ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿರೋ ದೋಷಾರೋಪ ಪಟ್ಟಿಯಲ್ಲಿ ನಟ ದರ್ಶನ್ ಗ್ಯಾಂಗ್ ಕ್ರೌರ್ಯವಷ್ಟೇ ಅನಾವರಣಗೊಂಡಿಲ್ಲ. ರೇಣುಕಾಸ್ವಾಮಿಯ ವಿಕೃತ ಮನಸ್ಥಿತಿ ಹೇಗಿತ್ತು? ಅನ್ನೋದನ್ನು ಪೊಲೀಸರು ಸಾಕ್ಷ್ಯ ಸಮೇತ ಬಯಲು ಮಾಡಿದ್ದಾರೆ. ಗೌತಮ್ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದ ರೇಣುಕಾಸ್ವಾಮಿ, ಪ್ರತಿನಿತ್ಯ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳಿಸ್ತಿದ್ದ ಅನ್ನೋದು ದೋಷಾರೋಪ ಪಟ್ಟಿಯಲ್ಲಿ ಬಯಲಾಗಿದೆ.
ರೇಣುಕಾಸ್ವಾಮಿ ಅಶ್ಲೀಲ ಸಂದೇಶದಿಂದ ರೋಸಿಹೋಗಿದ್ದ ನಟಿ ಪವಿತ್ರಾಗೌಡ, ಗೆಳೆಯ ಪವನ್ ಮೂಲಕ ರೇಣುಕಾಸ್ವಾಮಿಯನ್ನು ಲಾಕ್ ಮಾಡಲು ಸ್ಕೆಚ್ ಹಾಕಿದ್ರು. ಇದರ ಭಾಗವಾಗಿಯೇ ಪವಿತ್ರಾಗೌಡ ಹೆಸರಲ್ಲಿ ಪವನ್ ಚಾಟಿಂಗ್ ಮಾಡಲು ಶುರು ಹಚ್ಕೊಂಡಿದ್ದ. ನೈಸಾಗಿ ಮಾತಾಡುತ್ತಲೇ ರೇಣುಕಾಸ್ವಾಮಿ ಎಲ್ಲಿ ಕೆಲಸ ಮಾಡ್ತಾನೆ? ಯಾವ ಊರಲ್ಲಿ ಕೆಲಸ ಮಾಡ್ತಾನೆ? ಅನ್ನೋದನ್ನು ಪವನ್ ಮೂಲಕ ಡಿ ಗ್ಯಾಂಗ್ ಪತ್ತೆ ಹಚ್ಚಿತ್ತು. ರೇಣುಕಾಸ್ವಾಮಿ ಲಾಕ್ ಆಗಿದ್ದು ಕೂಡ ಇಲ್ಲಿಯೇ. ಕಳೆದ ಜೂನ್ 5, 6 ಮತ್ತು 7ರಂದು ಬೆಳಗ್ಗೆವರೆಗೂ ಗೌತಮ್ ಆಲಿಯಾಸ್ ರೇಣುಕಾಸ್ವಾಮಿ ಮತ್ತು ಪವಿತ್ರಾಗೌಡ ಹೆಸರಲ್ಲಿ ಪವನ್ ಚಾಟ್ ನಡೆಸಿದ್ದ. ರೇಣುಕಾಸ್ವಾಮಿ ಲೊಕೇಶನ್ ಗೊತ್ತಾಗುತ್ತಲೇ, ಕಿಡ್ನ್ಯಾಪ್ಗೆ ಪ್ಲ್ಯಾನ್ ನಡೆದಿತ್ತು. ಶೆಡ್ನಲ್ಲಿ ಹಲ್ಲೆ ವೇಳೆ, ಈ ಬಗ್ಗೆ ಪ್ರಸ್ತಾಪಿಸಿ ದರ್ಶನ್ ಕೂಗಾಡಿದ್ದರು. ರೇಣುಕಾಸ್ವಾಮಿ ಮಾಡಿದ್ದ ಅಶ್ಲೀಲ ಮೆಸೇಜ್ಗಳನ್ನೇ ಓದುತ್ತಾ ರೇಣುಕಾ ಎದೆಗೆ ಒದ್ದು, ಮರ್ಮಾಂಗದ ಮೇಲೆ ಕಾಲಿಟ್ಟು ಕ್ರೌರ್ಯ ಮೆರೆದಿದ್ದರು. ತಿಂಗಳಿಗೆ 10 ಸಾವಿರ ಕೊಡ್ತೀಯೇನೋ? ಪವಿತ್ರಾ ದಿನದ ಖರ್ಚೇ 20 ಸಾವಿರ ಕಣೋ ಎನ್ನುತ್ತಾ ರೇಣುಕಾ ಎದೆಗೆ ದರ್ಶನ್ ಒದ್ದಿದ್ದರು ಎಂಬ ಎಲ್ಲ ಮಾಹಿತಿಗಳು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.