್ದರು. ಆದರೆ ಈ ಭೇಟಿಯ ನಂತರ ವಿನೋದ್ ರಾಜ್ ಅವರು ದರ್ಶನ್ ಪರವಾಗಿ ರೇಣುಕಾಸ್ವಾಮಿ ಕುಟುಂಬವನ್ನು ಪ್ರಭಾವಿಸಿದ್ದಾರಾ ಎನ್ನುವ ಮಾತು ಕೇಳಿ ಬಂತು, ವಿನೋದ್ ರಾಜ್ ರಾಜಿ ಸಂಧಾನಕ್ಕೆ ಹೋಗಿದ್ದಾರೆ ಎಂದು ಭಾರೀ ಚರ್ಚೆಯಾಗಿತ್ತು. ಈ ಬಗ್ಗೆ ನಟ ಈಗ ಸ್ಪಷ್ಟನೆ ಕೊಟ್ಟಿದ್ದರು. ಜನ ವಿನೋದ್ ರಾಜ್ ಅವರು ಸಂಧಾನಕ್ಕೆ ಹೋಗಿದ್ದಾರೆ ಎಂದು ಚರ್ಚೆ ಮಾಡುತ್ತಿರುವಾಗ ಅವರು ಈ ಬಗ್ಗೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಹೋಗಿದ್ದು ರಾಜಿ ಸಂಧಾನಕ್ಕೆ ಅಲ್ಲ ಎಂದು ವಿನೋದ್ ರಾಜ್ ಸ್ಪಷ್ಟ ಪಡಿಸಿದ್ದಾರೆ. ಅಪಪ್ರಚಾರಗಳಿಗೆ ವಿಡಿಯೋ ಮೂಲಕ ಕ್ಲಾರಿಟಿ ಕೊಟ್ಟ ನಟ ವಿನೋದ್ ರಾಜ್ ಅವರು ನಾನು ನಾಲ್ಕೈದು ದಿನಗಳ ಹಿಂದೆ ದರ್ಶನ್ ಅವರನ್ನ ಜೈಲಿನಲ್ಲಿ ಭೇಟಿಯಾಗಿದ್ದೆ. ದರ್ಶನ್ ಭೇಟಿ ಮಾಡಿದ ನಂತರ ನಾನು ರೇಣುಕಾ ಸ್ವಾಮಿ ಮನೆಗೆ ಭೇಟಿ ಮಾಡಿದ್ದೆ ಎಂದಿದ್ದರು. ದರ್ಶನ್ ಕಲಾವಿದರು ಹಾಗೂ ನನಗೆ ಪರಿಚಯ ಇದ್ದಾರೆ. ಹೀಗಾಗಿ ನಾನು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದೆ. ರೇಣುಕಾ ಸ್ವಾಮಿ ಮಡದಿ ಗರ್ಭಿಣಿ ಇದ್ದಾರೆ ಹುಟ್ಟೋ ಮಗುವಿಗೆ ಏನಾದರೂ ಒಳ್ಳೆಯದು ಮಾಡಬೇಕು ಅನ್ನೋ ಉದ್ದೇಶದಿಂದ ಚಿತ್ರದುರ್ಗಕ್ಕೆ ಹೋಗಿದ್ದೆ ಎಂದಿದ್ದರು.