ಶ್ರೀರಾಮ ನವಮಿಯನ್ನು ಹಿಂದೂಗಳ ಪರಮ ಪವಿತ್ರ ಹಬ್ಬ ಎಂದು ಆಚರಿಸಲಾಗುತ್ತೆ. ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನು ಜನಿಸಿದ ದಿನ ಇದಾಗಿದೆ. ಈ ದಿನದಂದು ಪ್ರಾಣಿವಧೆ ಮಾಡಬಾರದು ಎಂಬ ನಂಬಿಕೆ ಇದೆ.ಈ ಹಿನ್ನೆಲೆ ಬಿಬಿಎಂಪಿ ನಗರ ಎಲ್ಲಾ ಕಸಾಯಿಖಾನೆ / ಮಾಂಸದಂಗಡಿಗಳಿಗೆ ಬುಧವಾರ ಏಪ್ರಿಲ್ 17ಕ್ಕೆ ಪ್ರಾಣಿವಧೆ ಮಾಡದಂತೆ ಸೂಚನೆ ನೀಡಿದೆ. ಈ ಪ್ರಯುಕ್ತ ಬೆಂಗಳೂರು ನಗರದಾದ್ಯಂತ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಿ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಆದೇಶ ಹೊರಡಿಸಿದೆ. ಇನ್ನು ವಿಶೇಷವಾಗಿ ಶ್ರೀರಾಮ ನವಮಿಯಂದು ಬೆಂಗಳೂರಿನ ಎಲ್ಲಾ ರಾಮ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೆರವಣಿಗೆ, ವ್ರತಗಳ ಆಚರಣೆ ಇರಲಿದ್ದು, ಇನ್ನು ಸ್ಥಳೀಯ ಸಂಘ ಸಂಸ್ಥೆಗಳು, ಯುವಕರ ಗುಂಪು, ಟ್ರಸ್ಟ್ಗಳು ತಮ್ಮ ವೃತ್ತದಲ್ಲಿ ಮಜ್ಜಿಗೆ, ಪಾನಕ ಹಂಚಿಕೆ ಮಾಡಲಿವೆ.