ಸಿಲಿಕಾನ್‌‌ ಸಿಟಿಯಲ್ಲಿ ಉಷ್ಣಾಂಶ ಏರಿಕೆಯಿಂದ ಸಾವು ಹೆಚ್ಚಳವಾಗುವ ಸಾಧ್ಯತೆ

11 (15)

ಬೆಂಗಳೂರು, ಮಾರ್ಚ್ 19: ಬೆಂಗ್ಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಮುಂದಿನ ದಿನಗಳಲ್ಲಿ ಉಷ್ಣಾಘಾತದಿಂದ (Heat Stroke) ಸಾವುಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಇತ್ತೀಚಿನ ಅಧ್ಯಯನ ವರದಿ ಇದನ್ನು ದೃಢಪಡಿಸಿದೆ. ಭಾರತದ ಹಲವಾರು ಪ್ರಮುಖ ನಗರಗಳು, ವಿಶೇಷವಾಗಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು, ಉಷ್ಣ ಅಲೆಗಳಿಂದ (Heat Wave) ತೀವ್ರವಾಗಿ ಪ್ರಭಾವಿತಗೊಳ್ಳಲಿವೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಈ ವರ್ಷ ಬೇಸಿಗೆ ಪ್ರಾರಂಭವಾಗುವ ಮುನ್ನವೇ ಬೆಂಗಳೂರಿನಲ್ಲಿ ತಾಪಮಾನವು 33.9 ಡಿಗ್ರಿ ಸೆಲ್ಸಿಯಸ್ ಗರಿಷ್ಠವಾಗಿ ದಾಖಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಬಿಸಿಲಿನ ಪ್ರಭಾವವನ್ನು ತಡೆಗಟ್ಟಲು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹವಾಮಾನ ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ನಗರವು ಉಷ್ಣ ಅಲೆಗಳ ತೀವ್ರತೆಯನ್ನು ಹೆಚ್ಚಾಗಿ ಅನುಭವಿಸಲಿದೆ.

ADVERTISEMENT
ADVERTISEMENT
ಅಧ್ಯಯನದ ಪ್ರಮುಖ ಅಂಶಗಳು

ಕಿಂಗ್ಸ್ ಕಾಲೇಜ್ ಲಂಡನ್, ಹಾರ್ವರ್ಡ್ ವಿಶ್ವವಿದ್ಯಾಲಯ, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ, ಉಷ್ಣ ಅಲೆಗಳ ಪರಿಣಾಮವು ಬಹುತೇಕ ನಗರ ಪ್ರದೇಶಗಳಲ್ಲಿ ಹೆಚ್ಚು ತೀವ್ರವಾಗಲಿದೆ ಎಂದು ತಿಳಿಸಲಾಗಿದೆ. ಬೆಂಗಳೂರಿನಂತಹ ನಗರಗಳು ಹೆಚ್ಚು ತಾಪಮಾನ ಹೆಚ್ಚಳವನ್ನು ಅನುಭವಿಸುತ್ತಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಉಷ್ಣಾಘಾತ ತಡೆಗಟ್ಟಲು ಬೇಕಾದ ಕ್ರಮಗಳು
 ತಾಪಮಾನ ನಿರೀಕ್ಷೆ

ಹವಾಮಾನ ಇಲಾಖೆ ವರದಿ ಪ್ರಕಾರ, ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ತಾಪಮಾನ 33-34 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದು. ಮಳೆಯ ಮುನ್ಸೂಚನೆ ಇದ್ದರೂ ಸಹ, ಅದರಿಂದ ತಾಪಮಾನದಲ್ಲಿ ತಕ್ಷಣವೇ ಶೀತಲತೆ ತರಲು ಸಾಧ್ಯವಿಲ್ಲ.

ಉಷ್ಣ ಅಲೆ ವಿರುದ್ಧ ದೀರ್ಘಾವಧಿಯ ಪರಿಹಾರ

ಉಷ್ಣ ಅಲೆಗಳನ್ನು ತಡೆಯಲು ದೀರ್ಘಾವಧಿಯ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ನಗರಗಳಲ್ಲಿ ಹಸಿರು ಆವರಣ ಹೆಚ್ಚಿಸುವುದು, ಜಲಾಶಯಗಳನ್ನು ರಕ್ಷಿಸುವುದು ಮತ್ತು ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ತಾಪಮಾನ ನಿಯಂತ್ರಿಸುವುದು ಮುಖ್ಯ.

ಬೆಂಗಳೂರಿನಂತಹ ತಾಪಮಾನ ಏರಿಕೆಯಾಗುತ್ತಿರುವ ನಗರಗಳಲ್ಲಿ ಜನಸಾಮಾನ್ಯರು ಎಚ್ಚರಿಕೆಯಿಂದ ಇರಬೇಕು. ಉಷ್ಣ ಅಲೆಗಳ ವಿರುದ್ಧ ಜಾಗೃತಿಯಿರಬೇಕು ಮತ್ತು ತಕ್ಷಣದ ಹಾಗೂ ದೀರ್ಘಾವಧಿಯ ಪರಿಹಾರಗಳನ್ನು ಅನುಸರಿಸಬೇಕು. ಇಲ್ಲವಾದಲ್ಲಿ ಆರೋಗ್ಯಕ್ಕೆ ಹಾಗೂ ಜೀವಿತಾವಧಿಗೆ ಅಪಾಯ ಎದುರಾಗಬಹುದು.

Exit mobile version