ರಾಜ್ಯದಲ್ಲಿ ಮಾತ್ರವಲ್ಲದೇ ಈಡೀ ದೇಶದಾದ್ಯಂತ ಸುದ್ದಿಯಾಗಿರುವ. ಪ್ರಜ್ವಲ್ ರೇವಣ್ಣಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ, ನಿನ್ನೆ ಎಸ್ಐಟಿಗೆ ಶರಣಾಗಿದ್ದು, ತನಿಖೆ ಶುರುವಾಗಿದೆ. ಇತ್ತ ಬಂಧನದ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಎಲ್ಲಿದ್ದಾರೆ ಅನ್ನೋದರ ಬಗ್ಗೆ ಮಾಹಿತಿಯೇ ಇಲ್ಲ.
ಇದೇ ಬೆನ್ನಲ್ಲೆ ಸಾಲಿಗ್ರಾಮದಲ್ಲಿರುವ ಭವಾನಿ ರೇವಣ್ಣರ ತವರು ಮನೆಗೂ ಬೀಗ ಹಾಕಲಾಗಿದೆ. ಮನೆಯ ಸದಸ್ಯರು ಯಾರೂ ಇಲ್ಲ, ತವರು ಮನೆಯಲ್ಲಿ ಭವಾನಿ ರೇವಣ್ಣ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಲ್ಲಿಯೂ ಭವಾನಿ ರೇವಣ್ಣ ಇಲ್ಲ ಅನ್ನೋದು ಗೊತ್ತಾಗಿದೆ.
ಪ್ರಜ್ವಲ್ ಪ್ರಕರಣ ಬೆಳಕಿಗೆ ಬಂದಾಗ ಹೊಳೆನರಸೀಪುರದಲ್ಲಿ ವಾಸ್ತವ್ಯ ಹೂಡಿದ್ದರು. ಕಿಡ್ನಾಪ್ ಪ್ರಕರಣ ಬೆಳಕಿಗೆ ಬಂದ ಬಳಿಕ ಎಲ್ಲಿದ್ದಾರೆ ಅನ್ನೋದ್ರ ಬಗ್ಗೆ ಯಾವುದೇ ಸುಳಿವು ಇಲ್ಲ. ಅವರ ಅಣ್ಣ ಮೃತಪಟ್ಟಾಗ ಭವಾನಿ ರೇವಣ್ಣ ಇಲ್ಲಿಗೆ ಆಗಮಿಸಿದ್ದರು. ಇದೀಗ ಸಾಲಿಗ್ರಾಮದ ತವರು ಮನೆ ಕೂಡ ಖಾಲಿ, ಖಾಲಿಯಾಗಿದೆ. ಬಂಧನದ ಭೀತಿಯಲ್ಲಿರುವ ಭವಾನಿ ತವರು ಮನೆಯಿಂದಲೂ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.