12 ಮಾರ್ಚ್ ರಾಶಿ ಭವಿಷ್ಯ : ಈ ರಾಶಿಗೆ ವೃತ್ತಿ ಬದಲಾವಣೆ, ಇಂದು ಮೌನವೇ ಲೇಸು!

Whatsapp image 2024 11 14 at 7.33.15 am

ಮಾರ್ಚ್​ 12 ಬುಧವಾರ, ದಿನವು ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಫಾಲ್ಗುಣ ಮಾಸ, ಶುಕ್ಲ ಪಕ್ಷದ ತ್ರಯೋದಶೀ ತಿಥಿಯಲ್ಲಿ ಬರುತ್ತಿದೆ. ಪಂಚಾಂಗದ ಪ್ರಕಾರ, ಈ ದಿನದ ಶುಭ-ಅಶುಭ ಯೋಗಗಳು, ನಕ್ಷತ್ರಗಳು, ಮತ್ತು ಕಾಲಮಾನಗಳು ನಿಮ್ಮ ದಿನಚರಿಯ ಮೇಲೆ ಪ್ರಭಾವ ಬೀರಲಿದೆ. ಮಾತಿನ ತಪ್ಪುಗಳಿಂದ ಬಾಂಧವ್ಯ ಹಾಳಾಗುವ ಸಾಧ್ಯತೆ ಇರುವ ಈ ದಿನದಲ್ಲಿ, ಮೌನವನ್ನು ಅನುಸರಿಸುವುದು ಲಾಭದಾಯಕ. ಪ್ರತಿ ರಾಶಿಗೆ ಅನುಗುಣವಾದ ಫಲಿತಾಂಶಗಳನ್ನು ಇಲ್ಲಿ ತಿಳಿಯೋಣ.

ಮೇಷ  ರಾಶಿ:

ADVERTISEMENT
ADVERTISEMENT

ನಿಮ್ಮ ಪ್ರಾಮಾಣಿಕತೆಗೆ ಪ್ರಶಂಸೆಯು ಸಿಗುವುದು. ಹೇಳಿದಷ್ಟು ಸುಲಭವಾಗಿ ಏನನ್ನೂ ಮಾಡಲಾಗದು. ವಾಹನ ಚಾಲನೆಯಲ್ಲಿ ಕಿರಿಕಿರಿ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು.ಕಲಹದ ಆರಂಭ, ವಾಹನ ಚಾಲನೆಯಲ್ಲಿ ತೊಂದರೆ. ಪ್ರಾಮಾಣಿಕತೆಗೆ ಪ್ರಶಂಸೆ.
ವೃಷಭ ರಾಶಿ:

ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. ಸ್ವಾರ್ಥಕ್ಕಾಗಿ ಯಾರನ್ನೂ ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿಯ ಬಗ್ಗೆ ಆಸಕ್ತಿ ಅಧಿಕವಾಗುವುದು. ವೃತ್ತಿಪರ ವ್ಯವಹಾರಗಳು ಲಾಭದಾಯಕ. ವಿದ್ಯಾರ್ಥಿಗಳಿಗೆ ವೈದ್ಯಕೀಯ ಆಸಕ್ತಿ. ಹಳೆಯ ಹೂಡಿಕೆಯಿಂದ ಲಾಭ.
ಮಿಥುನ ರಾಶಿ:

ಈ ರಾಶಿಯವರು ಅತಿಯಾದ ಮಾತು ನಿಮಗೆ ತೊಂದರೆಯನ್ನು ಕೊಟ್ಟೀತು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಸ್ನೇಹಿತರಿಂದ ನಿಮಗೆ ಬಹುಮಾನ ಸಿಗಬಹುದು. ದೂರದ ಊರಿಗೆ‌ ಒಬ್ಬರೇ ವಾಹನ ಚಲಾಯಿಸುವಿರಿ.ಉದ್ಯೋಗದಲ್ಲಿ ಭಡ್ತಿ ಸಾಧ್ಯ. ಆಭರಣ ಖರೀದಿಗೆ ಅವಕಾಶ.
ಕರ್ಕಾಟಕ ರಾಶಿ:

ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಸಂಗಾತಿಯಿಂದ ಅವಮಾನವಾಗುವುದು. ಸಹೋದರನಿಂದ ಉಡುಗೊರೆಯು ಸಿಗಬಹುದು.‌ ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು.ಸಹೋದರರಿಂದ ಉಡುಗೊರೆ. ವೃತ್ತಿಯಲ್ಲಿ ಶಾಂತಿ.
ಸಿಂಹ ರಾಶಿ:

