ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿರುವುದರಿಂದ ವಿವಿಧ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಣಹವೆ ಮುಂದುವರೆಯುವ ಜಿಲ್ಲೆಗಳು
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಕರ್ನಾಟಕದ ಪ್ರಮುಖ ನಗರಗಳ ತಾಪಮಾನ ವಿವರ:
- ಮೈಸೂರು: 15.7°C (ಕನಿಷ್ಠ)
- ಕಲಬುರಗಿ: 37.6°C (ಗರಿಷ್ಠ)
- ಕರಾವಳಿ: ಕಾರವಾರ, ಮಂಗಳೂರು, ಉಡುಪಿಯಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ.
- ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಗದಗ, ಬೆಂಗಳೂರು, ಮಂಡ್ಯ, ಹಾಸನ, ಮೈಸೂರು: ಇಲ್ಲಿ ಗರಿಷ್ಠ ತಾಪಮಾನ ಸಾಧಾರಣಕ್ಕಿಂತ ಹೆಚ್ಚಾಗಿದೆ.
ತಾಪಮಾನ ವಿವರ:
- ಗರಿಷ್ಠ ತಾಪಮಾನ:
- ಕರಾವಳಿಯಲ್ಲಿ 33-35°C
- ಬೀದರ್, ವಿಜಯಪುರ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿಯಲ್ಲಿ 33-35°C
- ಕಲಬುರಗಿ, ಬಾಗಲಕೋಟೆ, ಗದಗದಲ್ಲಿ 36-38°C
- ಕನಿಷ್ಠ ತಾಪಮಾನ:
- ಕರಾವಳಿಯಲ್ಲಿ 25-26°C
- ಬೀದರ್, ಧಾರವಾಡದಲ್ಲಿ 17-19°C
- ವಿಜಯಪುರ, ಬೆಳಗಾವಿ, ಗದಗ, ಬಾಗಲಕೋಟೆ, ಚಿಂತಾಮಣಿ, ಹಾವೇರಿ, ಕೊಪ್ಪಳ, ಮಂಡ್ಯ, ಚಿತ್ರದುರ್ಗ, ಹಾಸನ, ಮಡಿಕೇರಿ, ಶಿವಮೊಗ್ಗದಲ್ಲಿ 17-20°C
ಬೆಂಗಳೂರು ಹವಾಮಾನ:
ನಗದಲ್ಲಿ ಮೋಡಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದೆ.
- ಎಚ್ಎಎಲ್: ಗರಿಷ್ಠ 32.5°C, ಕನಿಷ್ಠ 16.6°C
- ನಗರ: ಗರಿಷ್ಠ 33.4°C, ಕನಿಷ್ಠ 19.4°C
- ಕೆಐಎಎಲ್: ಗರಿಷ್ಠ 32.7°C, ಕನಿಷ್ಠ 17.3°C
- ಜಿಕೆವಿಕೆ: ಗರಿಷ್ಠ 32.4°C, ಕನಿಷ್ಠ 18.2°C