ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯಿದ್ದು, ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ, ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ 23°C ಇರಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41°C ಮತ್ತು ಕನಿಷ್ಠ 29°C ದಾಖಲಾಗಲಿದೆ. ರಾಜ್ಯದ ವಿವಿಧ ನಗರಗಳ ತಾಪಮಾನ ವಿವರ ಈ ಕೆಳಗಿನಂತಿದೆ:
ಬೆಂಗಳೂರು: 34-23°C
ಮಂಗಳೂರು: 32-26°C
ಶಿವಮೊಗ್ಗ: 35-23°C
ಬೆಳಗಾವಿ: 33-22°C
ಮೈಸೂರು: 37-23°C
ಮಂಡ್ಯ: 36-23°C
ಮಡಿಕೇರಿ: 31-21°C
ರಾಮನಗರ: 35-23°C
ಹಾಸನ: 33-21°C
ಚಾಮರಾಜನಗರ: 36-23°C
ಚಿಕ್ಕಬಳ್ಳಾಪುರ: 34-22°C
ಕೋಲಾರ: 34-23°C
ತುಮಕೂರು: 34-23°C
ಉಡುಪಿ: 33-27°C
ಕಾರವಾರ: 34-28°C
ಚಿಕ್ಕಮಗಳೂರು: 31-20°C
ದಾವಣಗೆರೆ: 34-24°C
ಹುಬ್ಬಳ್ಳಿ: 36-24°C
ಚಿತ್ರದುರ್ಗ: 34-23°C
ಹಾವೇರಿ: 36-24°C
ಬಳ್ಳಾರಿ: 39-26°C
ಗದಗ: 36-24°C
ಕೊಪ್ಪಳ: 38-26°C
ರಾಯಚೂರು: 41-29°C
ಯಾದಗಿರಿ: 39-28°C
ವಿಜಯಪುರ: 39-28°C
ಬೀದರ್: 38-29°C
ಕಲಬುರಗಿ: 41-29°C
ಬಾಗಲಕೋಟೆ: 39-27°C
ಬಿಸಿಲಿನ ಜೊತೆಗೆ ಮಳೆಯಿಂದ ಕೆಲವು ಜಿಲ್ಲೆಗಳಲ್ಲಿ ತಂಪಾದ ವಾತಾವರಣ ನಿರೀಕ್ಷಿತವಾಗಿದೆ.