ಈ ರಾಶಿಯವರಿಗೆ ನೂತನ ವಾಹನದಿಂದ ಅಹ್ಲಾದಕರವಾಗಿ ಇರುವಿರಿ. ಅಲ್ಪ ಕಾಲ ಮನೆಯಿಂದ ದೂರ ಉಳಿಯವಿರಿ. ಸಂಗಾತಿಯ ಸಣ್ಣ ಮಾತೂ ನಿಮಗೆ ದೋಷವಾಗಿ ಕಾಣಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ‌ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು.ವಾಹನ ಸುಖ, ಆರೋಗ್ಯದ ಸಣ್ಣ ತೊಂದರೆ. ಸರಳತೆ ಅನುಸರಿಸಿ.
ಕನ್ಯಾ ರಾಶಿ:

ನಿಮ್ಮ ಅಹಂಕಾರವು ಹತಾಶೆಯನ್ನು ತರಿಸೀತು. ಶತ್ರುಗಳ ಕಾರಣದಿಂದ ಖರ್ಚುನ್ನು ಮಾಡಬೇಕಾದ ಸ್ಥಿತಿಯು ಬರಲಿದೆ. ಮನಸ್ಸಿಗೆ ಬೇಕಾದ ನೆಮ್ಮದಿಯಿಂದ ಹುಡುಕಾಟದಲ್ಲಿ ಇರುವಿರಿ. ಧಾರ್ಮಿಕ ಕ್ಷೇತ್ರದ ಭೇಟಿಕೊಡುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಸಾಲದ ಒತ್ತಡ, ಹೊಸ ಸಂಬಂಧದತ್ತ ಒಲವು.
ತುಲಾ ರಾಶಿ:

ಈ ರಾಶಿಯವರು ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ಆರ್ಥಿಕತೆಯ ಬಲಕ್ಕಾಗಿ ಗೊತ್ತಿಲ್ಲದ ಕಾರ್ಯವನ್ನೂ ಮಾಡುವಿರಿ. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು. ಆಗುತ್ತದೆ ಎಂದು ಏನನ್ನಾದರೂ ಮಾಡುವುದು ಉಚಿತವಾಗದು.ವ್ಯಾಪಾರ ವಿಸ್ತರಣೆಯ ಯೋಜನೆ. ಹಣದ ಹರಿವು ಕಡಿಮೆ.
ವೃಶ್ಚಿಕ ರಾಶಿ:

ಈ ರಾಶಿಯವರಿಗೆ ಕಛೇರಿಯ ಕಲಹದಲ್ಲಿ ಭಾಗಿಯಾಗದೇ ನಿಮ್ಮಷ್ಟಕ್ಕೇ ಇದ್ದು ಬಿಡಿ. ತಂದೆಗೆ ಬೇಕಾದ ಧನಸಹಾಯವನ್ನು ನೀವು ಮಾಡುವಿರಿ. ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ.ತುರ್ತು ಪ್ರಯಾಣ, ಭೂಮಿಯಿಂದ ಆದಾಯ.
ಧನು ರಾಶಿ:

ಈ ರಾಶಿಯವರಿಗೆ ಸಾಲಗಾರದಿಂದ ವಂಚನೆ ಆಗುವ ಸಾಧ್ಯತೆ ಇದೆ. ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಪ್ರೇಮವು ನಿಮಗೆ ಬೇಕಾದಂತೆ ತಿರುವು ಪಡೆಯಬಹುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ.‌ ಸಿಟ್ಟನ್ನು ವೃತ್ತಿಯಲ್ಲಿ ತೋರಿಸುವುದು ಬೇಡ. ನೀವು ಆಯ್ಕೆ ಆಗಿದ್ದು ಯಾವುದಕ್ಕೋ ಕೆಲಸವು ಮತ್ಯಾವುದೋ ಆಗಲಿದೆ.ವ್ಯಕ್ತಿತ್ವ ಸುಧಾರಣೆ, ಪ್ರೇಮದಲ್ಲಿ ತಿರುವು.
ಮಕರ ರಾಶಿ:

ಈ ರಾಶಿಯವರಿಗೆ ಬಿಡಿಸಲಾಗದಷ್ಟು ಆಪ್ತವಾದ ಸಂಬಂಧವು ದೂರವಾಗಬಹುದು. ಇಂದು ಪ್ರಯಾಣದ ಆಯಾಸವು ಇರಲಿದೆ. ಶತ್ರುಗಳನ್ನು ಕ್ಷಮಿಸಿ, ಅವರ ಮೇಲೆ ನಿಮ್ಮ ದೃಷ್ಟಿಯು ಬೇಕಾಗುವುದು. ಉದ್ಯೋಗವನ್ನು ಬಿಟ್ಟು ಬೇರೆಯದನ್ನು ಯೋಚಿಸಲಾಗದು. ಪಾಲುದಾರಿಕೆಯಲ್ಲಿ ನಿಮ್ಮದೇ ಅಧಿಕವಾಗಿರುವುದು. ಮಂಗಳಕಾರ್ಯದ ಸಿದ್ಧತೆ. ಶತ್ರುಗಳನ್ನು ಕ್ಷಮಿಸಿ.
ಕುಂಭ ರಾಶಿ:

ಸರ್ಕಾರದ ಉದ್ಯೋಗಸ್ಥರು ಕೆಲವರ ಒತ್ತಡಕ್ಕೆ ಸಿಕ್ಕಿಕೊಳ್ಳಬೇಕಾಗುವುದು. ನಿಮ್ಮ‌ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಅನಿರೀಕ್ಷಿತವಾಗಿ ದೊರೆತವರು ನಿಮ್ಮ ಉದ್ಯಮದ ಭಾಗವಾಗಬಹುದು.ಕುಟುಂಬ ಸಮಸ್ಯೆಗಳ ಪರಿಹಾರ. ಮಕ್ಕಳಿಗೆ ಖರ್ಚು.
ಮೀನ ರಾಶಿ:

ವ್ಯಾಪಾರಸ್ಥರು ಅಧಿಕ ಖರ್ಚಿನ‌ ಕಾರಣ ಯಾವುದೇ ಕೆಲಸಕ್ಕೂ ಮುಂದಾಗಲಾರರು. ಬೋಧನ ಕಲೆಯನ್ನು ಸಿದ್ಧಿಸಿಕೊಳ್ಳುವಿರಿ. ಮಕ್ಕಳ‌ ಜೊತೆ ಸಾಮರಸ್ಯದ ಮಾತನಾಡಿ. ಸಾಲದ ಮರುಪಾವತಿಗೆ ಸೂಕ್ತ ಕ್ರಮದ ಅಗತ್ಯವಿರಲಿದೆ. ಯಾವ ಬದಲಾವಣೆಯನ್ನೂ ಸ್ವೀಕರಿಸುವ ಮನೋಭಾವ ಬರಬಹುದು.ವೃತ್ತಿ ಬದಲಾವಣೆಯ ಯೋಚನೆ. ಆಲಸ್ಯದಿಂದ ಕೆಲಸ ವಿಳಂಬ.

ಮುಖ್ಯ ಸಲಹೆ: ಇಂದು ಮಾತಿನಿಂದ ಹಿಂಸೆ, ಸಂಘರ್ಷಗಳನ್ನು ತಪ್ಪಿಸಿ. ಪ್ರೀತಿಪಾತ್ರರೊಂದಿಗಿನ ಸಂವಾದದಲ್ಲಿ ಸೂಕ್ಷ್ಮವಾಗಿರಿ.
ಆರೋಗ್ಯ: ನಿದ್ರಾಭಂಗ, ಒತ್ತಡದಿಂದ ದುಃಖ. ಸರಳ ಆಹಾರ, ನಿಯಮಿತ ವ್ಯಾಯಾಮವನ್ನು ಆಯ್ಕೆಮಾಡಿ.
ಹಣಕಾಸು: ಅನಿರೀಕ್ಷಿತ ಖರ್ಚುಗಳಿಗೆ ಸಿದ್ಧರಾಗಿ. ಹೂಡಿಕೆಗಳಲ್ಲಿ ಜಾಗರೂಕತೆ ಅಗತ್ಯ.
ವೃತ್ತಿ: ಸಹೋದ್ಯೋಗಿಗಳೊಂದಿಗಿನ ಸಂಘರ್ಷವನ್ನು ತಪ್ಪಿಸಿ. ಸರ್ಕಾರಿ ವ್ಯವಹಾರಗಳಲ್ಲಿ ಓಡಾಟ ಹೆಚ್ಚು.

ರಾಹು ಕಾಲ: 12:42 PM – 2:12 PM (ಈ ಸಮಯದಲ್ಲಿ ಮುಖ್ಯ ನಿರ್ಧಾರಗಳನ್ನು ತಪ್ಪಿಸಿ).
ಯಮಘಂಟ ಕಾಲ: 8:13 AM – 9:43 AM (ಹೊಸ ಯೋಜನೆಗಳನ್ನು ಆರಂಭಿಸಬೇಡಿ).
ಗುಳಿಕ ಕಾಲ: 11:13 AM – 12:42 PM (ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕತೆ).

12 ಮಾರ್ಚ್ 2025ರ ದಿನವು ಸವಾಲುಗಳು ಮತ್ತು ಅವಕಾಶಗಳ ಮಿಶ್ರಣವಾಗಿದೆ. ಪ್ರತಿ ರಾಶಿಯವರೂ ತಮ್ಮ ಸ್ವಭಾವಕ್ಕೆ ಅನುಗುಣವಾಗಿ ನಡೆದುಕೊಂಡರೆ, ದಿನದ ಅನಿಷ್ಟಗಳನ್ನು ತಪ್ಪಿಸಬಹುದು. ಮಾತಿನ ಮೇಲೆ ನಿಯಂತ್ರಣ, ಆತ್ಮವಿಶ್ವಾಸ, ಮತ್ತು ಸ್ಥಿರತೆ ಈ ದಿನದ ಮಂತ್ರವಾಗಿರಲಿ.

Exit mobile version